Satyavathi Mangli: ಗಾಯಕಿ 'ಸತ್ಯವತಿ ಮಂಗ್ಳಿ' ಮತ್ತೆ ಸ್ಯಾಂಡಲ್ ವುಡ್ ಗೆ ರಿ ಎಂಟ್ರಿ..!

ತಿಪ್ಪೇಶ್ ನಿರ್ದೇಶನ ಮಾಡುತ್ತಿರುವ 'ಕರಿಯಾ ಐ ಲವ್‌ ಯೂ' ಎಂಬ ಫಿಲ್ಮ್ ಗೆ ಮಂಗ್ಳಿ ಸಾಂಗ್ ಹಾಡಿದ್ದಾರೆ.

Last Updated : Apr 2, 2021, 12:53 PM IST
  • 'ಕಣ್ಣೇ ಅದಿರಿಂದಿ' ಹಾಡಿನ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು ಸತ್ಯವತಿ ಮಂಗ್ಳಿ
  • ಸತ್ಯವತಿ 'ರಾಬರ್ಟ್' ಸಿನಿಮಾ ನಂತ್ರ ಮತ್ತೆ ಕನ್ನಡಕ್ಕೆ
  • ತಿಪ್ಪೇಶ್ ನಿರ್ದೇಶನ ಮಾಡುತ್ತಿರುವ 'ಕರಿಯಾ ಐ ಲವ್‌ ಯೂ' ಎಂಬ ಫಿಲ್ಮ್ ಗೆ ಮಂಗ್ಳಿ ಸಾಂಗ್ ಹಾಡಿದ್ದಾರೆ.
Satyavathi Mangli: ಗಾಯಕಿ 'ಸತ್ಯವತಿ ಮಂಗ್ಳಿ' ಮತ್ತೆ ಸ್ಯಾಂಡಲ್ ವುಡ್ ಗೆ ರಿ ಎಂಟ್ರಿ..! title=

ಬೆಂಗಳೂರು: 'ಕಣ್ಣೇ ಅದಿರಿಂದಿ' ಹಾಡಿನ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು ಸತ್ಯವತಿ ಮಂಗ್ಳಿ ಮತ್ತೆ ಸ್ಯಾಂಡಲ್ ವುಡ್ ಸಿನಿಮಾಗೆ ಹಾಡಲಿದ್ದಾರೆ.

ಸತ್ಯವತಿ 'ರಾಬರ್ಟ್' ಸಿನಿಮಾ(Robert Movie) ನಂತ್ರ ಮತ್ತೆ ಕನ್ನಡಕ್ಕೆ ಯಾವಾಗ ಬರುತ್ತಾರೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈಗ ಮಂಗ್ಳಿ ಅವರಿಗೆ ಆ ಸಮಯ ಬಂದಿದ್ದು, ಹೊಸಬರೇ ನಟಿಸಿರುವ ಕನ್ನಡ ಸಿನಿಮಾಗೆ ಹಾಡೊಂದನ್ನು ಹಾಡುವ ಮೂಲಕ ಮಂಗ್ಳಿ ಸ್ಯಾಂಡಲ್‌ವುಡ್‌ಗೆ ಮತ್ತೆ  ರಿ ಎಂಟ್ರಿ ಮಾಡಲಿದ್ದಾರೆ.

ದಿವಂಗತ ನಟ ಖದೇರ್ ಖಾನ್ ಅವರ ಪುತ್ರ ಅಬ್ದುಲ್ ಖುದ್ದಸ್ ನಿಧನ

ಕನ್ನಡಕ್ಕೆ ಮಂಗ್ಳಿ(Satyavathi Mangli)ಯವರನ್ನ  ತಿಪ್ಪೇಶ್‌ ಎಂಬ ಹೊಸ ನಿರ್ದೇಶಕರು ಕರೆತರುತ್ತಿದ್ದಾರೆ. ತಿಪ್ಪೇಶ್ ನಿರ್ದೇಶನ ಮಾಡುತ್ತಿರುವ 'ಕರಿಯಾ ಐ ಲವ್‌ ಯೂ' ಎಂಬ ಫಿಲ್ಮ್ ಗೆ ಮಂಗ್ಳಿ ಸಾಂಗ್ ಹಾಡಿದ್ದಾರೆ. ಈಗಾಗಲೇ ಹಾಡಿನ ರೆಕಾರ್ಡಿಂಗ್‌ ಕಂಪ್ಲೀಟ್‌ ಆಗಿದ್ದು, ನಿರ್ದೇಶಕರು ಮತ್ತು ಚಿತ್ರತಂಡ ಮಂಗ್ಳಿ ಅವರ ಗಾಯನ ಕೇಳಿ ಫುಲ್ ಹ್ಯಾಪಿ ಮೂಡ್ ನಲ್ಲಿದ್ದಾರೆ.

