ನನ್ನ ಮಗ ಭಾರತದಲ್ಲಿ ಹಿನ್ನೆಲೆ ಗಾಯಕನಾಗಬೇಕೆಂದು ನಾನು ಬಯಸುವುದಿಲ್ಲ: Sonu Nigam

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ. ತನ್ನ ಮಗ ಗಾಯಕನಾಗುವುದು ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಆತ ಗಾಯಕನಾಗುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

Last Updated : Nov 16, 2020, 05:54 PM IST
  • ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ.
  • ತಮ್ಮ ಸುಪುತ್ರ ಗಾಯಕನಾಗುವುದು ತಮಗೆ ಇಷ್ಟವಿಲ್ಲ.
  • ಅದರಲ್ಲೂ ಅತ ಭಾರತದಲ್ಲಿ ಗಾಯಕನಾಗುವುದು ಖಂಡಿತ ಇಷ್ಟ ಇಲ್ಲ ಎಂದ ಸೋನು.
ನನ್ನ ಮಗ ಭಾರತದಲ್ಲಿ ಹಿನ್ನೆಲೆ ಗಾಯಕನಾಗಬೇಕೆಂದು ನಾನು ಬಯಸುವುದಿಲ್ಲ: Sonu Nigam title=

ನವದೆಹಲಿ: ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕ ಸೋನು ನಿಗಮ (Sonu Nigam) ಯಾವಾಗಲು ತಮ್ಮ ಹೇಳಿಕೆಗಳಿಂದ ಹೆಡ್ ಲೈನ್ ಸೃಷ್ಟಿಸುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ಅವರು ಗಂಭೀರ ಹೇಳಿಕೆಯೊಂದನ್ನು ನೀಡಿ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ್ದಾರೆ. ಇತ್ತೀಚೆಗಷ್ಟೇ ಸೋನು ನಿಗಮ್ 'ಇಷ್ವರ್ ಕಾ ವೋ ಸಚ್ಚಾ ಬಂದಾ' ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ಹಾಡಿನ ಪ್ರಮೋಶನ್ ವೇಳೆ ನೀಡಿರುವ ಹೇಳಿಕೆಗೆ ಅವರ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಟೈಮ್ಸ್ ನೌಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನು ನಿಗಮ್, ತಮ್ಮ ಸುಪುತ್ರ ಗಾಯಕನಾಗುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ- ದುಬೈನಿಂದ ಭಾರತಕ್ಕೆ ಬರುವ ವಿಮಾನ ರದ್ದಾಗಿದ್ದಕ್ಕೆ ಸೋನು ನಿಗಮ್ ಮಾಡಿದ್ದೇನು?

ಅಷ್ಟೇ ಅಲ್ಲ, ಕನಿಷ್ಠ ಭಾರತದಲ್ಲಾದರೂ ತನ್ನ ಮಗ ಗಾಯಕನಾಗಬಾರದು ಎಂದು ಸೋನು ಹೇಳಿದ್ದಾರೆ. ವಾಸ್ತವವಾಗಿ, ಸೋನು ಅವರ ಮಗ ಕೂಡ ಗಾಯಕನಾಗಲು ಬಯಸುತ್ತಾನೆಯೇ ಎಂದು ಸಂದರ್ಶನದಲ್ಲಿ ಅವರನ್ನು ಪ್ರಶ್ನಿಸಲಾಗಿದೆ. ನಿಜ ಹೇಳಬೇಕೆಂದರೆ, ಅವರು ಗಾಯಕನಾಗಬೇಕೆಂದು ನಾನು ಬಯಸುವುದಿಲ್ಲ, ಕನಿಷ್ಠ ಈ ದೇಶದಲ್ಲಿಲ್ಲ' ಎಂದು ಸೋನು ಹೇಳಿದ್ದಾರೆ. ಅಂದಹಾಗೆ, ಪ್ರಸ್ತುತ ಅವನು ಭಾರತದಲ್ಲಿಲ್ಲ. ಅವನು ದುಬೈನಲ್ಲಿ ವಾಸಿಸುತ್ತಿದ್ದಾನೆ. ಈಗಾಗಲೇ ಅವರನ್ನು ಭಾರತದಿಂದ ಹೊರಗೆ ಕಳುಹಿಸಲಾಗಿದೆ ಎಂದು ಸೋನು ಹೇಳಿದ್ದಾರೆ.

