ತಪ್ಪು ಮಾಡ್ತೀದಿಯಾ ಅಂತ ಆಂಕರ್‌ ಕತ್ತಿಗೆ ಚಾಕು ಹಿಡಿದ ನಟಿ ಟಬು..!

ʼಝಲಕ್ ದಿಖ್ಲಾ ಜಾʼ ದೀರ್ಘಕಾಲ ಪ್ರೇಕ್ಷಕರನ್ನು ರಂಜಿಸುತ್ತಿರುವ ಅತ್ಯಂತ ಜನಪ್ರಿಯ ನೃತ್ಯ ರಿಯಾಲಿಟಿ ಶೋ. ಸಾಕಷ್ಟು ಮನರಂಜನೆಯ ಜೊತೆಗೆ ಅದ್ಭುತ ನೃತ್ಯ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಘಟನೆಯೊಂದು ನಡೆದಿದ್ದು, ಖ್ಯಾತ ನಟಿ ಟಬು ಆಂಕರ್‌ ಮನೀಷ್‌ ಪಾಲ್‌ ಕುತ್ತಿಗೆಗೆ ಕತ್ತಿ ಹಿಡಿದ ಪ್ರಸಂಗ ನಡೆಯಿತು.

Written by - Krishna N K | Last Updated : Nov 12, 2022, 10:29 AM IST
  • ತಪ್ಪು ಮಾಡ್ತೀದಿಯಾ ಅಂತ ಆಂಕರ್‌ ಕತ್ತಿಗೆ ಚಾಕು ಹಿಡಿದ ನಟಿ ಟಬು
  • ʼಝಲಕ್ ದಿಖ್ಲಾ ಜಾʼ ಕಾರ್ಯಕ್ರಮದಲ್ಲಿ ನಡೆದ ಪ್ರಸಂಗ
  • ನಿರೂಪಕ ಮನೀಷ್‌ ಪಾಲ್‌ ಕುತ್ತಿಗೆಗೆ ಕತ್ತಿ ಹಿಡಿದ ಟಬು
ತಪ್ಪು ಮಾಡ್ತೀದಿಯಾ ಅಂತ ಆಂಕರ್‌ ಕತ್ತಿಗೆ ಚಾಕು ಹಿಡಿದ ನಟಿ ಟಬು..! title=

ಬೆಂಗಳೂರು : ʼಝಲಕ್ ದಿಖ್ಲಾ ಜಾʼ ದೀರ್ಘಕಾಲ ಪ್ರೇಕ್ಷಕರನ್ನು ರಂಜಿಸುತ್ತಿರುವ ಅತ್ಯಂತ ಜನಪ್ರಿಯ ನೃತ್ಯ ರಿಯಾಲಿಟಿ ಶೋ. ಸಾಕಷ್ಟು ಮನರಂಜನೆಯ ಜೊತೆಗೆ ಅದ್ಭುತ ನೃತ್ಯ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಘಟನೆಯೊಂದು ನಡೆದಿದ್ದು, ಖ್ಯಾತ ನಟಿ ಟಬು ಆಂಕರ್‌ ಮನೀಷ್‌ ಪಾಲ್‌ ಕುತ್ತಿಗೆಗೆ ಕತ್ತಿ ಹಿಡಿದ ಪ್ರಸಂಗ ನಡೆಯಿತು.

ಹೌದು.. ಇತ್ತೀಚಿಗೆ ʼಝಲಕ್ ದಿಖ್ಲಾ ಜಾʼ ಕಾರ್ಯಕ್ರಮಕ್ಕೆ ʼದೃಶ್ಯಂʼ 2 ರ ಚಿತ್ರತಂಡ ಅತಿಥಿಯಾಗಿ ಆಗಮಿಸಿತ್ತು. ಈ ವೇಳೆ ಟಬು ಅವರಿಗೆ ಟಾಸ್ಕ್‌ ಒಂದನ್ನು ನೀಡಲಾಗಿತ್ತು. ದೃಶ್ಯಂ 2 ಸಿನಿಮಾದ ಡೈಲಾಗ್‌ ಒಂದನ್ನು ಹೇಳುತ್ತಾ ಟಬು, ಮನೀಷ್‌ ಪಾಲ್‌ ಕುತ್ತಿಗೆಗೆ ಕತ್ತಿ ಹಿಡಿದರು. ಇದನ್ನು ಊಹಿಸದ ಮನೀಷ್‌ ಸೇರಿದಂತೆ ಮಾಧುರಿ ದೀಕ್ಷಿತ್‌ ಮತ್ತು ನೋರಾ ಫತೇಹಿ ಗಾಬರಿಗೊಂಡರು. ನಂತರ ಟಬು ನಗಲು ಪ್ರಾರಂಭಿಸಿದರು.

ಇದನ್ನೂ ಓದಿ: Kerebete: ಸ್ಯಾಂಡಲ್‌ವುಡ್‌ನ ಒಂದಿಷ್ಟು ಮಂದಿ ‘ಕೆರೆಬೇಟೆ’ಗೆ ಸಜ್ಜಾಗಿದ್ದು ಏಕೆ?

 
 
 
 

 
 
 
 
 
 
 
 
 
 
 

A post shared by ColorsTV (@colorstv)

ಇನ್ನು ಝಲಕ್ ದಿಖ್ಲಾ ಜಾದಲ್ಲಿ ಸ್ಪರ್ಧಿಗಳಿಗೆ ಸವಾಲನ್ನು ನೀಡಲಾಗುವುದು. ಇತ್ತೀಚಿನ ಸಂಚಿಕೆಯಲ್ಲಿ ತಬು ಮತ್ತು ಅಜಯ್ ದೇವಗನ್ ಅವರ 90 ರ ದಶಕದ ಹಾಡುಗಳ ಪ್ರದರ್ಶನ ನೀಡಲು ಟಾಸ್ಕ್‌ ನೀಡಲಾಗಿದೆ. ವಾರಾಂತ್ಯದ ಸಂಜೆ ಎಲ್ಲಾ ವೀಕ್ಷಕರನ್ನು ರಂಜಿಸಲು ದೃಶ್ಯಂನ ಇಡೀ ತಂಡವು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. ದೃಶ್ಯಂ 2 ನಲ್ಲಿ ಅಜಯ್‌ ದೇವಗನ್‌, ಟಬು, ಅಕ್ಷಯ್‌ ಖನ್ನಾ ಅಭಿನಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News