ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ನಿರ್ಧಾರ ವಾಪಸ್?! ಈ ಜೋಡಿಯನ್ನ ಮತ್ತೆ ಒಟ್ಟಿಗೆ ಸೇಸಿದ ʼಆʼ ಖ್ಯಾತ ವ್ಯಕ್ತಿ ಇವರೇ!

Dhanush and Aishwarya divorce decision: ತಮಿಳು ಹೀರೋ ಧನುಷ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ವಿಚ್ಛೇದನದ ನಿರ್ಧಾರವನ್ನು ಹಿಂಪಡೆದಿದ್ದಾರಾ? ಇವರಿಬ್ಬರು ಮತ್ತೆ ಭೇಟಿಯಾಗಲಿದ್ದಾರಾ.. ಇದಕ್ಕೆ ಮುಖ್ಯ ಕಾರಣ ಆ ಹೀರೋ..? ಹಾಗಾದ್ರೆ ಇದು ಎಷ್ಟು ಮಟ್ಟಿಗೆ ಸತ್ಯ ಎಂಬುದನ್ನು ಇಲ್ಲಿ ತಿಳಿಯೋಣ.. 

Written by - Savita M B | Last Updated : Oct 20, 2024, 09:01 AM IST
  • ನಿರ್ದೇಶಕ ಮತ್ತು ನಿರ್ಮಾಪಕ ಕಸ್ತೂರಿ ರಾಜಾ ಅವರ ಕಿರಿಯ ಮಗ ಧನುಷ್.
  • ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ನೆರವೇರಿದ್ದು ಎಲ್ಲರಿಗೂ ಗೊತ್ತೇ ಇದೆ.
ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ನಿರ್ಧಾರ ವಾಪಸ್?! ಈ ಜೋಡಿಯನ್ನ ಮತ್ತೆ ಒಟ್ಟಿಗೆ ಸೇಸಿದ ʼಆʼ ಖ್ಯಾತ ವ್ಯಕ್ತಿ ಇವರೇ! title=

Dhanush and Aishwarya: ನಿರ್ದೇಶಕ ಮತ್ತು ನಿರ್ಮಾಪಕ ಕಸ್ತೂರಿ ರಾಜಾ ಅವರ ಕಿರಿಯ ಮಗ ಧನುಷ್. ರಜನಿಕಾಂತ್ ಪುತ್ರಿ ಐಶ್ವರ್ಯಾ ಪ್ರೀತಿಸಿ ಮದುವೆಯಾದರು. ಇವರಿಬ್ಬರ ಮದುವೆ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ನೆರವೇರಿದ್ದು ಎಲ್ಲರಿಗೂ ಗೊತ್ತೇ ಇದೆ.

ಐಶ್ವರ್ಯಾಳನ್ನು ಮದುವೆಯಾದಾಗ ಧನುಷ್ ದೊಡ್ಡ ಹೀರೋ ಆಗಿರಲಿಲ್ಲ. ಆದರೆ ಮದುವೆಯ ನಂತರ ಧನುಷ್ ಸ್ಟಾರ್ ಆದರು. ಮದುವೆಯ ನಂತರ ಅವರು ನಿರ್ದೇಶಕ ಮತ್ತು ನಿರ್ಮಾಪಕರಾದರು. ಧನುಷ್ ಅವರ ಈ ಏರಿಕೆಗೆ ಐಶ್ವರ್ಯಾ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ-ಈ ರಕ್ತದ ಗುಂಪಿನವರು ಲೈಂಗಿಕ ಕ್ರಿಯೆಯಲ್ಲಿ ತುಂಬಾ ಆಕ್ವಿವ್‌..! ಇವರದ್ದು ಹಾರ್ಸ್‌ ಪವರ್‌..

