Kiccha Sudeep: ಕಿಚ್ಚ ಸುದೀಪ್‌ಗೆ ಸರ್‌ಪ್ರೈಸ್‌ ಗಿಫ್ಟ್‌ ಕೊಟ್ಟ ಕಪಿಲ್‌ ದೇವ್‌!

Kapil Dev Gifted Bat to Kiccha Sudeep: ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ ರೌಂಡರ್‌, ಕ್ರಿಕೆಟ್‌ ಲೋಕದ ಲೆಜೆಂಡ್‌ ಕಪಿಲ್‌ ದೇವ್‌ ಈ ಉಡುಗೊರೆ ನೀಡಿದ್ದಾರೆ. ಈ ಬಗ್ಗೆ ಸುದೀಪ್‌ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.  

Written by - Chetana Devarmani | Last Updated : Jun 26, 2022, 11:42 AM IST
  • ಕಿಚ್ಚ ಸುದೀಪ್‌ಗೆ ಸಿಕ್ತು ಮತ್ತೊಂದು ಸರ್‌ಪ್ರೈಸ್‌!
  • ಕಪಿಲ್‌ ದೇವ್‌ ಕೊಟ್ಟ ಗಿಫ್ಟ್‌ ಏನು ಗೊತ್ತಾ?
  • ಉಡುಗೊರೆ ನೋಡಿ ಸಂತಸಗೊಂಡ ಕಿಚ್ಚ ಸುದೀಪ್‌
Kiccha Sudeep: ಕಿಚ್ಚ ಸುದೀಪ್‌ಗೆ ಸರ್‌ಪ್ರೈಸ್‌ ಗಿಫ್ಟ್‌ ಕೊಟ್ಟ ಕಪಿಲ್‌ ದೇವ್‌!  title=
ಕಿಚ್ಚ ಸುದೀಪ್‌

Kapil Dev Gifted Bat to Kiccha Sudeep: ಊರಲ್ಲಿ ಸದ್ಯ ಒಂದೇ ಹೆಸರು ಅದು ವಿಕ್ರಾಂತ್‌ ರೋಣ... ಎಲ್ಲೆಲ್ಲೂ ಬಾದ್‌ ಷಾ ಸುದೀಪ್‌ ಅಬ್ಬರ.. ಕಿಚ್ಚನ ಅಭಿನಯಕ್ಕೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರವರೆಗೂ ಸುದೀಪ್‌ಗೆ ಫ್ಯಾನ್ಸ್‌ ಬಳಗವಿದೆ. ಒಬ್ಬರಲ್ಲಾ ಇನ್ನೊಬ್ಬರು ಆಗಾಗ್ಗೆ ತಮ್ಮ ನೆಚ್ಚಿನ ಗೆಳೆಯನಿಗೆ ಸರ್‌ಪ್ರೈಸ್‌ ಗಿಫ್ಟ್‌ ಕೊಡುತ್ತಲೇ ಇರುತ್ತಾರೆ. ಇತ್ತೀಚೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್, ರಾಜಸ್ಥಾನ ರಾಯಲ್ಸ್ ತಂಡವನ್ನು 2022ರ ಐಪಿಎಲ್ ನಲ್ಲಿ ಏಕಾಂಗಿಯಾಗಿ ಫೈನಲ್ ಹಂತಕ್ಕೆ ತಂದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಉಡುಗೊರೆಯೊಂದನ್ನು ಸುದೀಪ್‌ಗೆ ನೀಡಿದ್ದರು. ಕಿಚ್ಚ ಸುದೀಪ್‌ಗೆ ತಮ್ಮ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. 

ಇದನ್ನೂ ಓದಿ: Vikrant Rona: ‘ವಿಕ್ರಾಂತ್ ರೋಣ‘ದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರಾ ಕಿಚ್ಚ? ಸುದೀಪ್‌ ಹೀರೋನಾ? ವಿಲನ್ನಾ!!

ಇದೀಗ ಇಂಡಿಯನ್‌ ಕ್ರಿಕೆಟ್‌ ದಿಗ್ಗಜರೊಬ್ಬರು ಸುದೀಪ್‌ಗೆ ಬಿಗ್‌ ಸರ್‌ಪ್ರೈಸ್‌ ಒಂದನ್ನು ನೀಡಿದ್ದಾರೆ. ಇದನ್ನು ಕಂಡ ಕಿಚ್ಚನ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ ರೌಂಡರ್‌, ಕ್ರಿಕೆಟ್‌ ಲೋಕದ ಲೆಜೆಂಡ್‌ ಕಪಿಲ್‌ ದೇವ್‌ ಈ ಉಡುಗೊರೆ ನೀಡಿದ್ದಾರೆ. ಈ ಬಗ್ಗೆ ಸುದೀಪ್‌ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.  

