ಗಮನ ಸೆಳೆಯುತ್ತಿದೆ ʼಸ್ನೇಹರ್ಷಿʼ ಚಿತ್ರ : ಕನ್ನಡಕ್ಕೆ ಭರವಸೆಯ ʼಕಿರಣʼ

Kiran Narayan: ಸ್ನೇಹರ್ಷಿ, ಹೀಗಂದ್ರೆ, ಸ್ನೇಹದ ಋಷಿ ಅಂತಾ ಅರ್ಥ.. ಅಂದು ಋಷಿ ಮುನಿಗಳೆಲ್ಲಾ ತಪಸ್ಸು, ಹೋಮ, ಹವನ ಮಾಡಿ ದೇವತೆಗಳಿಗೆ ಶಕ್ತಿ ತುಂಬುತ್ತಿದ್ರು, ಹಾಗೆಯೆ ನಾಯಕ ಇಲ್ಲಿ ತಮ್ಮ ಇಡೀ ಸ್ನೇಹ ಅನ್ನೋ ಅರ್ಥಕ್ಕೆನ್ನೇ ಶಕ್ತಿ ತುಂಬುವಂತ ಕಾರ್ಯ ಮಾಡ್ತಿದ್ದಾರೆ. 

Written by - YASHODHA POOJARI | Last Updated : Oct 25, 2023, 04:49 PM IST
  • ಸ್ನೇಹರ್ಷಿ ಸಿನಿಮಾ ಹಾಡುಗಳಿಂದಲೇ ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ.
  • ಸ್ನೇಹರ್ಷಿ, ಹೀಗಂದ್ರೆ, ಸ್ನೇಹದ ಋಷಿ ಅಂತಾ ಅರ್ಥ.
  • ರಂಗಭೂಮಿ ಕಲಾವಿದ ಕಿರಣ್ ನಾರಾಯಣ್ ನಟನೆಯ ಸ್ನೇಹರ್ಷಿ ಸಿನಿಮಾ.
ಗಮನ ಸೆಳೆಯುತ್ತಿದೆ ʼಸ್ನೇಹರ್ಷಿʼ ಚಿತ್ರ : ಕನ್ನಡಕ್ಕೆ ಭರವಸೆಯ ʼಕಿರಣʼ title=

Sneharshi movie : ಹೊಸಬರು ಸಿನಿಮಾ ಮಾಡ್ತಿದ್ದಾರೆ, ಅವರ ಚಿತ್ರಗಳು ಬರ್ತೀದೆ ಅಂದ್ರೆ ಅಲ್ಲಿ ನೂರೆಮಟು ನಿರೀಕ್ಷೆಗಳಿರುತ್ತವೆ. ಯಾಕಂದ್ರೆ, ಅವರಿಂದ ಹೊಸತವನ್ನ ನಿರೀಕ್ಷಿಸ್ಬಹುದು ಅನ್ನೋ ನಂಬಿಕೆ. ಅಂತಹ ನಂಬಿಕೆ ಮೇಲೆಯೆ ಸುದ್ದಿ ಮಾಡ್ತಿರೋ ಸಿನಿಮಾ ಸ್ನೇಹರ್ಷಿ, ಸದ್ಯ ಹಾಡುಗಳಿಂದಲೇ ಈ ಚಿತ್ರ ಸ್ಯಾಂಡಲ್ವುಡ್ನಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ. 

ಸ್ನೇಹರ್ಷಿ, ಹೀಗಂದ್ರೆ, ಸ್ನೇಹದ ಋಷಿ ಅಂತಾ ಅರ್ಥ.. ಅಂದು ಋಷಿ ಮುನಿಗಳೆಲ್ಲಾ ತಪಸ್ಸು, ಹೋಮ, ಹವನ ಮಾಡಿ ದೇವತೆಗಳಿಗೆ ಶಕ್ತಿ ತುಂಬುತ್ತಿದ್ರ್, ಹಾಗೆಯೆ ನಾಯಕ ಇಲ್ಲಿ ತಮ್ಮ ಇಡೀ ಸ್ನೇಹ ಅನ್ನೋ ಅರ್ಥಕ್ಕೆನ್ನೇ ಶಕ್ತಿ ತುಂಬುವಂತ ಕಾರ್ಯ ಮಾಡ್ತಿದ್ದಾರೆ. ರಂಗಭೂಮಿ ಕಲಾವಿದ ಕಿರಣ್ ನಾರಾಯಣ್ ನಾಯಕನಾಗಿ, ನಿರ್ದೇಶಕನಾಗಿ ಜೊತೆಗೆ ಶ್ರೀ ಮೇಲು ಕೋಟೆ ಜಲುವ ನಾರಾಯಣ ವೆಂಚರ್ಸ್ ನಿಂದ ತಾವೇ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕನಾಗಿಯೂ ಕುಡ ಸ್ಯಾಂಡಲ್ವುಡ್ಗೆ ಎಂಟ್ರಿಕೊಡ್ತಿದ್ದಾರೆ..