ಅವರು ತಮ್ಮ ನಟನೆಯಿಂದ ಕಾಲಿವುಡ್ ಅನ್ನು ಮೀರಿ ಟಾಲಿವುಡ್, ಬಾಲಿವುಡ್ ಮತ್ತು ಹಾಲಿವುಡ್‌ಗೆ ಹೋದರು. 20 ವರ್ಷಗಳಿಂದ ಸುಖವಾಗಿದ್ದ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2022ರಲ್ಲಿ ಅವರು ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಇನ್ನು ಕೆಲವರು ನಾಯಕಿಯರ ಜೊತೆ ಧನುಷ್ ನ ನಿಕಟತೆಯೇ ವಿಚ್ಛೇದನಕ್ಕೆ ಕಾರಣ ಎಂದು ಹೇಳಿದರೆ, ಇನ್ನು ಕೆಲವರು ಐಶ್ವರ್ಯಾ ಧನುಷ್ ಕುಟುಂಬವನ್ನು ಗೌರವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಧನುಷ್ ಮತ್ತು ಐಶ್ವರ್ಯಾ ಈ ವಿಷಯದ ಬಗ್ಗೆ ಮಾತನಾಡಲಿಲ್ಲ. 

ರಾಜಿ ಮಾತುಕತೆಗಳ ಹೊರತಾಗಿಯೂ, ಇಬ್ಬರೂ ವಿಚ್ಛೇದನಕ್ಕೆ ಸಿದ್ಧ ಎಂದು ಹೇಳಿದ್ದರು.. ಕೆಲವು ತಿಂಗಳ ಹಿಂದೆ ಐಶ್ವರ್ಯಾ ವಿಚ್ಛೇದನಕ್ಕಾಗಿ ಚೆನ್ನೈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 6 ರಂದು ವಿಚಾರಣೆ ನಡೆಸಲಾಯಿತು. ಧನುಷ್ ಮತ್ತು ಐಶ್ವರ್ಯಾ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ಮುಂದೂಡಲಾಯಿತು.  

ಇದನ್ನೂ ಓದಿ-ಸಲ್ಮಾನ್ ಖಾನ್ ಬಳಿ ಈ ಕಾರು ಇರುವವರೆಗೂ ಅವರ ಒಂದು ಕೂದಲು ಅಲ್ಲಾಡಿಸಲಾಗಲ್ಲ..! ಇದು ಸಾಮಾನ್ಯ ಕಾರಲ್ಲ ಗುರು..

ಸದ್ಯದ ಮಾಹಿತಿ ಪ್ರಕಾರ ಧನುಷ್ ಮತ್ತು ಐಶ್ವರ್ಯ ವಿಚ್ಛೇದನದ ನಿರ್ಧಾರವನ್ನು ಹಿಂಪಡೆಯಲಿದ್ದಾರೆ. ಇದಕ್ಕೆ ರಜನಿಕಾಂತ್ ಅವರ ಆರೋಗ್ಯವೇ ಇದಕ್ಕೆ ಕಾರಣ ಎನ್ನುತ್ತಿವೆ ವಿಶ್ವಸನೀಯ ಮೂಲಗಳು. ರಜನಿಕಾಂತ್ ಅನಾರೋಗ್ಯಕ್ಕೆ ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂಬ ಚರ್ಚೆ ನಡೆಯುತ್ತಿರುವಾಗಲೇ ತಂದೆಯ ನೆಮ್ಮದಿಗಾಗಿ ಐಶ್ವರ್ಯಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.. 

ಮಕ್ಕಳು ಕೂಡ ತಮ್ಮ ತಂದೆ ತಾಯಿ ಜೊತೆಗಿರಬೇಕು ಎಂದು ಬಯಸುತ್ತಾರೆ. ಜೈಲರ್ ಚಿತ್ರಕ್ಕೆ ರಜನಿಕಾಂತ್ ಶುಭ ಹಾರೈಸಿದ್ದಲ್ಲದೆ, ಐಶ್ವರ್ಯಾ ಸಿನಿಮಾ ನೋಡಿದ ಅದೇ ಥಿಯೇಟರ್ ನಲ್ಲಿ ಧನುಷ್ ಕೂಡ ಸಿನಿಮಾ ವೀಕ್ಷಿಸಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ಮತ್ತೆ ಒಂದಾಗಲು ರೆಡಿಯಾಗಿದ್ದಾರೆ ಅನ್ನಿಸುತ್ತಿದೆ.. ಸದ್ಯದಲ್ಲೇ ಒಳ್ಳೆಯ ಸುದ್ದಿ ಬರಲಿದೆಯಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News