WATCH: ರಣವೀರ್​ ಸಿಂಗ್​​, ಕ್ರಿಕೆಟರ್​ ಶ್ರೀಕಾಂತ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್

83 Movie:'83' ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ  ಸುದೀಪ್ (Sudeep) ವಿತರಸುತ್ತಿದ್ದು, ನಿನ್ನೆ ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಬಾಲಿವುಡ್ ನಟ ರಣವೀರ್​ ಸಿಂಗ್​​ ಹಾಗೂ ಕ್ರಿಕೆಟರ್​ ಶ್ರೀಕಾಂತ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟರು.

Edited by - Zee Kannada News Desk | Last Updated : Dec 19, 2021, 03:09 PM IST
  • ನಿನ್ನೆ ಬೆಂಗಳೂರಿನಲ್ಲಿ ನಡೆದ '83' ಸುದ್ದಿಗೋಷ್ಠಿ
  • ರಣವೀರ್​ ಸಿಂಗ್​​, ಕ್ರಿಕೆಟರ್​ ಶ್ರೀಕಾಂತ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಸುದೀಪ್
WATCH: ರಣವೀರ್​ ಸಿಂಗ್​​, ಕ್ರಿಕೆಟರ್​ ಶ್ರೀಕಾಂತ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್ title=
83 ಸಿನಿಮಾ

1983ರ ಕ್ರಿಕೆಟ್​ ವಿಶ್ವಕಪ್​ನಲ್ಲಿ ಭಾರತ ತಂಡ ಜಯಶಾಲಿಯಾದ ಘಟನೆಯನ್ನು ಆಧರಿಸಿ '83' ಸಿನಿಮಾ ತಯಾರಾಗಿದೆ. ಕನ್ನಡಕ್ಕೂ ಡಬ್​ ಆಗಿ ಈ ಚಿತ್ರ ಡಿ.24ರಂದು ಬಿಡುಗಡೆಗೊಳ್ಳಲಿದೆ.  

ನಿನ್ನೆ ಬೆಂಗಳೂರಿನಲ್ಲಿ ನಡೆದ '83' ಸುದ್ದಿಗೋಷ್ಠಿಯಲ್ಲಿ  ರಣವೀರ್​ ಸಿಂಗ್​ ಮತ್ತು ಕಿಚ್ಚ ಸುದೀಪ್, 1983ರಲ್ಲಿ ವಿಶ್ವಕಪ್‌ ಗೆದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ಕಪಿಲ್‌ ದೇವ್‌ (Kapil Dev) ಸೇರಿದಂತೆ ತಂಡದಲ್ಲಿದ್ದ ರೋಜರ್‌ ಬಿನ್ನಿ, ಸೈಯದ್‌ ಕಿರ್ಮಾನಿ, ಕೆ.ಶ್ರೀಕಾಂತ್‌ ಪಾಲ್ಗೊಂಡಿದ್ದರು. 

ಈ ವೇಳೆ ರಣವೀರ್​ ಸಿಂಗ್​ (Ranveer Singh) ಹಾಗೂ ಕ್ರಿಕೆಟರ್​ ಶ್ರೀಕಾಂತ್ (Cricketer Srikanth) ಅವರಿಗೆ ಸುದೀಪ್​ ಕೆಲವು ಕನ್ನಡ ಡೈಲಾಗ್​ ಹೇಳಿಕೊಟ್ಟರು. ಸುದೀಪ್​​ ತಾವು ನಟಿಸಿದ ಕೆಂಪೇಗೌಡ ಸಿನಿಮಾದ ಡೈಲಾಗ್ ಹೇಳಿ ಕೊಟ್ಟರು. ಅದನ್ನು ಹೇಳಿದ ಇವರಿಗೆ ಎಲ್ಲರಿಂದ ಚಪ್ಪಾಳೆ ಸಿಕ್ಕಿತು. 

'83' ಸಿನಿಮಾ ಟ್ರೇಲರ್​​ನಿಂದಲೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ. ಇದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್​ 24ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಕಬೀರ್​ ಖಾನ್​ ನಿರ್ದೇಶನ ಮಾಡಿದ್ದಾರೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ.  

 

 

ಇದನ್ನೂ ಓದಿ: ಈ ಒಂದು ಫೋಟೋಗಾಗಿ ಅತ್ತಿದ್ದರಂತೆ.. 36 ವರ್ಷ ಕಾದಿದ್ದರಂತೆ ಕಿಚ್ಚ.. ಇದೇ ನೋಡಿ ಆ ಅಪರೂಪದ ಚಿತ್ರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News