ಕರ್ನಾಟಕದಲ್ಲಿ 4 ಸ್ಥಾನಗಳಿಗಾಗಿ ಮಾರ್ಚ್ 23 ಕ್ಕೆ ರಾಜ್ಯಸಭಾ ಚುನಾವಣೆ

     

Last Updated : Feb 23, 2018, 09:15 PM IST
 ಕರ್ನಾಟಕದಲ್ಲಿ 4 ಸ್ಥಾನಗಳಿಗಾಗಿ ಮಾರ್ಚ್ 23 ಕ್ಕೆ ರಾಜ್ಯಸಭಾ ಚುನಾವಣೆ title=

ಬೆಂಗಳೂರು: ಕರ್ನಾಟಕದಲ್ಲಿನ ನಾಲ್ಕು ರಾಜ್ಯಸಭಾ ಸದಸ್ಯರ ಅವಧಿ ಮುಗಿದಿದ್ದು. ಈಗ ಆ ಖಾಲಿಯಾಗಿರುವ ಸದಸ್ಯರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ರಾಜಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದೆ.

ಚುನಾವಣಾ ಆಯೋಗದ ಅಧಿಸೂಚನೆಯಂತೆ ರಾಜ್ಯಸಭಾ ಚುನಾವಣೆಯು ಮಾರ್ಚ್ 23 ರಂದು ನಡೆಯಲಿದ್ದು ಮತ್ತು ಅದೇ ದಿನ ಅಂತಿಮ ಫಲಿತಾಂಶವನ್ನು ಪ್ರಕಟಿಸಲಿದೆ ಎಂದು ತಿಳಿಸಿದೆ.

ಕರ್ನಾಟಕದಿಂದ ಕೆ,ರೆಹಮಾನ ಖಾನ್, ರಾಜೀವ್ ಚಂದ್ರಶೇಖರ್, ಆರ್ ರಾಮಕೃಷ್ಣ, ಮತ್ತು ಬಸವರಾಜ ಪಾಟೀಲ್ ಸೇಡಂ, ಒಟ್ಟು ನಾಲ್ಕು ಸದಸ್ಯರ ರಾಜ್ಯಸಭಾ ಅವಧಿ ಮುಗಿಯುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗವನ್ನು ಈಗ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದೆ.

Trending News