ಪ್ರಭುದೇವ ಅವರಂತೆ ಕಾಣುವ ಕಾರಣಕ್ಕೆ ನಯನತಾರಾ ವಿಘ್ನೇಶ್ ಶಿವನನ್ನು ಪ್ರೀತಿಸುತ್ತಿದ್ದರೇನೋ..! ಸೆಲೆಬ್ರಿಟಿ ಬಿಚ್ಚಿಟ್ಟ ಶಾಕಿಂಗ್ ಸೀಕ್ರೆಟ್

Nayanathara Love Story: ನಟಿ ನಯನತಾರಾ ವಿಘ್ನೇಶ್ ಶಿವನ್ ಅವರನ್ನು ಪ್ರಭುದೇವ ಅವರನ್ನು ಹೋಲುವ ಕಾರಣಕ್ಕಾಗಿ ಅವರನ್ನು ಪ್ರೀತಿಸುತ್ತಿದ್ದರು ಎಂದು ಸೆಲೆಬ್ರಿಟಿಯೊಬ್ಬರು ಹೇಳಿಕೊಂಡಿದ್ದಾರೆ.  

Written by - Savita M B | Last Updated : Oct 10, 2023, 03:59 PM IST
  • ತಮ್ಮ ದಿಟ್ಟ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ನಯನತಾರಾ
  • ಇವರಿಗೆ ಕಾಲಿವುಡ್ ನಲ್ಲಿ ಸತತ ಸಿನಿಮಾ ಅವಕಾಶಗಳು ಸಿಕ್ಕಿವೆ
  • ಇದೀಗ ಸೆಲೆಬ್ರಿಟಿಯೊಬ್ಬರು ಇವರ ಬಗ್ಗೆ ಶಾಕಿಂಗ್‌ ಹೇಳಿಕೆಯನ್ನು ನೀಡಿದ್ದಾರೆ
ಪ್ರಭುದೇವ ಅವರಂತೆ ಕಾಣುವ ಕಾರಣಕ್ಕೆ ನಯನತಾರಾ ವಿಘ್ನೇಶ್ ಶಿವನನ್ನು ಪ್ರೀತಿಸುತ್ತಿದ್ದರೇನೋ..! ಸೆಲೆಬ್ರಿಟಿ ಬಿಚ್ಚಿಟ್ಟ ಶಾಕಿಂಗ್ ಸೀಕ್ರೆಟ್ title=

Nayanathara: ಕೇರಳದವರಾದ ನಯನತಾರಾ ಹರಿ ನಿರ್ದೇಶನದ ಅಯ್ಯಾ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ತಮ್ಮ ದಿಟ್ಟ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ನಯನತಾರಾಗೆ ಕಾಲಿವುಡ್ ನಲ್ಲಿ ಸತತ ಸಿನಿಮಾ ಅವಕಾಶಗಳು ಸಿಕ್ಕಿವೆ. ತಮಿಳು ಚಿತ್ರರಂಗದಲ್ಲಿ ನಟಿ ನಯನತಾರಾ ಎಷ್ಟು ಫೇಮಸ್ ಆಗಿದ್ದಾರೋ ವಿವಾದಗಳಲ್ಲಿ ಅಷ್ಟೇ ಫೇಮಸ್.

ವಲ್ಲವನ್ ಚಿತ್ರದಲ್ಲಿ ನಟಿಸುವಾಗ ನಟಿ ನಯನತಾರಾ ನಟ ಸಿಂಬು ಅವರನ್ನು ಪ್ರೀತಿಸುತ್ತಿದ್ದರು. ಆ ವೇಳೆ ಇಬ್ಬರು ಬೆಡ್ ರೂಂನಲ್ಲಿ ಅನ್ಯೋನ್ಯವಾಗಿರುವ ಫೋಟೋಗಳು ಲೀಕ್ ಆಗಿ ಸಂಚಲನ ಮೂಡಿಸಿದ್ದಕ್ಕೆ ನಯನ್ ಸಿಂಬು ಜೊತೆಗಿನ ಗಾಸಿಪ್‌ ಸುಳ್ಳು ಎಂದು ಪ್ರತಿಕ್ರಿಯಿಸಿದ್ದರು. ಇದಾದ ನಂತರ ಮತ್ತೆ ಸಿನಿಮಾದತ್ತ ಗಮನ ಹರಿಸಲು ಆರಂಭಿಸಿದ ನಯನತಾರಾ, ಮುಂದೆ ಡ್ಯಾನ್ಸರ್ ಪ್ರಭುದೇವ ಅವರನ್ನು ಪ್ರೀತಿಸಿದ್ದರಂತೆ.