ಇದನ್ನು ಓದಿ- 'ಇದು ಸುಸೈಡ್ ಅಲ್ಲ, ಪ್ಲಾನ್ಡ್ ಮರ್ಡರ್', ಸುಶಾಂತ್ ಸಿಂಗ್ ರಾಜಪುತ್ ಸಾವಿನ ಕುರಿತು ಹೇಳಿಕೆ ನೀಡಿದ ಕಂಗನಾ

ತಮ್ಮ ಮಗ ಗಾಯಕನಾಗಲು ತಾವು ಬಯಸುವುದಿಲ್ಲ ಎಂದ ಸೋನು
ಈ ಸಂಭಾಷಣೆಯಲ್ಲಿ ಸೋನು, 'ಪ್ರಸ್ತುತ  ನನ್ನ ಮಗ ಯುಎಇಯ ಟಾಪ್ ಗೇಮರ್ ಆಗಿದ್ದಾನೆ. ಫೋರ್ಟ್‌ನೈಟ್ ಹೆಸರಿನ ಆಟವೊಂದರಲ್ಲಿ ಆಟ ಟಾಪ್ ಗೇಮರ್. ಅವರು ತುಂಬಾ ಪ್ರತಿಭಾವಂತ ಮಗು, ಅವನು ಅನೇಕ ಗುಣಲಕ್ಷಣಗಳನ್ನು ಹೊಂದಿದ್ದಾರೆ. ನಾನು ಅವನನ್ನು ಬೇರೆ ರೀತಿಯಲ್ಲಿ ರೂಪಿಸಲು ಬಯಸುವುದಿಲ್ಲ. ಅವನು ಸ್ವತಃ ಏನು ಆರಿಸಿಕೊಳ್ಳುತ್ತಾನೆ ಎಂಬುದನ್ನು ಕಾಯ್ದು ನೋಡೋಣ' ಎಂದು ಹೇಳಿದ್ದಾರೆ. 

ಇದನ್ನು ಓದಿ- Sushant Sing Rajput ಆತ್ಮಹತ್ಯೆ ಕುರಿತು ಮೌನ ಮುರಿದ Salman Khaan ಹೇಳಿದ್ದೇನು?

ಪ್ರಸ್ತುತ ದುಬೈನಲ್ಲಿದ್ದಾರೆ ಸೋನು ನಿಗಮ್
'ಇಷ್ವರ್ ಕಾ ಸಚ್ಚಾ ಬಂದಾ' ಹಾಡಿನ ಕುರಿತು ಹೇಳುವುದಾದರೆ, ಈ ಹಾಡು ವೈಷ್ಣವ ಜನತೋ ಹಾಡಿನ ಹಿಂದಿ ಆವೃತ್ತಿಯಾಗಿದೆ. ದುಬೈನಲ್ಲಿದ್ದುಕೊಂಡೆ ಸೋನು ಈ ಹಾಡಿನ ಮೇಲೆ ಕಾರ್ಯನಿರ್ವಹಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಸೋನು ನಿಗಮ್ ಅವರ ಪುತ್ರ ನವೀನ ನಿಗಮ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಸೋನು ಅವರ ಪುತ್ರ ಖ್ಯಾತ ಹಾಡು ಕೊಲಾವರ ಡೀ ಹಾಡನ್ನು ಹೇಳಿದ್ದರು.

ಇತ್ತೀಚೆಗಷ್ಟೇ ಸೋನು ನಿಗಮ್ ಸ್ವಜನ ಪಕ್ಷಪಾತದ ಕುರಿತು ಹೇಳಿಕೆ ನೀಡಿದ್ದರು
ಕಳೆದ ಹಲವು ದಿನಗಳಿಂದ ಸೋನು ತಮ್ಮ ಕುಟುಂಬ ಸದಸ್ಯರ ಜೊತೆಗೆ ದುಬೈನಲ್ಲಿ ವಾಸವಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೇಲೂ ಕೂಡ ಅವರು ಸಾಕಷ್ಟು ಸಕ್ರೀಯರಾಗಿರುತ್ತಾರೆ. ಚಿತ್ರೋದ್ಯೋಮದ ಹೊರತಾಗಿಯೂ ಕೂಡ ಅವರು ದಿಟ್ಟತನದಿಂದ ತಮ್ಮ ಹೇಳಿಕೆಗಳನ್ನು ನೀಡುತ್ತಾರೆ. ಸುಶಾಂತ್ ಸಿಂಗ್ ರಾಜ್ಪುತ್ ಸಾವಿನ ಬಳಿಕ ಅವರು ಸಂಗೀತ ಕ್ಷೇತ್ರದಲ್ಲಿನ ನೆಪೋಟಿಸಂ ಅಂದರೆ ಸ್ವಜನ ಪಕ್ಷಪಾತದ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

Trending News