ಅಂಗೈಯಲ್ಲೆ ಚಿನ್ನವಿದೆ! ಕನ್ನಡಿಯಲ್ಲಿ ನಿಕ್ಷೇಪ ತೋರುವರ ನಂಬದಿರಿ ಎಂದು ಜಗ್ಗೇಶ್ ಹೇಳಿದ್ದೇಕೆ?

ಎರಡು ಜೊತೆ ಬಟ್ಟೆಯೊಂದಿಗೆ ಬಂದ ಆತ, ಹೋಗುವಾಗಲೂ ಅಷ್ಟನ್ನೇ ಕೊಂಡೊಯ್ಯುತ್ತಾನೆ- ನವರಸನಾಯಕ ಜಗ್ಗೇಶ್  

Last Updated : Jan 11, 2019, 09:23 AM IST
ಅಂಗೈಯಲ್ಲೆ ಚಿನ್ನವಿದೆ! ಕನ್ನಡಿಯಲ್ಲಿ ನಿಕ್ಷೇಪ ತೋರುವರ ನಂಬದಿರಿ ಎಂದು ಜಗ್ಗೇಶ್ ಹೇಳಿದ್ದೇಕೆ? title=
File Image

ಬೆಂಗಳೂರು: ಹಿಂದೆಮುಂದೆ ಕಿತ್ತುತಿನ್ನುವ ಬಂಧು ಬಳಗದ ಬಂಧನವಿಲ್ಲದೆ!ಭಾರತವೆ ನನ್ನ ಮನೆ ಭಾರತವಾಸಿಗಳೆ ನನ್ನಬಂಧುಗಳು ಎಂದು ಪ್ರಾಮಾಣಿಕವಾಗಿ ಭಾರತದ ಬೆಳವಣಿಗೆಗೆ ಶ್ರಮಿಸುತ್ತಿರುವ ಈ ಮಹನೀಯನನ್ನು ರಾಜಕೀಯ ಚದುರಂಗದ ಕುತಂತ್ರಕ್ಕೆ ಬಲಿಕೊಟ್ಟರೆ ನಮ್ಮರಾಷ್ಟ್ರ ಮತ್ತೆ ಹಿಂದುಳಿಯುತ್ತದೆ!

ಅಂಗೈಯಲ್ಲೆ ಚಿನ್ನವಿದೆ!ಕನ್ನಡಿಯಲ್ಲಿ ನಿಕ್ಷೇಪ ತೋರುವರ ನಂಬದಿರಿ.! ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಜನತೆಗೆ ಕರೆ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗೆಗೆ ಈ ರೀತಿ ಟ್ವೀಟ್ ಮಾಡಿರುವ ಜಗ್ಗೇಶ್, ಎರಡು ಜೊತೆ ಬಟ್ಟೆಯೊಂದಿಗೆ ಬಂದ ಆತ, ಹೋಗುವಾಗಲೂ ಅಷ್ಟನ್ನೇ ಕೊಂಡೊಯ್ಯುತ್ತಾನೆ. ಅವನನ್ನು ಕಳೆದುಕೊಂಡರೆ ನಷ್ಟವಾಗುವುದು ನಮಗೆ ಮಾತ್ರ ಆತನಿಗಲ್ಲ ಎಂದು ಮೋದಿ ಅವರ ಸರಳತೆಯ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

Trending News