ಇದನ್ನೂ ಓದಿ-ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಭಾವಿಸಿದ್ದರು : ʼಕಾಸ್ಟಿಂಗ್ ಕೌಚ್‌ʼ ಬಗ್ಗೆ ಇಶಾ ಶಾಕಿಂಗ್‌ ಹೇಳಿಕೆ

‌ಆಗಲೇ ಮದುವೆಯಾಗಿ ಮಕ್ಕಳಿದ್ದ ಪ್ರಭುದೇವ ಜತೆ ನಯನತಾರಾ ರೊಮ್ಯಾನ್ಸ್ ಮಾಡಿದ್ದು ಆಗ ವಿವಾದಕ್ಕೆ ಕಾರಣವಾಗಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದಾಗ, ಹಠಾತ್ ಭಿನ್ನಾಭಿಪ್ರಾಯದಿಂದ ಅವರಿಬ್ಬರು ದೂರಾಗಿದ್ದರಂತೆ. ಇದಾದ ನಂತರ ಯಾರನ್ನೂ ಪ್ರೀತಿಸಲು ಇಷ್ಟಪಡದ ನಯನತಾರಾ, ಒಂದು ಸಿನಿಮಾದಲ್ಲಿ ನಟಿಸುವಾಗ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರಂತೆ.

7 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಕಳೆದ ವರ್ಷ ಮದುವೆಯಾಗಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಇವರು ಇಬ್ಬರು ಅವಳಿ ಮಕ್ಕಳನ್ನು ದತ್ತು ಪಡೆದಿದ್ದಾರೆ. ಇತ್ತೀಚೆಗಷ್ಟೇ ಮಲೇಷ್ಯಾದಲ್ಲಿ ನಯನ್ ಮತ್ತು ವಿಕ್ಕಿ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಇದನ್ನೂ ಓದಿ-ನಟರಾಗಿ ಪ್ರಸಿದ್ಧರಾಗುವ ಮೊದಲು ಈ ಸೌತ್‌ ಸ್ಟಾರ್‌ಗಳು ಮಾಡುತ್ತಿದ್ದ ಕೆಲಸಗಳೇನು ಗೊತ್ತಾ?

ಇನ್ನು ನಟಿ ನಯನತಾರಾ ಅವರು ವಿಘ್ನೇಶ್ ಶಿವನ್ ಪ್ರಭುದೇವ ಅವರಂತೆ ಕಾಣುವ ಕಾರಣ ಅವರನ್ನು ಪ್ರೀತಿಸುತ್ತಿದ್ದರು ಎಂದು ನಟ ಉದಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಒಂದು ಚಿತ್ರದಲ್ಲಿ ರಾಹುಲ್ ದತ್ತ ಪಾತ್ರದಲ್ಲಿ ಫೇಮಸ್ ಆಗಿರುವ ಉದಯ, ಚಿತ್ರದ ಶೂಟಿಂಗ್ ವೇಳೆ ವಿಘ್ನೇಶ್ ಶಿವನ್ ಗೆ ಕರೆ ಮಾಡಿ, ನಿಮ್ಮ ಎಲ್ಲಾ ನಡೆಗಳನ್ನು ನೋಡಿದಾಗ ಪ್ರಭುದೇವ ಅವರಂತೆ ಕಾಣುತ್ತೀರಿ ಎಂದಿದ್ದಾರೆ. 

ಅದೇ ರೀತಿ ನಯನತಾರಾಗೆ ವಿಘ್ನೇಶ್ ಶಿವನನ್ನು ಕಂಡರೆ ಪ್ರಭು ಮೇಷ್ಟ್ರಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ. ಇದರಿಂದಲೇ ನಯನತಾರಾ ವಿಕ್ಕಿಯನ್ನು ಪ್ರೀತಿಸಿದ್ದು, ಇದಕ್ಕೆಲ್ಲಾ ಕಾರಣ ನಾನೇ ಎಂದು ಉದಯ ಬಿಲ್ಡ್ ಅಪ್ ನೀಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News