'ಜೈ ಶ್ರೀ ರಾಮ್' ಹೇಳುವಂತೆ ಒತ್ತಾಯಿಸಿ ಮುಸ್ಲಿಂ ಧರ್ಮ ಗುರು ಮೇಲೆ ಹಲ್ಲೆ

 'ಜೈ ಶ್ರೀರಾಮ್' ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ಧರ್ಮಗುರುವೋಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶದ ಬಾಗಪತ್‌ನಲ್ಲಿ ನಡೆದಿದೆ.

Last Updated : Jul 15, 2019, 12:54 PM IST
'ಜೈ ಶ್ರೀ ರಾಮ್' ಹೇಳುವಂತೆ ಒತ್ತಾಯಿಸಿ ಮುಸ್ಲಿಂ ಧರ್ಮ ಗುರು ಮೇಲೆ ಹಲ್ಲೆ title=

ಬಾಗಪತ್: 'ಜೈ ಶ್ರೀರಾಮ್' ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ಧರ್ಮಗುರುವೋಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶದ ಬಾಗಪತ್‌ನಲ್ಲಿ ನಡೆದಿದೆ.

ಮುಝಫ್ಫರ್ ನಗರ ನಿವಾಸಿಯಾದ ಇಮಾಮ್ ಇಮ್ಲಾಕ್-ಉರ್-ರೆಹಮಾನ್ ಅವರು ಶನಿವಾರ ತಮ್ಮ ಬೈಕ್‌ ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಸುಮಾರು 12 ಯುವಕರು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೆ ಅವರ ಗಡ್ಡವನ್ನೂ ಎಳೆದಾಡಿದ್ದಾರೆ. "'ಜೈ ಶ್ರೀರಾಮ್' ಘೋಷಣೆ ಕೂಗುವಂತೆಯೂ ತನ್ನನ್ನು ಬಲವಂತ ಮಾಡಿದರು. ಬಳಿಕ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ನಾನು ಜೋರಾಗಿ ಕೂಗಿಕೊಂಡಾಗ ನನ್ನ ಗ್ರಾಮದ ಇಬ್ಬರು ವ್ಯಕ್ತಿಗಳು ಬಂದು ನನ್ನನ್ನು ರಕ್ಷಿಸಿದರು" ಅವರುಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬಾಗಪತ್ ಎಸ್‌ಪಿ ಶೈಲೇಶ್ ಕುಮಾರ್ ಪಾಂಡೆ, ಮೇಲ್ನೋಟಕ್ಕೆ ಇದೊಂದು ದೈಹಿಕ ಹಲ್ಲೆ ಪ್ರಕರಣದಂತೆ ಕಂಡುಬಂದರೂ ಇಮಾಮ್ ದೂರಿನ ಮೇರೆಗೆ 12 ಯುವಕರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯ ಆಧಾರದಲ್ಲಿ ಅವರ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು ಎಂದು ಹೇಳಿದ್ದಾರೆ. 
 

Trending News