ʻದಿಯಾʼಗೆ ಆದ ಅನ್ಯಾಯ ʻಜೂನಿʼಗೆ ಆಗಬಾರದು.. ಕೈ ಮುಗಿದ ಪೃಥ್ವಿ ಅಂಬಾರ್!

Juni Movie: ನವಿರಾದ ಪ್ರೇಮಕಥೆ ಜೂನಿ ಸಿನಿಮಾಗೆ ವಿಮರ್ಶಕರ ವಲಯದಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೈಭವ್ ಮಹಾದೇವ್ ಸಾರಥ್ಯದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಹಾಗೂ ರಿಷಿಕಾ ಜೋಡಿಯಾಗಿ ನಟಿಸಿದ್ದರು.

Written by - YASHODHA POOJARI | Last Updated : Feb 11, 2024, 12:49 PM IST
  • ಪ್ರೇಕ್ಷಕರಿಗೆ ಮನವಿ ಮಾಡಿದ ನಟ ಪೃಥ್ವಿ ಅಂಬಾರ್
  • 'ದಿಯಾ'ಗೆ ಆದ ಅನ್ಯಾಯ ಜೂನಿಗೆ ಆಗಬಾರದು
  • ಥಿಯೇಟರ್‌ಗೆ ಬಂದು 'ಜೂನಿ' ನೋಡಿ ಎಂದ ಕರಾವಳಿ ಹುಡ್ಗ
ʻದಿಯಾʼಗೆ ಆದ ಅನ್ಯಾಯ ʻಜೂನಿʼಗೆ ಆಗಬಾರದು.. ಕೈ ಮುಗಿದ ಪೃಥ್ವಿ ಅಂಬಾರ್! title=

Juni Movie: ನವಿರಾದ ಪ್ರೇಮಕಥೆ ಜೂನಿ ಸಿನಿಮಾಗೆ ವಿಮರ್ಶಕರ ವಲಯದಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೈಭವ್ ಮಹಾದೇವ್ ಸಾರಥ್ಯದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಹಾಗೂ ರಿಷಿಕಾ ಜೋಡಿಯಾಗಿ ನಟಿಸಿದ್ದರು. ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಜೂನಿ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಮೊದಲ ದಿನ ಒಳ್ಳೆ ಓಪನಿಂಗ್ ಪಡೆದುಕೊಂಡ ಚಿತ್ರಕ್ಕೀಗ ಪ್ರೇಕ್ಷಕರ ಕೊರತೆ ಎದುರಾಗಿದೆ. ಈ ಬಗ್ಗೆ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿರುವ ಪೃಥ್ವಿ, ದಿಯಾ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಅದೇ ತರ ಜೂನಿ ಸಿನಿಮಾವನ್ನು ಮಾಡಬೇಡಿ. ಥಿಯೇಟರ್ ನಲ್ಲೇ ಬಂದು ನೋಡಿ ಎಂದು ಪ್ರೇಕ್ಷಕರಿಗೆ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ತೆರೆದ ಬೆನ್ನು ತೋರಿಸಿದ Bigg Boss ಬ್ಯೂಟಿ.. ಫೋಟೋ ಸಖತ್‌ ವೈರಲ್! 