Yuvarathnaa Twitter Review: ಪವರ್ ಫುಲ್ ಸಂದೇಶ ಹೊತ್ತು ತಂದ ಯುವರತ್ನ

'ನಮ್ಮ ಸಿನಿಮಾದಲ್ಲಿ ಹಳ್ಳಿಯಲ್ಲಿ ಸ್ಪೆಷಲ್‌ ಹಾಡೊಂದು ಬರುತ್ತದೆ. ಅದನ್ನು ಮಂಗ್ಳಿಯವರು ಹಾಡಿದರೆ ಚೆನ್ನಾಗಿರುತ್ತದೆ ಎಂದು ಅವರ ಬಳಿ ಹಾಡಿಸಿದೆವೇ. ಅದೇ ಹಾಡಿನಲ್ಲಿ ಮೇಲ್ ಸಿಂಗರ್ ನವೀನ್‌ ಸಜ್ಜು(Navin Sajju) ಹಾಡಿದ್ದಾರೆ. ಈ ಚಿತ್ರ ಹಳ್ಳಿಯಲ್ಲಿ ನಡೆಯುವ ಒಂದು ಲವ್‌ ಸ್ಟೋರಿಯಾಗಿದೆ. ಸಂಪೂರ್ಣ ಹೊಸಬರೇ ಇರುವ ಈ ಸಿನಿಮಾದಲ್ಲಿ ನಾಯಕ ಆಟೋ ಡ್ರೈವರ್‌ ಆಗಿರುತ್ತಾರೆ. ಮಂಜು ಬಳ್ಳಾರಿ ಎಂಬವರು ಆ ಪಾತ್ರದಲ್ಲಿನಟಿಸುತ್ತಿದ್ದಾರೆ. ಶಕುಂತಲಾ ಎಂಬವರು ನಾಯಕಿಯಾಗಿದ್ದಾರೆ'. 

Kirron Kher: ಬಾಲಿವುಡ್ ನಟ ಅನುಪಮ್ ಖೇರ್ ಪತ್ನಿಗೆ 'ಬ್ಲಡ್​ ಕ್ಯಾನ್ಸರ್'..! 

ಈ ಸಿನಿಮಾದಲ್ಲಿ ಸಂಜು ಬಸಯ್ಯ(Sanju Basayya), ಚಕ್ರವರ್ತಿ ಸೇರಿದಂತೆ ಸಾಕಷ್ಟು ಮಂದಿ ಕಿರುತೆರೆ ಕಲಾವಿದ ರಿದ್ದಾರೆ. ಲೋಕಿ ಎಂಬವರು ಸಂಗೀತ ನೀಡಿದ್ದಾರೆ. ಇದೇ ತಿಂಗಳ 15ರಿಂದ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಹಗರಿಬೊಮ್ಮನಹಳ್ಳಿ, ಸಂಡೂರು, ಹೊಸಪೇಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನಿರ್ದೇಶಕ ತಿಪ್ಪೇಶ್‌ ಈ ಮೊದಲು 'ರಾಹುಕಾಲ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದು, ಒಂದು ಹಾಡಷ್ಟೇ ಬಾಕಿದೆ. ಒಟ್ಟಾರೆ ತೆಲುಗು ಹಾಡನ್ನೇ ಕೇಳಿ ಮಂಗಳಿಗೆ ಫಿಧಾ ಆಗಿದ್ದ ಅಭಿಮಾನಿಗಳಿಗೆ ಈಗ ಮತ್ತೆ ಅವರ ಕಂಠದಿಂದ ಮತ್ತೊಂದು ಕನ್ನಡ ಹಾಡನ್ನು ಕೇಳಬಹುದಾಗಿದೆ.

ಸೂಪರ್ ಸ್ಟಾರ್ ರಜನೀಕಾಂತ್ ಗೆ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News