ʼಗಂಧದಗುಡಿʼ ಅಪ್ಪು ಜೊತೆ ʼತ್ರಿಬಲ್ ರೈಡಿಂಗ್ʼ ಹೊರಟ ಗೋಲ್ಡನ್ ಸ್ಟಾರ್ ಗಣೇಶ್..!

ಅಪ್ಪು ಅಂದ್ರೆ ಆಕಾಶ. ಅಪ್ಪು ಕನಸಿನ ಕೂಸು ಗಂಧದಗುಡಿ ಸಿನಿಮಾ ಇದೇ ಅಕ್ಟೋಬರ್ 28ಕ್ಕೆ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಅಭಿಮಾನಿಗಳು ಕೂಡ ಅಷ್ಟೇ ಕುತೂಹಲದಿಂದ ಸಿನಿಮಾ ನೋಡಲು ಕಾದಿದ್ದಾರೆ. ಅಪ್ಪು ಇಲ್ಲಿ ನಟನೆ ಮಾಡಿಲ್ಲ. 

Written by - YASHODHA POOJARI | Edited by - Krishna N K | Last Updated : Oct 15, 2022, 09:22 PM IST
  • ಅಪ್ಪು ಕನಸಿನ ಕೂಸು ಗಂಧದಗುಡಿ ಸಿನಿಮಾ ಇದೇ ಅಕ್ಟೋಬರ್ 28ಕ್ಕೆ ರಿಲೀಸ್
  • ಗಂಧದ ಗುಡಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ʼತ್ರಿಬಲ್ ರೈಡಿಂಗ್ʼ
  • 28ಕ್ಕೆ ಗಂಧದಗುಡಿ ಸಿನಿಮಾ ಜೊತೆ ಒಂದು ನಿಮಿಷದ ʼತ್ರಿಬಲ್ ರೈಡಿಂಗ್ʼ ಟ್ರೇಲರ್ ಕೂಡ ರಿಲೀಸ್
ʼಗಂಧದಗುಡಿʼ ಅಪ್ಪು ಜೊತೆ ʼತ್ರಿಬಲ್ ರೈಡಿಂಗ್ʼ ಹೊರಟ ಗೋಲ್ಡನ್ ಸ್ಟಾರ್ ಗಣೇಶ್..! title=

ಬೆಂಗಳೂರು : ಅಪ್ಪು ಅಂದ್ರೆ ಆಕಾಶ. ಅಪ್ಪು ಕನಸಿನ ಕೂಸು ಗಂಧದಗುಡಿ ಸಿನಿಮಾ ಇದೇ ಅಕ್ಟೋಬರ್ 28ಕ್ಕೆ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಅಭಿಮಾನಿಗಳು ಕೂಡ ಅಷ್ಟೇ ಕುತೂಹಲದಿಂದ ಸಿನಿಮಾ ನೋಡಲು ಕಾದಿದ್ದಾರೆ. ಅಪ್ಪು ಇಲ್ಲಿ ನಟನೆ ಮಾಡಿಲ್ಲ. ಬಣ್ಣ ಹಚ್ಚಿಲ್ಲ. ನಾಡಿನ ಕಾಡುಮೇಡು ಅಲೆದು ನಮ್ಮ ನಾಡಿನ ಸೊಬಗು ಮತ್ತು ಸಿರಿವಂತಿಕೆ ತೋರಿಸಲು ಅಕ್ಟೋಬರ್ 28ಕ್ಕೆ ಅಪ್ಪು ಬರುತ್ತಿದ್ದಾರೆ. ಇದೀಗ ಮ್ಯಾಟರ್ ಏನಪ್ಪಾ ಅಂದ್ರೆ ಅಪ್ಪು ಗಂಧದ ಗುಡಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ʼತ್ರಿಬಲ್ ರೈಡಿಂಗ್ʼ ಹೋಗಲು ಸಜ್ಜಾಗಿದ್ದಾರೆ.

