ತಂದೆಯ ಪರವಾಗಿ ಭಾರತ ರತ್ನ ಸ್ವೀಕರಿಸುವುದು ನಿಜಕ್ಕೂ ಗೌರವದ ಸಂಗತಿ - ತೇಜ್ ಹಜಾರಿಕಾ

ತಂದೆ ಭೂಪೇನ್ ಹಜಾರಿಕಾ ಪರವಾಗಿ ಭಾರತ ರತ್ನ ಸ್ವೀಕರಿಸುವುದು ನಿಜಕ್ಕೂ ಹೆಮ್ಮೆ ಪುತ್ರ ತೇಜ್ ಹಜಾರಿಕಾ ತಿಳಿಸಿದ್ದಾರೆ.

Last Updated : Feb 15, 2019, 07:00 PM IST
ತಂದೆಯ ಪರವಾಗಿ ಭಾರತ ರತ್ನ ಸ್ವೀಕರಿಸುವುದು ನಿಜಕ್ಕೂ ಗೌರವದ ಸಂಗತಿ - ತೇಜ್ ಹಜಾರಿಕಾ title=

ನವದೆಹಲಿ: ತಂದೆ ಭೂಪೇನ್ ಹಜಾರಿಕಾ ಪರವಾಗಿ ಭಾರತ ರತ್ನ ಸ್ವೀಕರಿಸುವುದು ನಿಜಕ್ಕೂ ಹೆಮ್ಮೆ ಪುತ್ರ ತೇಜ್ ಹಜಾರಿಕಾ ತಿಳಿಸಿದ್ದಾರೆ.

ಭಾರತ ಸರ್ಕಾರ ತಂದೆ ಪರವಾಗಿ ಪ್ರಶಸ್ತಿ ಸ್ವೀಕರಿಸಲು ಆಹ್ವಾನ ನೀಡಿರುವ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ತೇಜ್ ಹಜಾರಿಕಾ " ಭಾರತ ಸರ್ಕಾರ ನನ್ನನ್ನು ತಂದೆಯ ಪರವಾಗಿ  ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲು ಆಹ್ವಾನ ನೀಡಿದೆ. ಭಾರತದ ಐಕ್ಯತೆಗೆ ಹಾಗೂ ಪ್ರಗತಿಪರ ದೇಶಕ್ಕಾಗಿ ನನ್ನ ತಂದೆ ತ್ಯಾಗ ಮಾಡಿದ್ದಾರೆ.ಇದಕ್ಕಾಗಿ ಅವರನ್ನು ಈಗ ಗುರುತಿಸಿ ಗೌರವಿಸಲಾಗಿದೆ. ಈಗ ನನಗೆ ಮತ್ತು ನನ್ನ ಕುಟುಂಬಕ್ಕೆ ತಂದೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಸಂತಸ ತಂದಿದೆ" ಎಂದು ತಿಳಿಸಿದ್ದಾರೆ.

ಎಲ್ಲ ಕಡೆ ಇರುವ ನನ್ನ ತಂದೆ ಅಭಿಮಾನಿಗಳಿಗೆ ಮತ್ತು ನನಗೆ ಈ ಪ್ರಶಸ್ತಿಯನ್ನು ಸ್ವೀಕರಿಸುವುದು ನಿಜಕ್ಕೂ ಸಂತಸ ತಂದಿದೆ.ನಾನು ಯಾವಾಗಲು ಕತ್ತಲೆಯಿಂದ ಬೆಳಕನ್ನು ಪಸರಿಸುವ ನನ್ನ ತಂದೆಯ ಪಥದಲ್ಲಿ ಸಾಗಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.ಅಲ್ಲದೆ ಫೆ.11 ರಂದು ತಮ್ಮ ಫೆಸ್ಬೂಕ್ ಪೋಸ್ಟ್ ನ್ನು ಸಂಪೂರ್ಣವಾಗಿ ತಿರುಚಿದ್ದಾರೆ ಎಂದು ಅವರು ಹೇಳಿದರು. 
 

Trending News