Local Toysಗಳಿಗೆ Vocal ಆಗುವ ಸಮಯ ಕೂಡಿಬಂದಿದೆ: ಪ್ರಧಾನಿ ಮೋದಿ

ಕರೋನಾ ಅವಧಿಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಭಾನುವಾರದ  'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪುನರುಚ್ಛರಿಸಿದ್ದಾರೆ. ಇದೇ ವಲೇ ಹಬ್ಬ ಮತ್ತು ಪರಿಸರದ ನಡುವೆ ವಿಶಿಷ್ಟ ಸಂಬಂಧವಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

Last Updated : Aug 30, 2020, 12:29 PM IST
Local Toysಗಳಿಗೆ  Vocal ಆಗುವ ಸಮಯ ಕೂಡಿಬಂದಿದೆ: ಪ್ರಧಾನಿ ಮೋದಿ title=

ನವದೆಹಲಿ: ತಮ್ಮ ಭಾನುವಾರದ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಭಾರತೀಯರು ಹೊಸತನ ಮತ್ತು ಪರಿಹಾರಗಳನ್ನು ನೀಡುವ ಸಾಮರ್ಥ್ಯ ಎಲ್ಲರೂ ಅರಿತಿದ್ದಾರೆ ಮತ್ತು ಸಮರ್ಪಣೆ, ಸಹಾನುಭೂತಿ ಇದ್ದಾಗ ಈ ಶಕ್ತಿ ಅಪಾರವಾಗುತ್ತದೆ. ಆನ್‌ಲೈನ್ ಆಟಗಳನ್ನು ತಯಾರಿರುವಂತೆ ದೇಶದ ಯುವಕರಿಗೆ ಮನವಿ ಮಾಡಿದ್ದಾರೆ. ನೀವು ಸುರಕ್ಷಿತವಾಗಿರುವಾಗ ಮಾತ್ರ ಕರೋನಾ ಅನ್ನು ಸೋಲಿಸಲು ಸಾಧ್ಯ ಎಂದು ಪಿಎಂ ಮೋದಿ ಹೇಳಿದ್ದಾರೆ. 'ದೋ ಗಜ್ ದೂರಿ, ಮಾಸ್ಕ್ ಜರೂರಿ' ಈ ಸಂಕಲ್ಪವನ್ನು ಸಂಪೂರ್ಣವಾಗಿ ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ.

ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಅತ್ಯಂತ ಶ್ರೀಮಂತ ಸಂಪ್ರದಾಯವಿದೆ. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ಮಿಗಳು ಇದ್ದಾರೆ. ಭಾರತದ ಕೆಲವು ಪ್ರದೇಶಗಳು ಆಟಿಕೆ ಸಮೂಹಗಳಾಗಿ ಅಭಿವೃದ್ಧಿ ಹೊಂದುತ್ತಿವೆ. ಆಟಿಕೆಗಳು ಮಕ್ಕಳಲ್ಲಿ ಚಟುವಟಿಕೆಯ  ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಅವರಿಗೆ ನೂತನ ಆಕಾಂಕ್ಷೆಗಳ ಹೊಸ ಹಾರಾಟವನ್ನು ನೀಡುತ್ತವೆ. ಆಟಿಕೆಗಳು ಕೇವಲ ಮನರಂಜನೆಯನ್ನು ಮಾತ್ರ ನೀಡುವುದಿಲ್ಲ.  ಆಟಿಕೆಗಳು ಮನಸ್ಸು ಹಾಗೂ ಉದ್ದೇಶಗಳನ್ನು ಸೃಷ್ಟಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಗ್ಲೋಬಲ್ ಟಾಯ್ ಇಂಡಸ್ಟ್ರಿ 7 ಲಕ್ಷ ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತವೆ. ಆದರೆ ಇದರಲ್ಲಿ ಭಾರತದ ಪಾಲು ತೀರಾ ಕಡಿಮೆಯಾಗಿದೆ.  ಇಷ್ಟೊಂದು ದೊಡ್ಡ ಪರಂಪರೆ ಹಾಗೂ ಸಂಪ್ರದಾಯವನ್ನು ಹೊಂದಿರುವ ಭಾರತದಂತಹ ದೇಶ ಆಟಿಕೆಗಳ ಮಾರುಕಟ್ಟೆಯಲ್ಲಿ ಇಷ್ಟೊಂದು ಕಡಿಮೆ ಪ್ರಮಾಣದ ಪಾಲುದಾರಿಕೆ ಹೊಂದಿರುವುದು ಉಚಿತವೆ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಸಾಮಾನ್ಯವಾಗಿ ಭಾರತದಲ್ಲಿ ಸದ್ಯದ ಸಮಯ ಹಬ್ಬಗಳ ಆಚರಣೆಯ ಸಮಯವಾಗಿದೆ. ವಿವಿಧ ಸ್ಥಳಗಳಲ್ಲಿ ಜಾತ್ರೆಗಳು ನಡೆಯುತ್ತವೆ, ಧಾರ್ಮಿಕ ಪ್ರಾರ್ಥನೆ ನಡೆಸಲಾಗುತ್ತದೆ. ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆಯೂ ಕೂಡ ಜನರಲ್ಲಿ ಉತ್ಸಾಹವಿದೆ, ಮನ ಮುಟ್ಟುವ  ಶಿಸ್ತು ಕೂಡ ಇದೆ. ಕರೋನಾ ಅವಧಿಯಲ್ಲಿ ಇಂದ್ರಿಯ ನಿಗ್ರಹವನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಜನರು ಹಬ್ಬವನ್ನು ಸರಳತೆ ಮತ್ತು ಸಂಯಮದಿಂದ ಆಚರಿಸುತ್ತಿದ್ದಾರೆ. ಗಣೇಶ್ ಉತ್ಸವವನ್ನು ಅನೇಕ ಸ್ಥಳಗಳಲ್ಲಿ ಆನ್‌ಲೈನ್‌ನಲ್ಲಿ ಆಚರಿಸಲಾಗಿದೆ. ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ರೂಪದಲ್ಲಿ ಆಚರಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಬಹಳ ಸೂಕ್ಷ್ಮವಾಗಿ ಗಮನಿಸಿದರೆ, ನಾವು  ಒಂದು ವಿಷಯ ಖಂಡಿತವಾಗಿಯೂ ಹೇಳಬಹುದು. ಅದೇನೆಂದರೆ - ನಮ್ಮ ಹಬ್ಬಗಳು ನಮ್ಮ ಪರಿಸರ . ಇವೆರಡರ ನಡುವೆ  ಬಹಳ ಆಳವಾದ ಸಂಬಂಧವಿದೆ. ಪಶ್ಚಿಮ ಚಂಪಾರಣ್, ಬಿಹಾರ, ಥಾರು ಬುಡಕಟ್ಟು ಜನಾಂಗದ ಜನರು ಶತಮಾನಗಳಿಂದ  60 ಗಂಟೆಗಳ ಲಾಕ್‌ಡೌನ್, ಅಂದರೆ ಅವರ ಭಾಷೆಯಲ್ಲಿ ಹೇಳುವುದಾದರೆ '60 - ಗಂಟೆಗಳ ಬರ್ನಾ 'ಅನುಸರಿಸುತ್ತಿದ್ದಾರೆ.  ಪ್ರಕೃತಿಯನ್ನು ರಕ್ಷಿಸಲು ಥಾರು ಬಾರ್ನಾ ಸಮುದಾಯದ ಜನರು ತಮ್ಮ ಸಂಪ್ರದಾಯದ ಒಂದು ಭಾಗವನ್ನಾಗಿ ಇದನ್ನು ಪಾಲಿಸುತ್ತಿದ್ದಾರೆ. ಭತ್ತ ಕಸಿ ಮಾಡುವಿಕೆಯು 5% ಹೆಚ್ಚಾಗಿದೆ. ಅನ್ನದಾತನ ಶಕ್ತಿಗೆ ವೇದಗಳಲ್ಲಿ ವಂದನೆ ನೀಡಲಾಗಿದೆ.

Trending News