ಅರೇ ಅದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಕೊಡ್ತೀವಿ ಕೇಳಿ. 28ಕ್ಕೆ  ಗಂಧದಗುಡಿ ಸಿನಿಮಾ ಜೊತೆ ಒಂದು ನಿಮಿಷದ ʼತ್ರಿಬಲ್ ರೈಡಿಂಗ್ʼ ಟ್ರೇಲರ್ ಕೂಡ ರಿಲೀಸ್ ಆಗುತ್ತಿದೆ. ಇದು ಅಭಿಮಾನಿಗಳ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ. ಗಾಳಿಪಟ-2 ಸಕ್ಸಸ್ ಬಳಿಕ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳನ್ನ ರಂಜಿಸಲು ತ್ರಿಬಲ್ ರೈಡಿಂಗ್ ಹೊರಟಿದ್ದಾರೆ. ಅದು ಕೂಡ ಮೂವರು ಹೀರೋಯಿನ್‌ಗಳ ಜೊತೆ ಗಣಿ ಯಾವ ರೀತಿ ಮಸ್ತಿ ಮಾಡಿದ್ದಾರೆ ಅನ್ನೋದನ್ನ ಸಿನಿಮಾ ರಿಲೀಸ್ ಆದ ಬಳಿಕ ಥೀಯೇಟರ್‌ಗೆ ಹೋಗಿ ನೋಡಿದ್ರೆ ಗೊತ್ತಾಗುತ್ತೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಡಾಲ್‌ ಹರ್ಷಿಕಾ ಕ್ಯೂಟ್‌ ಲುಕ್‌ಗೆ ಫ್ಯಾನ್ಸ್‌ ಕ್ಲೀನ್‌ ಬೋಲ್ಡ್‌..!

ದೀಪಾವಳಿ ಹಬ್ಬ ಮುಗಿಸಿ ಹಾಯಾಗಿ ತ್ರಿಬಲ್ ರೈಡಿಂಗ್ ಹೋಗಬಹುದು. ನವೆಂಬರ್ ತಿಂಗಳಲ್ಲಿ ʼತ್ರಿಬಲ್ ರೈಡಿಂಗ್ʼ ಸಿನಿಮಾ ರಿಲೀಸ್ ಆಗುತ್ತಿದೆ. ಹಲವು ವಿಶೇಷತೆಗಳಿಗೆ ಈ ಸಿನಿಮಾ ಕಾರಣವಾಗುತ್ತಿದೆ. ಯಾಕಂದ್ರೆ ಒಂದು ಸಿನಿಮಾದಲ್ಲಿ ಬಹುದೊಡ್ಡ ತಾರಾಬಳಗ ಇರೋದು ತುಂಬಾ ಕಡಿಮೆ. ಆದ್ರೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ದೊಡ್ಡ ದೊಡ್ಡ ನಟರು ನಿಮ್ಮನ್ನ ರಂಜಿಸಲು ಬರುತ್ತಿದ್ದಾರೆ. ಡೈರೆಕ್ಟರ್ ಮಹೇಶ್ ಗೌಡ ಕೈಚಳಕ ಈ ಸಿನಿಮಾದಲ್ಲಿ ವರ್ಕೌಟ್ ಆಗೋ ಸಾಧ್ಯತೆಯಿದೆ ಅನ್ನೋ ಮಾತು ಕೂಡ ಕೇಳಿಬರುತ್ತಿದೆ.

ಸಿನಿಮಾಗೆ ಏನು ಬೇಕು ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ಮಾಪಕ ರಾಮ್ ಗೋಪಾಲ್ ಕೊಡೋ ಮೂಲಕ ಸಿನಿಮಾ ರಿಚ್ ಆಗಿ ಬರಲು ಕಾರಣರಾಗಿದ್ದಾರೆ. ತ್ರಿಬಲ್ ರೈಡಿಂಗ್ ಆಕ್ಷನ್, ಥ್ರಿಲ್ಲರ್, ಕಾಮಿಡಿ, ಸ್ವಲ್ಪ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಸಿನಿಮಾವಾಗಿದ್ದು, ಸಾಧು ಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಉಮೇಶ್ ಮತ್ತು ಡಿಂಗ್ರಿ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News