ನಿತಿನ್​​​ಗೆ ಮರಳಿದ ಹಣಕಾಸು ಖಾತೆ, ಶಮನಗೊಂಡ ಭಿನ್ನಮತ

ಉಪ ಮುಖ್ಯಮಂತ್ರಿ ನಿತಿನ್​ ಪಟೇಲ್​ ಅವರಿಗೆ ಹಣಕಾಸು ಖಾತೆಯನ್ನು ಮರಳಿ ನೀಡುವ ಮೂಲಕ ಗುಜರಾತ್​ ಬಿಜೆಪಿಯಲ್ಲಿ ಎದ್ದಿದ್ದ ಭಿನ್ನಮತವನ್ನು ಅಮಿತ ಷಾ ಶಮನಗೊಳಿಸಿದ್ದಾರೆ.

Last Updated : Jan 1, 2018, 01:36 PM IST
ನಿತಿನ್​​​ಗೆ ಮರಳಿದ ಹಣಕಾಸು ಖಾತೆ, ಶಮನಗೊಂಡ ಭಿನ್ನಮತ title=

ಅಹಮದಾಬಾದ್​: ಉಪ ಮುಖ್ಯಮಂತ್ರಿ ನಿತಿನ್​ ಪಟೇಲ್​ ಅವರಿಗೆ ಹಣಕಾಸು ಖಾತೆಯನ್ನು ಮರಳಿ ನೀಡುವ ಮೂಲಕ ಗುಜರಾತ್​ ಬಿಜೆಪಿಯಲ್ಲಿ ಎದ್ದಿದ್ದ ಭಿನ್ನಮತವನ್ನು ಅಮಿತ ಷಾ ಶಮನಗೊಳಿಸಿದ್ದಾರೆ.

ಡಿ.28 ರಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ನಿತಿನ್​ ಪಟೇಲ್​ ಕಚೇರಿಗೆ ಆಗಮಿಸಿರಲಿಲ್ಲ. ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಪಟೇಲ್​ಗೆ ಕರೆ ಮಾಡಿದ ಅಮಿತ್​ ಷಾ, ಹಣಕಾಸು ಖಾತೆಯನ್ನು ಮರಳಿಸುವುದಾಗಿ ಅವರಿಗೆ ಭರವಸೆ ನೀಡಿದ ಮೇಲೆ ಉದ್ಭವಗೊಂಡಿದ್ದ ಭಿನ್ನಮತ ಶಮನಗೊಂಡಿದೆ.

ಇದಕ್ಕೂ ಮೊದಲು ಈ ಖಾತೆಯನ್ನು ಸೌರಭ್​ ಪಟೇಲ್​ ಅವರಿಗೆ ನೀಡಲಾಗಿತ್ತು. ಮುಖ್ಯ ಮಂತ್ರಿ ವಿಜಯ್​ ರೂಪಾಣಿ ಈಗಾಗಲೇ ಖಾತೆಯ ಬದಲಾವಣೆಯ ಬಗ್ಗೆ ರಾಜ್ಯಪಾಲರಿಗೆ ತಿಳಿಸಿದ್ದಾರೆ. ನಿತಿನ್​ ಪಟೇಲ್​ ಕೂಡ ತಮ್ಮ ಇಷ್ಟದ ಖಾತೆ ದೊರೆತಿರುವುದರಿಂದ ಬಂಡಾಯದ ಬಾವುಟವನ್ನು ಇಳಿಸಿದ್ದಾರೆ.

Trending News