ಮೆಹಬೂಬ ಶೂಟಿಂಗ್‌ ವೇಳೆ ಅವಘಡ: ಬಿದ್ದು ಗಾಯಗೊಂಡ ಬಿಗ್‌ಬಾಸ್‌ ಶಶಿ!

Bigg Boss Shashi Kumar: ಬಿಗ್‌ಬಾಸ್‌ ಸೀಸನ್‌ 6ನ ಮಾರ್ಡನ್‌ ರೈತ ನಟ ಶಶಿ ಕುಮಾರ್‌ ಮೆಹಬೂಬ ಚಿತ್ರದ ಶೂಟಿಂಗ್‌ ವೇಳೆ ಬಿದ್ದು ಗಾಯಮಾಡಿಕೊಂಡಿರುವ ವಿಡಿಯೋ ವೈರಲ್‌ ಆಗಿದ್ದು, ಇದರ ಬಗ್ಗೆ ನಟ ಶಶಿ ಮಾತನಾಡಿದ್ದಾರೆ.

Written by - Zee Kannada News Desk | Last Updated : Jan 16, 2024, 03:54 PM IST
  • ಮಾರ್ಡನ್‌ ರೈತ ಶಶಿ ಕುಮಾರ್‌ ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಬಹಳ ಹಿಂದೆ ಶುರುವಾಗಿದ್ದ 'ಮೆಹಬೂಬ' ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ.
  • ಮೆಹಬೂಬ ಸಿನಿಮಾ ಚಿತ್ರೀಕರಣದ ವೇಳೆ ಶಶಿ ಬಿಲ್ಡಿಂಗ್ ಮೇಲೆ ಏರುವ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದ್ದು, ಆಗ ಆಯತಪ್ಪಿ ಕಟ್ಟದ ಏರುತ್ತಿರುವಾಗ ಕೆಳಗೆ ಬಿದ್ದಿದ್ದಾರೆ.
  • ಶಶಿ ಕೃಷಿಯ ಜೊತೆಗೆ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದು, ಇವರು 'ಮೆಹಬೂಬ' ಚಿತ್ರದ ಮೂಲಕ ಹೀರೊ ಆಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ.
ಮೆಹಬೂಬ ಶೂಟಿಂಗ್‌ ವೇಳೆ ಅವಘಡ: ಬಿದ್ದು ಗಾಯಗೊಂಡ ಬಿಗ್‌ಬಾಸ್‌ ಶಶಿ! title=

Bigg Boss Shashi Accident During Shooting: ಬಿಗ್‌ಬಾಸ್ ಕನ್ನಡ ಸೀಸನ್ 6ರ ವಿಜೇತ̧, ಮಾರ್ಡನ್‌ ರೈತ ಶಶಿ ಕುಮಾರ್‌ ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಬಹಳ ಹಿಂದೆ ಶುರುವಾಗಿದ್ದ 'ಮೆಹಬೂಬ' ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ನಟ ಶಶಿ ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದರು. ಇದಕ್ಕೆ ಸಂಭವಿಸಿದ ವಿಡಿಯೋ ಸದ್ಯ ವೈರಲ್‌ ಆಗುತ್ತಿದೆ.

ಹೌದು.. ಮೆಹಬೂಬ ಸಿನಿಮಾ ಚಿತ್ರೀಕರಣದ ವೇಳೆ ಶಶಿ ಬಿಲ್ಡಿಂಗ್ ಮೇಲೆ ಏರುವ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದ್ದು, ಆಗ ಆಯತಪ್ಪಿ ಕಟ್ಟದ ಏರುತ್ತಿರುವಾಗ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕೊಂಚ ಪೆಟ್ಟಾಗಿದ್ದು ಕಾಲು ಉಳುಕಿತ್ತು. ನಟ ಶಶಿ "3 ವಾರಗಳ ಹಿಂದೆ ಮೈಸೂರಿನ ಕಾಲೇಜ್‌ವೊಂದರಲ್ಲಿ 'ಮೆಹಬೂಬ' ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಆ ಘಟನೆ ನಡೀತು. ಬಳಿಕ ಚಿಕಿತ್ಸೆ ಪಡೆದುಕೊಂಡೆ. ಈಗ ಆರಾಮಾಗಿ ಇದ್ದೀನಿ. ಕೆಳಗೆ ಬೆಡ್ ಹಾಕಿದ್ದರಿಂದ ಹೆಚ್ಚು ಪೆಟ್ಟು ಆಗಲಿಲ್ಲ" ಎಂದುಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಕಾಟೇರ ಸಿನಿಮಾ ನೋಡಿದ್ರಾ? ಅಭಿಮಾನಿಯ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು ಗೊತ್ತಾ?

ಬಿಗ್‌ಬಾಸ್‌ ಸೀಸನ್‌ 6 ರಲ್ಲಿ ಮಾಡ್ರನ್ ರೈತ ಎಂದೇ ಹೆಸರು ಮಾಡಿದ್ದ ಶಶಿ, ಆ ಸೀಸನ್ ವಿಜೇತರಾಗಿ ಹೊರಹೊಮ್ಮಿದ್ದರು.  ಶಶಿ ಕೃಷಿಯ ಜೊತೆಗೆ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದು, ಇವರು 'ಮೆಹಬೂಬ' ಚಿತ್ರದ ಮೂಲಕ ಹೀರೊ ಆಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಸ್ವತಃ ಶಶಿ ಈ ಸಿನಿಮಾವನ್ನು ನಿರ್ಮಾಣ ಮಾಡಿ ಅಭಿನಯಿಸುತ್ತಿದ್ದು, ಅನೂಪ್ ಆಂಟೋನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಮೆಹಬೂಬ ಸಿನಿಮಾದಲ್ಲಿ ಶಶಿ ಜೊತೆಗೆ ನಾಯಕಿಯಾಗಿ'ಗೊಂಬೆಗಳ ಲವ್' ಖ್ಯಾತಿಯ ಪಾವನಾ ಗೌಡ ನಾಯಕಿಯಾಗಿ ಮಿಂಚಿದ್ದಾರೆ. ಹಾಗೆಯೇ ಇತ್ತೀಚೆಗೆ 'ಮೆಹಬೂಬ' ಚಿತ್ರದ ಪೋಸ್ಟರ್‌ನ್ನು ಸಚಿವರಾದ ಚೆಲುವರಾಯ ಸ್ವಾಮಿ   ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗಿದ್ದು, ಇದಕ್ಕೆ ಮ್ಯಾಥ್ಯೂಸ್‌ ಮನು ಸಂಗೀತ ಸಂಯೋಜಿಸಿದ್ದು, ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ಸಾಹಿತ್ಯ ಗೀಚಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News