ದೆಹಲಿ: ಕೇಶಪುರಂನ ರಬ್ಬರ್ ಗೋದಾಮಿನೊಳಗೆ ಬೆಂಕಿ ಅವಘಡ

ಗೋದಾಮಿನೊಳಗೆ ಕನಿಷ್ಠ ಏಳು ಜನರು ಸಿಲುಕಿರಬಹುದು ಎನ್ನಲಾಗುತ್ತಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ವರದಿಯಾಗಿದೆ.

Last Updated : Jul 15, 2019, 09:31 AM IST
ದೆಹಲಿ: ಕೇಶಪುರಂನ ರಬ್ಬರ್ ಗೋದಾಮಿನೊಳಗೆ ಬೆಂಕಿ ಅವಘಡ title=
Representational Image

ನವದೆಹಲಿ: ದೆಹಲಿಯ ಕೇಶಾಪುರಂ ಪ್ರದೇಶದ ರಬ್ಬರ್ ಗೋದಾಮಿನಲ್ಲಿ ಸೋಮವಾರ ಮುಂಜಾನೆ ಭಾರಿ ಬೆಂಕಿ ಅವಘಡ ಸಂಭವಿಸಿದೆ. 

ಬೆಂಕಿಯನ್ನು ನಂದಿಸಲು 20 ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಗೋದಾಮಿನೊಳಗೆ ಕನಿಷ್ಠ ಏಳು ಜನರು ಸಿಲುಕಿರಬಹುದು ಎನ್ನಲಾಗುತ್ತಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ವರದಿಯಾಗಿದೆ.

ಒಂದು ವಾರದೊಳಗೆ ನಗರದಲ್ಲಿ ಸಂಭವಿಸಿದ ಮೂರನೇ ಬೆಂಕಿ ಅನಾಹುತ ಇದಾಗಿದೆ. ಕಳೆದ ಶನಿವಾರ ಜಿಲ್ಮಿಲ್ ಕೈಗಾರಿಕಾ ಪ್ರದೇಶದ ರಬ್ಬರ್ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘದಲ್ಲಿ ಮೂವರು ಸಾವನ್ನಪ್ಪಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಘೋಷಿಸಿದರು.

ಇದಕ್ಕೂ ಮುನ್ನ, ಬಸಾಯಿ ದಾರಾಪುರದ ಸರ್ಕಾರಿ ನೌಕರರ ರಾಜ್ಯ ವಿಮಾ ಮಾದರಿ ಆಸ್ಪತ್ರೆಯೊಳಗೆ ಬೆಂಕಿ ಕಾಣಿಸಿಕೊಂಡಿತ್ತು.

Trending News