ನೇಪಾಳದಲ್ಲಿ ಕೇರಳದ ಎಂಟು ಪ್ರವಾಸಿಗರು ಅನುಮಾಸ್ಪದ ಸಾವು

ನಾಲ್ಕು ಅಪ್ರಾಪ್ತ ವಯಸ್ಕರು ಸೇರಿದಂತೆ ಕೇರಳದ ಎಂಟು ಪ್ರವಾಸಿಗರು ಮಂಗಳವಾರ ನೇಪಾಳದ ಪೋಖರಾದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರವಾಸಿಗರು ನೇಪಾಳಕ್ಕೆ ಪ್ರಯಾಣಿಸುವ 15 ಸದಸ್ಯರ ಗುಂಪಿನ ಒಂದು ಭಾಗವಾಗಿದ್ದರು. ಪ್ರವಾಸಿಗರು ತಮ್ಮ ರೆಸಾರ್ಟ್‌ನ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಕಠ್ಮಂಡುವಿನ ಹ್ಯಾಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿಗೆ ಬರುವಾಗ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

Last Updated : Jan 21, 2020, 06:40 PM IST
 ನೇಪಾಳದಲ್ಲಿ ಕೇರಳದ ಎಂಟು ಪ್ರವಾಸಿಗರು ಅನುಮಾಸ್ಪದ ಸಾವು  title=
Photo courtesy: Reuters

ನವದೆಹಲಿ: ನಾಲ್ಕು ಅಪ್ರಾಪ್ತ ವಯಸ್ಕರು ಸೇರಿದಂತೆ ಕೇರಳದ ಎಂಟು ಪ್ರವಾಸಿಗರು ಮಂಗಳವಾರ ನೇಪಾಳದ ಪೋಖರಾದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರವಾಸಿಗರು ನೇಪಾಳಕ್ಕೆ ಪ್ರಯಾಣಿಸುವ 15 ಸದಸ್ಯರ ಗುಂಪಿನ ಒಂದು ಭಾಗವಾಗಿದ್ದರು. ಪ್ರವಾಸಿಗರು ತಮ್ಮ ರೆಸಾರ್ಟ್‌ನ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಕಠ್ಮಂಡುವಿನ ಹ್ಯಾಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿಗೆ ಬರುವಾಗ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ವಿದೇಶಾಂಗ ಸಚಿವ ಎಸ್.ಜೈಶಂಕರ್ ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿ "ನೇಪಾಳದ ನಮ್ಮ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ರಾಯಭಾರ ಕಚೇರಿಯ ಅಧಿಕಾರಿಗಳನ್ನು ಆಸ್ಪತ್ರೆಯಲ್ಲಿದ್ದು ಅವರು  ಅಗತ್ಯ ನೆರವು ನೀಡುತ್ತಿದ್ದಾರೆ ಎಂದು ಅವರು ಮಂಗಳವಾರ ಹೇಳಿದರು.ಪ್ರವಾಸಿಗರು ಉಸಿರುಗಟ್ಟಿಸುವುದರಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರು ಹೇಳುತ್ತಾರೆ. "ಅವರು ಕೋಣೆಯಲ್ಲಿ ಗ್ಯಾಸ್ ಹೀಟರ್ ಬಳಸುತ್ತಿದ್ದರು, ಉಸಿರುಗಟ್ಟಿಸುವಿಕೆಯು ಅವರ ಸಾವಿಗೆ ಕಾರಣವಾಗಬಹುದು" ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಪ್ರವಾಸಿಗರ ಗುಂಪು ಪೋಖರಾದಿಂದ ಹಿಂತಿರುಗಿ ಬರುತ್ತಿದ್ದು, ಸೋಮವಾರ ರಾತ್ರಿ ಮಕ್ವಾನ್‌ಪುರ ಜಿಲ್ಲೆಯ ಎವರೆಸ್ಟ್ ಪನೋರಮಾ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಈಗ ಮೃತಪಟ್ಟ ಸಂತ್ರಸ್ತರನ್ನು ಪ್ರವೀಣ್ ಕೃಷ್ಣನ್ ನಾಯರ್, ಶರಣ್ಯ ಸಾಸಿ, ಶ್ರೀಭದ್ರ ಪ್ರವೀಣ್, ಅರ್ಚಾ ಪ್ರವೀಣ್, ಅಭಿನವ್ ಶರಣ್ಯ ನಾಯರ್, ರಂಜಿತ್ ಕುಮಾರ್ ಅಡತೋಲಥ್ ಪುನತಿಲ್, ಇಂದೂ ಲಕ್ಷ್ಮಿ ಪೀಠಂಬರನ್ ರಾಗಲಥ ಮತ್ತು ವೈಷ್ಣವ್ ರಂಜಿತ್ ಎಂದು ಗುರುತಿಸಿಸಲಾಗಿದೆ. ನೇಪಾಳದಲ್ಲಿನ ಮಲಯಾಳಿ ಪ್ರವಾಸಿಗರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಮೃತಪಟ್ಟವರ ದೇಹಗಳನ್ನು ವಾಪಸ್ ಕಳುಹಿಸುವ ಕಾರ್ಯವಿಧಾನಗಳನ್ನು ತ್ವರಿತಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

 

Trending News