ಕಪಿಲ್‌ ದೇವ್‌ ಸುದೀಪ್‌ಗೆ ವಿಶೇಷ ಬ್ಯಾಟ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬ್ಯಾಟ್‌ ಬಲು ವಿಶೇಷತೆಯಿಂದ ಕೂಡಿದೆ. ಇದನ್ನು ಕಂಡು ಕಿಚ್ಚ ಫುಲ್‌ ಖುಷ್‌ ಆಗಿದ್ದಾರೆ. "ವಾವ್‌.. ಎಂಥ ಅದ್ಭುತ ಭಾನುವಾರ. ಧನ್ಯವಾದಗಳು ಕಪಿಲ್‌ ದೇವ್‌ ಸರ್‌. ಇದು ನಿಜವೇ! ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಇದು ಕ್ಲಾಸಿಕ್‌ ಪೀಸ್‌" ಎಂದು ಬ್ಯಾಟ್‌ನ ಫೋಟೋ ಜೊತೆ ಸುದೀಪ್‌ ಬರೆದುಕೊಂಡಿದ್ದಾರೆ.  

ಅಂದಹಾಗೆ ಕಪಿಲ್‌ ದೇವ್‌ ಸುದೀಪ್‌ಗೆ ಉಡುಗೊರೆ ಕೊಟ್ಟ ಬ್ಯಾಟ್‌ನಲ್ಲಿ ಅನೇಕ ಕ್ರಿಕೆಟ್‌ ಲೆಜೆಂಡ್‌ಗಳ ಆಟೋಗ್ರಾಫ್‌ ಇದೆ. ಜೋಸ್‌ ಬಟ್ಲರ್‌ ಬಳಿಕ ಕಪಿಲ್‌ ದೇವ್‌ ಕಳುಹಿಸಿದ ಈ ಗಿಫ್ಟ್‌ ನೋಡಿ ಸುದೀಪ್‌ ಸಂತಸಗೊಂಡಿದ್ದಾರೆ.  

 

 

ಸುದೀಪ್‌ ಅವರಿಗೆ ಕ್ರಿಕೆಟ್‌ ಎಂದರೆ ಬಲು ಇಷ್ಟ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಕೆಲ ದಿನಗಳ ಹಿಂದೆಯಷ್ಟೇ ಸುದೀಪ್‌ ಬೆಂಗಳೂರಿನಲ್ಲಿ ಪೊಲೀಸ್‌ ತಂಡದ ಜೊತೆ ಕ್ರಿಕೆಟ್‌ ಆಡಿದ್ದರು. ಹೀಗೆ ಆಗಾಗ್ಗೆ ಕಿಚ್ಚ ಸುದೀಪ್‌ ಬ್ಯಾಟ್‌ ಗ್ರೌಂಡ್‌ಗೆ ಇಳಿಯುತ್ತಿರುತ್ತಾರೆ. ಅಲ್ಲದೇ ಕ್ರಿಕೆಟ್‌ ಆಟಗಾರರ ಜೊತೆ ಉತ್ತಮ ಬಾಂಧವ್ಯವನ್ನು ಸಹ ಸುದೀಪ್‌ ಹೊಂದಿದ್ದಾರೆ ಎಂಬುದಕ್ಕೆ ಈ ಗಿಫ್ಟ್‌ಗಳೇ ಸಾಕ್ಷಿಯಾಗಿವೆ.

ಇದನ್ನೂ ಓದಿ: ವಿಕ್ರಾಂತ್ ರೋಣ ಬಗ್ಗೆ ಏನ್ ಹೇಳಿದ್ರು ಗಡಂಗ್ ರಕ್ಕಮ್ಮಾ..!

ಸದ್ಯ ಬಹು ನಿರೀಕ್ಷಿತ ವಿಕ್ರಾಂತ್‌ ರೋಣ ಸಿನಿಮಾದ ಪ್ರಚಾರದಲ್ಲಿ ಸುದೀಪ್‌ ಫುಲ್‌ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಚಿತ್ರತಂಡ ಇತ್ತೋಚೆಗಷ್ಟೆ ಟ್ರೇಲರ್‌ ಲಾಂಚ್‌ ಮಾಡಿತ್ತು. ವಿಕ್ರಾಂತ್‌ ರೋಣ ಚಿತ್ರದ ಟ್ರೇಲರ್‌ ಸಿನಿಮಾ ಮೇಲಿದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಈ ಸಿನಿಮಾದಲ್ಲಿ ಶ್ರೀಲಂಕಾ ಬೆಡಗಿ ಜಾಕ್ವೆಲಿನ್‌ ಫರ್ನಾಂಡಿಸ್‌ ನಟಿಸಿದ್ದಾರೆ. ಈ ಬಹು ನಿರೀಕ್ಷಿತ ಸಿನಿಮಾ ಜುಲೈ 28ಕ್ಕೆ ರಿಲೀಸ್‌ ಆಗಲಿದೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News