Pawan Kalyan : ಪವನ್‌ ಕಲ್ಯಾಣ್‌ ವಿರುದ್ಧ ಆರ್‌ಜಿವಿ ಕಣಕ್ಕೆ..! ಕುತೂಹಲ ಕೆರಳಿಸಿದ ಆಂಧ್ರ ಚುನಾವಣೆ

RGV Political entry : ಅಂಧ್ರಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆ ಜನಸೇನಾ ಪಕ್ಷದಿಂದ ಪವನ್‌ ಕಲ್ಯಾಣ್‌ ಅವರು ಪಿಠಾಪುರದಿಂದ ಕಣಕ್ಕಿಳಿಯಲಿದ್ದಾರೆ. ಇದೇ ವೇಳೆ ರಾಮ್‌ ಗೋಪಾಲ್‌ ವರ್ಮಾ ಸಹ ತಾವೂ ಪಿಠಾಪುರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

Written by - Krishna N K | Last Updated : Mar 14, 2024, 06:37 PM IST
    • ಜನಸೇನಾ ಪಕ್ಷ ಮುಖ್ಯಸ್ಥ ಪವನ್ ಕಲ್ಯಾಣ್ ಕ್ಷೇತ್ರ ಘೋಷಣೆ
    • ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಮ ಗೋಪಾಲ್‌ ವರ್ಮಾ
    • ಪಿಠಾಪುರದಿಂದ ನಟ ಪವನ್‌ ಕಲ್ಯಾಣ ಚುನಾವಣಾ ಕಣಕ್ಕೆ
Pawan Kalyan : ಪವನ್‌ ಕಲ್ಯಾಣ್‌ ವಿರುದ್ಧ ಆರ್‌ಜಿವಿ ಕಣಕ್ಕೆ..! ಕುತೂಹಲ ಕೆರಳಿಸಿದ ಆಂಧ್ರ ಚುನಾವಣೆ title=
Pawan kalyan

Pawan Kalyan : ಜನಸೇನಾ ಪಕ್ಷ ಮುಖ್ಯಸ್ಥ ಪವನ್ ಕಲ್ಯಾಣ್ ಕ್ಷೇತ್ರ ಘೋಷಣೆ ಬೆನ್ನಲ್ಲೆ ಖ್ಯಾತ ನಿರ್ದೇಶಕ ರಾಮ ಗೋಪಾಲ್‌ ವರ್ಮಾ ಅದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಅವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು.. ಅಂಧ್ರಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆ ಜನಸೇನಾ ಪಕ್ಷದಿಂದ ಪವನ್‌ ಕಲ್ಯಾಣ್‌ ಅವರು ಪಿಠಾಪುರದಿಂದ ಕಣಕ್ಕಿಳಿಯಲಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಇದೇ ವೇಳೆ ರಾಮ್‌ ಗೋಪಾಲ್‌ ವರ್ಮಾ ಸಹ ತಾವೂ ಪಿಠಾಪುರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: Namratha Gowda : ʼಯುವʼ ಸಿನಿಮಾದ ಕವಿತೆಗೆ ನಮ್ರತಾ-ಕಿಶನ್‌ ಡಾನ್ಸ್‌..! ವಿಡಿಯೋ ವೈರಲ್‌

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. (Andhra Pradesh assembly election) ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಮತ್ತು ಬಿಜೆಪಿಯೊಂದಿಗೆ ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡು ಕಣ್ಣಕ್ಕಿಳಿದಿದೆ.

2019 ರಲ್ಲಿ, ಪವನ್ ಕಲ್ಯಾಣ್ ಗಾಜುವಾಕ ಮತ್ತು ಭೀಮಾವರಂ ನಿಂದ ಸ್ಪರ್ಧಿಸಿ ವೈಎಸ್‌ಆರ್‌ಸಿ ಅಭ್ಯರ್ಥಿಗಳ ವಿರುದ್ಧ ಸೋಲು ಅನುಭವಿಸಿದರು. ಈ ಬಾರಿ ಪವನ್‌ ಕಲ್ಯಾಣ್‌ ಹವಾ ಜೋರಾಗಿದ್ದು, ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ. ಇತ್ತ ಮೊದಲ ಬಾರಿಗೆ ಆರ್‌ಜಿವಿ ರಾಜಕೀಯ ಪ್ರವೇಶ ಘೋಷಿಸಿದ್ದು ಪಕ್ಷ ಯಾವುದು ಅಂತ ತಿಳಿಸಿಲ್ಲ.

ಇದನ್ನೂ ಓದಿ:ಈ ಸ್ಕೂಲ್‌ ಗ್ರುಪ್‌ ಫೋಟೋದಲ್ಲಿ ಒಬ್ಬ ಸ್ಟಾರ್‌ ಹಿರೋಯಿನ್‌ ಇದ್ದಾಳೆ..! ಯಾರು ಹೇಳಿ ನೋಡೋಣ

ಆಂಧ್ರಪ್ರದೇಶ 25 ಲೋಕಸಭೆ ಮತ್ತು 175 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಪಿಠಾಪುರಂ ವಿಧಾನಸಭಾ ಕ್ಷೇತ್ರವು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿದೆ. 2014 ರಲ್ಲಿ, ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ಸ್ಥಾಪಿಸಿದರು. 2019 ರಲ್ಲಿ, ಜನಸೇನಾ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ ಒಂದು ಸ್ಥಾನವನ್ನು ಗೆದ್ದಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News