ಹೊಸಬರು ಹೊಸ ಪ್ರಯೋಗ ಮಾಡ್ತಾರೆ. ಅವರಿಗೆ ಬೆಂಬಲವಾಗಿ‌ ನಿಲ್ಲಬೇಕು. ಒಳ್ಳೆ ರಿವ್ಯೂ ಬಂದಾಗ ಜನ ಥಿಯೇಟರ್ ಗೆ ಬಂದು ಚಿತ್ರ ವೀಕ್ಷಿಸಬೇಕು. ಜೂನಿ ಈ ವರ್ಷದ ಅದ್ಭುತ ಸಿನಿಮಾಗಳಲ್ಲಿ ಒಂದು.‌ ಮಾನಸಿಕ ರೋಗ ಇರುವ ಹುಡುಗಿಯಾಗಿ ರಿಷಿಕಾ ಹಾಗೂ ಆಕೆಯನ್ನು ಹುಚ್ಚನಂತೆ ಪ್ರೀತಿಸುವ  ಪಾರ್ಥನಾಗಿ ಪೃಥ್ವಿ ಅಮೋಘವಾಗಿ ಅಭಿನಯಿಸಿದ್ದಾರೆ. ಹೊಸತನ, ಹಗುರ, ಲವಲವಿಕೆಯಿಂದ ಕೂಡಿರುವ ಜೂನಿ ಥಿಯೇಟರ್ ನಲ್ಲಿ‌ ನೋಡಲೇಬೇಕಾದ ಚಿತ್ರ. ಆದರೆ ಪ್ರೇಕ್ಷಕರು ಕೊರತೆಯನ್ನು ಚಿತ್ರತಂಡ ಎದುರಿಸುತ್ತಿದೆ. ಹೀಗಾಗಿ ನಾಯಕ ಪೃಥ್ವಿ ಸಿನಿರಸಿಕರಿಗೆ ಜೂನಿ ಚಿತ್ರ ನೋಡುವಂತೆ ಪ್ರೀತಿಯಿಂದ ಮನವಿ ಮಾಡಿಕೊಂಡಿದ್ದಾರೆ.

ಜೂನಿ ಚಿತ್ರದಲ್ಲಿ ವಿಶೇಷ ಲವ್ ಸ್ಟೋರಿ ಇದೆ. ಇದನ್ನ ಅಷ್ಟೇ ಸುಂದರವಾಗಿಯೇ ಪರಸೆಂಟ್ ಮಾಡಿದ್ದಾರೆ ನವ ನಿರ್ದೇಶಕ ವೈಭವ್ ಮಹಾದೇವ್. ಜೂನಿ ಅನ್ನೋದು ಚಿತ್ರದ ನಾಯಕಿಯ ಹೆಸರಾಗಿದೆ. ಅದನ್ನೆ ಇಲ್ಲಿ ಟೈಟಲ್ ಮಾಡಲಾಗಿದೆ. ದಿಯಾ ಚಿತ್ರದಲ್ಲೂ ನಾಯಕಿಯ ಹೆಸರು ದಿಯಾ ಅಂತಲೇ ಇತ್ತು. ಹಾಗಾಗಿಯೇ ಇದು ಕೂಡ ನಾಯಕಿ ಸುತ್ತವೇ ಇರೋ ಕಥೆ. ನಕುಲ್ ಅಭಯಂಕರ್ ಬೊಂಬಾಟ್ ಸಂಗೀತ . ಅಜಿನ್ ಬಿ, ಜಿತಿನ್ ದಾಸ್ ಮೋಡಿ ಮಾಡುವ ಕ್ಯಾಮರಾ ವರ್ಕ್ ಮಾಡಿದ್ದಾರೆ. ಇಷ್ಟೆಲ್ಲಾ ಎಲಿಮೆಂಟ್ ಇದ್ದರು ಜೂನಿಯತ್ತ ಚಿತ್ರಪ್ರೇಮಿಗಳು ಹೆಜ್ಜೆ ಇಡುತ್ತಿಲ್ಲ. ಒಳ್ಳೆ ಸಿನಿಮಾವನ್ನು ಪ್ರೇಕ್ಷಕಪ್ರಭು ಯಾವತ್ತು ಕೈಬಿಟ್ಟಿಲ್ಲ ಎಂಬ ನಿರೀಕ್ಷೆಯಲ್ಲಿ ಜೂನಿ ಸಿನಿಬಳಗ.

ಇದನ್ನೂ ಓದಿ: ಖ್ಯಾತ ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿಗೆ ಬ್ರೇನ್‌ ಸ್ಟ್ರೋಕ್‌, ಆಸ್ಪತ್ರೆಗೆ ದಾಖಲು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News