Coronavirus: ಚೀನಾದ ವಂಚನೆಗೆ ಪ್ರತ್ಯುತ್ತರ ಭಾರತೀಯ ವಿಜ್ಞಾನಿಗಳ ಕಮಾಲ್

ಕೋವಿಡ್ -19 ರ ತನಿಖೆಗಾಗಿ ಐಐಟಿ ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸಸ್‌ನ ಸಂಶೋಧಕರು ಸಿದ್ಧಪಡಿಸಿದ ಕಿಟ್‌ಗೆ ಐಸಿಎಂಆರ್ ಅನುಮೋದನೆ ನೀಡಿದೆ.

Last Updated : Apr 24, 2020, 10:54 AM IST
Coronavirus: ಚೀನಾದ ವಂಚನೆಗೆ ಪ್ರತ್ಯುತ್ತರ ಭಾರತೀಯ ವಿಜ್ಞಾನಿಗಳ ಕಮಾಲ್ title=

ನವದೆಹಲಿ: ದೇಶದಲ್ಲಿ ಕರೋನಾವೈರಸ್ (Coronavirus)  ಸೋಂಕನ್ನು ಪರೀಕ್ಷಿಸಲು ಹೆಚ್ಚಿನ ಸಂಖ್ಯೆಯ ಕಿಟ್‌ಗಳು ಅಗತ್ಯವಿದೆ. ಇನ್ನೊಂದೆಡೆ ಸೋಂಕು ಪರೀಕ್ಷೆಗಾಗಿ ಚೀನಾದಂತಹ ದೇಶಗಳಿಂದ ಬಂದಿರುವ ಹೆಚ್ಚಿನ ಕಿಟ್‌ಗಳಲ್ಲಿ ದೋಷಗಳು ಬೆಳಕಿಗೆ ಬಂದಿವೆ. ಈಗ ಇಂತಹ ಕಷ್ಟ ಕಾಲದಲ್ಲಿ ಭಾರತೀಯ ವಿಜ್ಞಾನಿಗಳು ಪವಾಡವನ್ನು ಮಾಡಿದ್ದಾರೆ. ಹೌದು, ಐಐಟಿ ದೆಹಲಿ ಆರ್ಟಿ-ಪಿಸಿಆರ್ ಕಿಟ್ ತಯಾರಿಸಿದ್ದು ತನಿಖೆಯ ನಂತರ ಐಸಿಎಂಆರ್ ಗ್ರೀನ್ ಸಿಗ್ನಲ್ ನೀಡಿದೆ. ಈಗ ಈ ಕಿಟ್ ಆರ್ಟಿ ಪಿಸಿಆರ್ ಕಿಟ್ ಮೂಲಕ ದೇಶಾದ್ಯಂತ ಪರೀಕ್ಷಿಸಲಿದೆ.

ಕೊರೋನಾ ಪೀಡಿತರ ಸಂಖ್ಯೆ, 23,077ಕ್ಕೆ, ಮೃತಪಟ್ಟವರ ಸಂಖ್ಯೆ‌ 718ಕ್ಕೆ ಏರಿಕೆ

ಈ ಕಿಟ್ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಐಐಟಿ ದೆಹಲಿಯ ಎರಡು ಕಂಪನಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಈ ಕಿಟ್ ಮಾರುಕಟ್ಟೆಗೆ ಬಂದ ನಂತರ ಅಗ್ಗದ ದರದಲ್ಲಿ ಕರೋನವನ್ನು ಸರಿಯಾಗಿ ಪರೀಕ್ಷಿಸಬಹುದು. ಕೋವಿಡ್-19 (Covid-19) ರ ತನಿಖೆಗಾಗಿ ಐಐಟಿ ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸಸ್‌ನ ಸಂಶೋಧಕರು ಸಿದ್ಧಪಡಿಸಿದ ಕಿಟ್‌ಗೆ ಐಸಿಎಂಆರ್ (ICMR) ಅನುಮೋದನೆ ನೀಡಿದೆ.

ಐಐಟಿ ದೆಹಲಿ ಆರ್ಟಿ-ಪಿಸಿಆರ್ ಆಧಾರಿತ ಕಿಟ್‌ಗಳಿಗಾಗಿ ಐಸಿಎಂಆರ್‌ನಿಂದ ಅನುಮೋದನೆ ಪಡೆದ ಮೊದಲ ಶಿಕ್ಷಣ ಸಂಸ್ಥೆಯಾಗಿದೆ.

ಸಿನಿ ಜಗತ್ತಿಗೆ ಬರುವ ಮೊದಲೇ ವಿವಾಹವಾಗಿದ್ದ ನಟಿಮಣಿಯರು - SEE PHOTOS

ದೇಶದಲ್ಲಿ ಬೆಳೆಯುತ್ತಿರುವ ಕೊರೊನಾವೈರಸ್ ಪ್ರಕರಣಗಳು ಸರ್ಕಾರದ ಕಾಳಜಿಯನ್ನು ಹೆಚ್ಚಿಸಿವೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಕರೋನಾ ಸೋಂಕಿತರ ಸಂಖ್ಯೆ 23 ಸಾವಿರ ದಾಟಿದೆ. ಸಾವಿನ ಸಂಖ್ಯೆ 718ಕ್ಕೆ ಏರಿದೆ. 4749 ರೋಗಿಗಳು ಚೇತರಿಸಿಕೊಂಡು ಮರಳಿ ತಮ್ಮ ಮನೆಗಳಿಗೆ ಹೋಗಿದ್ದಾರೆ.

ನಿಮ್ಮ Credit-Debit ಕಾರ್ಡ್ ಕಳೆದು ಹೋದಲ್ಲಿ ಈ 5 ವಿಷಯಗಳನ್ನು ನೆನಪಿನಲ್ಲಿಡಿ

ಅದೇ ಸಮಯದಲ್ಲಿ ಕೇಳಿ ಬಂದಿರುವ ಒಂದು ನೆಮ್ಮದಿಯ ಸುದ್ದಿಯೆಂದರೆ ಇಲ್ಲಿಯವರೆಗೆ ದೇಶದ 3 ರಾಜ್ಯಗಳು ಕರೋನಾ ಸೋಂಕಿನಿಂದ ಸಂಪೂರ್ಣವಾಗಿ ಮುಕ್ತವಾಗಿವೆ. ಇತ್ತೀಚಿನ ಪ್ರಕರಣ ತ್ರಿಪುರದಾಗಿದ್ದು, ಅಲ್ಲಿ ಕರೋನಾದ ಎಲ್ಲಾ ರೋಗಿಗಳನ್ನು ಗುಣಪಡಿಸಲಾಗಿದೆ. ಅದೇ ಸಮಯದಲ್ಲಿ ಕರೋನಾ ಏಕಾಏಕಿ ಕಡಿಮೆಯಾದ ರಾಜ್ಯಗಳಲ್ಲಿ ಗೋವಾ ಮತ್ತು ಮಣಿಪುರವನ್ನು ಸಹ ಸೇರಿಸಲಾಗಿದೆ. ಈ ರಾಜ್ಯಗಳು ಕರೋನಾದಿಂದ ಮುಕ್ತವಾಗಿವೆ.

Trending News