ಹುಷಾರಿಲ್ಲದ ಮಗುವಿಗೆ ಔಷಧಿ ಕೊಡಿಸಲು 30 ರೂ. ಕೇಳಿದ ಪತ್ನಿಗೆ ತಲಾಖ್ ನೀಡಿದ ಪತಿ!

ಸಂತ್ರಸ್ತೆಯ ಕುಟುಂಬಸ್ಥರು ಆಕೆಯ ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ.

Last Updated : Aug 13, 2019, 10:16 AM IST
ಹುಷಾರಿಲ್ಲದ ಮಗುವಿಗೆ ಔಷಧಿ ಕೊಡಿಸಲು 30 ರೂ. ಕೇಳಿದ ಪತ್ನಿಗೆ ತಲಾಖ್ ನೀಡಿದ ಪತಿ! title=
Representative Image

ಹಾಪುರ: ಕೇಂದ್ರ ಸರ್ಕಾರವು ತ್ರಿವಳಿ ತಲಾಖ್ ಬಗ್ಗೆ ಕಠಿಣ ಕಾನೂನು ಜಾರಿಗೆ ತಂದ ನಂತರವೂ ಮುಸ್ಲಿಂ ಮಹಿಳೆಯರೀಗೆ ಮೂರು ಬಾರಿ ತಲಾಖ್ ಹೇಳಿ ವಿಚ್ಚೇದನ ನೀಡುವ ಪ್ರಕರಣಗಳು ಇನ್ನೂ ರದ್ದುಗೊಂಡಿಲ್ಲ. ಅಂತಹ ಒಂದು ಪ್ರಕರಣ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಕಂಡುಬಂದಿದೆ. 

ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಔಷಧಿಗಾಗಿ ಕೇವಲ 30 ರೂಪಾಯಿಗಳನ್ನು ಕೇಳಿದ ಪತ್ನಿಗೆ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ. ಈದ್ಗೆ 1 ದಿನದ ಮೊದಲು ಈ ಘಟನೆ ನಡೆದಿದೆ. ಪತ್ನಿ ತನ್ನ ಇಬ್ಬರು ಮುಗ್ಧ ಮಕ್ಕಳನ್ನು ಸಹ ಕರೆದೊಯ್ದಿದ್ದಾಳೆ, ಅಳುತ್ತಾ ತಾಯಿ ಮನೆ ತಲುಪಿದ ಸಂತ್ರಸ್ತೆ ಕುಟುಂಬಕ್ಕೆ ಈ ಬಗ್ಗೆ ಮಾಹತಿ ನೀಡಿದ್ದಾಳೆ.

ಸಂತ್ರಸ್ತೆಯ ಕುಟುಂಬಸ್ಥರು ಆಕೆಯ ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ. ಕುಟುಂಬದೊಂದಿಗೆ ದೂರು ನೀಡಲು ಸಂತ್ರಸ್ತೆ ಹಾಪುರ್ ಕೊಟ್ವಾಲಿ ಪೊಲೀಸ್  ಠಾಣೆ ತಲುಪಿದಾಗ ಆಕೆಯನ್ನು ಮರುದಿನ ಬರುವಂತೆ ಹೇಳಲಾಗಿದೆ.

ನಗರದ ಕೊಟ್ವಾಲಿ ಪ್ರದೇಶದ ಮೋತಿ ಕಾಲೋನಿಯಲ್ಲಿ ವಾಸಿಸುವ ರುಖ್ಸರ್ ಸುಮಾರು 3 ವರ್ಷಗಳ ಹಿಂದೆ ತನ್ನ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಸುಲ್ತಾನನನ್ನು ಮದುವೆಯಾದನು. ರುಖ್ಸರ್ ಅವರ ತಂದೆ ತಮ್ಮ ಮಗಳಿಗೆ ಅವರ ಸ್ಥಾನಮಾನಕ್ಕೆ ಅನುಗುಣವಾಗಿ ದೇಣಿಗೆಯಾಗಿ ವರದಕ್ಷಿಣೆ ನೀಡಿದರು. ಪತಿ ಸುಲ್ತಾನ್ ಅವರು ಮದುವೆಯಾಗಿ ಬಂದ ದಿನವೇ ಆಕೆಯನ್ನು ಥಳಿಸಿ ನಿಂದಿಸುತ್ತಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಮದುವೆಯ ನಂತರ, ಸಂತ್ರಸ್ತೆ ಒಬ್ಬ ಮಗ ಮತ್ತು ಮಗಳಿಗೆ ಜನ್ಮ ನೀಡಿದಳು. ಕಳೆದ ಹಲವು ದಿನಗಳಿಂದ ಅನಾರೋಗ್ಯದ ಕಾರಣ ತಾನು ಹಾಸಿಗೆಯಲ್ಲಿದ್ದೆ ಎಂದು ಸಂತ್ರಸ್ತೆ ಹೇಳಿದ್ದು, ಪತಿಯೊಂದಿಗೆ ಮತ್ತು ಆಕೆಯ ಪೋಷಕರು ಸಹ ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಆಕೆ ತಿಳಿಸಿದ್ದಾಳೆ.

ಶನಿವಾರ ಸಂಜೆ, ಸಂತ್ರಸ್ತೆಯು ಆಕೆಯ ಮಗುವಿನ ಆರೋಗ್ಯ ಹದಗೆಟ್ಟಾಗ, ಮಗುವಿನ ಔಷಧಿಗಾಗಿ 30 ರೂಪಾಯಿ ಕೇಳಿದರು. ಈ ಸಂದರ್ಭದಲ್ಲಿ ಆಕೆಗೆ ಚಿಕಿತ್ಸೆಗಾಗಿ ಹಣವನ್ನು ನೀಡುವ ಬದಲು, ಪತಿ ಅವಳನ್ನು ಥಳಿಸಿ ಮನೆಯಿಂದ ಹೊರಗೆ ಹಾಕಿ, ಆಕೆಗೆ ತಲಾಖ್, ತಲಾಖ್, ತಲಾಖ್ ಎಂದಿದ್ದಾನೆ.

ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಬಳಿಕ ಆಕೆಯೊಂದಿಗೆ ಒಂದೂವರೆ ವರ್ಷದ ಮಗ ಮತ್ತು 6 ತಿಂಗಳ ಮಗಳನ್ನೂ ಬೀದಿಗೆ ತಳ್ಳಿದ್ದಾನೆ. ತಾಯಿಯ ಮನೆಗೆ ತಲುಪಿದ ನಂತರ ಆಕೆ ಇಡೀ ವಿಷಯವನ್ನು ಕುಟುಂಬಕ್ಕೆ ತಿಳಿಸಿದರು. ನಂತರ ಕುಟುಂಬವು ಸಂತ್ರಸ್ತೆಯೊಂದಿಗೆ ಪೊಲೀಸ್ ಠಾಣೆಯನ್ನು ತಲುಪಿತು. ಅದೇ ಸಮಯದಲ್ಲಿ, ತ್ರಿವಳಿ ತಲಾಖ್ ಪ್ರಕರಣವು ಮುನ್ನೆಲೆಗೆ ಬಂದಿದೆ. ಈ ವಿಷಯದಲ್ಲಿ ಸರಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Trending News