ಈ ರೋಗಗಳನ್ನು ಬೇರಿನಿಂದಲೇ ಗುಣಪಡಿಸುತ್ತದೆ ಪಪ್ಪಾಯ ಬೀಜ !

Papaya Seed Benefits :ಸಾಮಾನ್ಯವಾಗಿ ಪಪ್ಪಾಯ ಹಣ್ಣು ತಿಂದ ಬಳಿಕ ನಾವು ಅದಾ ಬೀಜವನ್ನು ಎಸೆದು ಬಿಡುತ್ತೇವೆ. ಆದರೆ ಮತ್ತೆ ಪಪ್ಪಾಯ ಬೀಜಗಳನ್ನು ಅಂಗಡಿಯಿಂದ ಖರೀದಿಸಿ ತರಬೇಕಾದರೆ ದುಬಾರಿ ಬೆಲೆಯನ್ನು ನೀಡಬೇಕಾಗುತ್ತದೆ.

Written by - Ranjitha R K | Last Updated : Apr 10, 2024, 07:13 PM IST
  • ಪಪ್ಪಾಯ ಬೀಜದ ಪ್ರಯೋಜನಗಳು
  • ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
  • ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
ಈ ರೋಗಗಳನ್ನು ಬೇರಿನಿಂದಲೇ ಗುಣಪಡಿಸುತ್ತದೆ ಪಪ್ಪಾಯ ಬೀಜ ! title=

Papaya Seed Benefits : ಹಣ್ಣುಗಳನ್ನು ನಾವು ತಿಂದು ಅದರ ಬೀಜಗಳನ್ನು ಸಾಮಾನ್ಯವಾಗಿ ಎಸೆದು ಬಿಡುತ್ತೇವೆ. ಆ ಬೀಜಗಳು ಎಷ್ಟು ಪ್ರಯೋಜನಕಾರಿ ಎನ್ನುವ ಮಾಹಿತಿ ನಮಗೆ ಇರುವುದೇ ಇಲ್ಲ. ಆದರೆ ನೈಸರ್ಗಿಕವಾಗಿ ಸಿಗುವ ಈ ಬೀಜಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಬುಡದಿಂದಲೇ ವಾಸಿ ಮಾಡುವಲ್ಲಿ  ಸಹಕಾರಿಯಾಗಿರುತ್ತವೆ.ಅಂಥಹ ಬೀಜಗಳಲ್ಲಿ ಒಂದು ಪಪ್ಪಾಯ ಬೀಜ.ಸಾಮಾನ್ಯವಾಗಿ ಪಪ್ಪಾಯ ಹಣ್ಣು ತಿಂದ ಬಳಿಕ ನಾವು ಅದಾ ಬೀಜವನ್ನು ಎಸೆದು ಬಿಡುತ್ತೇವೆ. ಆದರೆ ಮತ್ತೆ ಪಪ್ಪಾಯ ಬೀಜಗಳನ್ನು ಅಂಗಡಿಯಿಂದ ಖರೀದಿಸಿ ತರಬೇಕಾದರೆ ದುಬಾರಿ ಬೆಲೆಯನ್ನು ನೀಡಬೇಕಾಗುತ್ತದೆ. 

ಪಪ್ಪಾಯ ಬೀಜದ ಪ್ರಯೋಜನಗಳು : 
1.ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ :

ಪಪ್ಪಾಯ ಬೀಜಗಳಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳು ಸೇರಿದಂತೆ ಅನೇಕ ವಿಶೇಷ ಗುಣ ಲಕ್ಷಣಗಳು ಕಂಡು ಬರುತ್ತವೆ.ಇವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಪಪ್ಪಾಯ ಬೀಜಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. 

ಇದನ್ನೂ ಓದಿ : ಈ ಒಣಹಣ್ಣು ಸಾಕು… ಬೆಳಗ್ಗೆ ಎದ್ದಂತೇ ತಿಂದರೆ ಸೊಂಟದ ಸುತ್ತ ಸಂಗ್ರಹವಾದ ಕೊಬ್ಬು ಕೇವಲ 5 ದಿನದಲ್ಲಿ ಇಳಿಯುತ್ತೆ!

2.ಮಧುಮೇಹ ನಿಯಂತ್ರಣಕ್ಕೆ : 
ಪಪ್ಪಾಯ ಬೀಜಗಳು ಅಧಿಕ ರಕ್ತದ ಸಕ್ಕರೆ ರೋಗಿಗಳಿಗೆ ಪರಿಣಾಮಕಾರಿ ಮನೆಮದ್ದು. ಏಕೆಂದರೆ ಪಪ್ಪಾಯಿ ಬೀಜಗಳಲ್ಲಿ ಫೈಬರ್ ಹೇರಳವಾಗಿ ಕಂಡು ಬರುತ್ತದೆ.ಇದು ರಕ್ತದ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

3.ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ : 
ಅಧಿಕ ಕೊಲೆಸ್ಟ್ರಾಲ್ ಇರುವ ರೋಗಿಗಳು ಪಪ್ಪಾಯ ಹಣ್ಣನ್ನು ಮಾತ್ರವಲ್ಲದೆ ಅದರ ಬೀಜಗಳನ್ನೂ ಸೇವಿಸಬಹುದು.ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ. ಅಪಧಮನಿಗಳಲ್ಲಿ ಎಲ್‌ಡಿಎಲ್ ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. 

4.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : 
ವಿವಿಧ ರೋಗಗಳು, ಅಲರ್ಜಿಗಳು ಮತ್ತು ಸೋಂಕುಗಳನ್ನು ತಪ್ಪಿಸಲು ಬಲವಾದ ರೋಗ ನಿರೋಧಕ ಶಕ್ತಿ ಇರಬೇಕು. ಪಪ್ಪಾಯ ಬೀಜಗಳನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. 

ಇದನ್ನೂ ಓದಿ :ರಕ್ತನಾಳಗಳಲ್ಲಿ ಅಂಟಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಿ ಬಿಡುತ್ತದೆ ಈ ಸೊಪ್ಪು!ಅದ್ಯಾವ ಸೊಪ್ಪು ಗೊತ್ತಾ?

5.ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : 
ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಪಪ್ಪಾಯ ಬೀಜಗಳನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ.ಮಲಬದ್ಧತೆ,ಅಜೀರ್ಣ,ಅತಿಸಾರ, ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಇತರ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಂತಹ ಜೀರ್ಣಕಾರಿ ಸಮಸ್ಯೆಗಳಿರುವ ಜನರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News