ಇದನ್ನೂ ಓದಿ: ನಾನು ಧರಿಸಿದ್ದ ಹುಲಿ ಉಗುರು ನಕಲಿ, ನೈಜವಾದುದ್ದಲ್ಲ : ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟನೆ

ಸದ್ಯ ಚಿತ್ರ ಹಾಡುಗಳು ರಿಲೀಸ್ಆಗಿದ್ದು ಸಾಕಷ್ಟು ಗಮನ ಸೆಲೆಯುತ್ತಿವೆ.. ಗಾಯಕ ನವೀನ್ ಸಜ್ಜು ಧ್ವನಿಯಾಗಿರುವ ತಮಟೆ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸ್ತಿದ್ರೆ, ಅರಿವಿಲ್ಲದೆ ಶಧುರುವಾಗಿದೆ ಅನ್ನೊ ರೊಮ್ಯಾಂಟಿಕ್ ಸಾಂಗ್ ಮಿಲಿಯನ್ಸ್ ಗಟ್ಟಲೆ ವೀವ್ಸ್ ಪಡೆಯುವ ಮೂಲಕ ಪ್ರೇಮಿಗಳ ಹೃದಯಲ್ಲಿ ಝೇಂಕರಿಸ್ತಿದೆ. ಅಫ್ಕೋರ್ಸ್ ಈ ಹಾಡು ಮುಂದಿನ ದಿನಗಳಲ್ಲಿ ಪ್ರೇಮಿಗಳ ಆಂಥಮ್ ಸಾಂಗ್ ಆದ್ರು ಅಚ್ಚರಿ ಪಡ್ಬೇಕಿಲ್ಲಾ.. ಇನ್ನು ಹಾಡಿನಲ್ಲಿ ಕಿರಣ್ ನಾರಾಯಣ್ ಅವರ ಅಪೀರಿಯನ್ಸ್, ಲುಕ್ಸ್ ಸಖತ್ ಇಂಟ್ರಸ್ಟಿಂಗ್ ಆಗಿದ್ದು, ಕನ್ನಡಕೊಬ್ಬ ಪ್ರತಿಭಾನ್ವಿತಾ ಸುರ ಸುಂದರ ನಟ ಸಿಕ್ಕಿದ್ದಂತಾಗಿದೆ,,

ಚಿತ್ರದಲ್ಲಿ ಫ್ರೆಂಡಶಿಪ್ ಮೇನ್ ಥೀಮ್ ಆದ್ರೂ.. ಇಲ್ಲೊಂದು ಸಮಾಜಿಕ ಕಳಕಳಿ ಇದೆ,, ಹೌದು, ಪ್ರತೀದಿನ ನಾವು ಈ ಸಮಾಜದಲ್ಲಿ ಸಾಕಷ್ಟು ಶ್ರಮ ಜೀವಿಗಳನ್ನ ನೋಡ್ತಾನೆ ಇರ್ತಿವಿ,. ಆದ್ರೆ, ಅವರ ಸಮಸ್ಯೆ ಏನು? ಅವರ ಬದುಕು ಹೇಗೆ? ಅನ್ನೊದು ನಮ್ ಗಮನಕ್ಕೆ ಬರಲ್ಲಾ,, ಮತ್ತೆ ಈ ವರ್ಗದ ಜನರಿಂದಾಗಿನೆ ನಮ್ಮೇಲ್ಲರ ದಿನ ನಿತ್ಯದ ಜೀವನ ಸುಸೂತ್ರವಾಗ ನಡೆಯುತ್ತಿರುವೆ. ಅಂತವರ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲುತ್ತಿದೆ..

ಇದನ್ನೂ ಓದಿ: BBK 10: ದರಿದ್ರ ಅನ್‌ಲಕ್ಕಿ ಬೇಬಿ.. ಮನೆಯವರ ಚುಚ್ಚು ಮಾತು ನೆನೆದು ಕಣ್ಣೀರಿಟ್ಟ ʻನಾಗಿಣಿʼ

ಇನ್ನು ಚಿತ್ರದಲ್ಲಿ ಕಿರಣ್ ನಾರಾಯಣ್ ನಾಯಕಿಯಾಗಿ ಸಂಜನಾ ಜೊತೆಯಾಗಿದ್ರೆ, ಪ್ರಮುಖ ಪಾತ್ರಗಳಲ್ಲಿ ಸುದಾ ಬೆಳವಾಡಿ, ಹಿರಿಯ ನಟ ಉಮೇಶ್, ನಾಗತಿಹಳ್ಳಿ ಜಯಪ್ರಕಾಶ್, ಚಕ್ರವರ್ತಿ, ನವೀನ್, ದೇವಕಿ, ರಂಗನಾಥ್, ಮಾರುತಿ, ಸೌಮ್ಯ ಕಾಣಿಕೊಂಡಿದ್ದಾರೆ.. ಟೆಕ್ನಿಷಿಕಲಿ ಚಿತ್ರ ಸಖತ್ ಸ್ಟ್ರಾಂಗ್ ಆಗಿದ್ದು, ರವಿ ಕಿಶೋರ್ ಕ್ಯಾಮರಾ ವರ್ಕ್ಸ್, ಆಕಾಶ್ ಅಯ್ಯಪ್ಪ ಅವರ ಸಂಗೀತ, ಮೋಹನ್ ಭಜರಂಗಿ ಅವರ ನೃತ್ಯ ಎಲ್ಲರ ಗಮನ ಸೆಳೆಯುತ್ತಿದೆ.. ಈಗಾಗ್ಲೇ ಶೂಟಿಂಗ್ ಕಂಪ್ಲಿಟ್ ಮಾಡಿ, ಸೆನ್ಸಾರ್ನಲ್ಲಿ ಪಾಸ್ಆಗಿ, ಅದ್ಭುತ ಟ್ರೇಲರ್ಗೆ ತೋರಿಸಲು ಸಿದ್ಧತೆ ನಡೆಸುತ್ತಿದೆ ಚಿತ್ರತಂಡ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News