10 ಕೋಟಿ ಜನರಿಗೆ ಲಾಭವಾಗುವ ಈ ಯೋಜನೆಗೆ ಇಂದು ಪ್ರಧಾನಿ ಮೋದಿಯಿಂದ ಚಾಲನೆ!

ಮಂಗಳವಾರ (ಮಾರ್ಚ್ 5) ಅಸಂಘಟಿತ ವಲಯ ಕಾರ್ಮಿಕರಿಗೆ ಮೋದಿ ಪಿಂಚಣಿ ಯೋಜನೆಯನ್ನು ಆರಂಭಿಸಲಿದ್ದಾರೆ. ಪ್ರಧಾನಿ ಶ್ರಮ ಯೋಗಿ ಮನ್-ಧನ್ (PMSYM) ಯೋಜನೆಗೆ ಔಪಚಾರಿಕವಾಗಿ ಅಹಮದಾಬಾದ್ನಲ್ಲಿ ಚಾಲನೆ ನೀಡಲಿದ್ದಾರೆ.  

Last Updated : Mar 5, 2019, 09:32 AM IST
10 ಕೋಟಿ ಜನರಿಗೆ ಲಾಭವಾಗುವ ಈ ಯೋಜನೆಗೆ ಇಂದು ಪ್ರಧಾನಿ ಮೋದಿಯಿಂದ ಚಾಲನೆ!  title=

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಮಾರ್ಚ್ 5) ಅಸಂಘಟಿತ ವಲಯದ ಕಾರ್ಮಿಕರ ಪಿಂಚಣಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಶ್ರಮ ಯೋಗಿ ಮನ್-ಧನ್ (PMSYM) ಯೋಜನೆಗೆ ಔಪಚಾರಿಕವಾಗಿ ಅಹಮದಾಬಾದ್ನಲ್ಲಿ ಚಾಲನೆ ನೀಡಲಿದ್ದಾರೆ.

ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಅಸಂಘಟಿತ ವಲಯದಲ್ಲಿ ಕೆಲಸಗಾರರಿಗೆ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲು ಘೋಷಿಸಿದರು.

ಈ ಯೋಜನೆಗೆ ಸೇರಲು ಒಟ್ಟು 3.13 ಲಕ್ಷ ಸೇವಾ ಕೇಂದ್ರಗಳನ್ನು ದೇಶದಾದ್ಯಂತ ರಚಿಸಲಾಗಿದೆ. ಈ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಫೆಬ್ರವರಿ 15 ರಿಂದ ನಡೆಯುತ್ತಿದೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ (ಎಲ್ಐಸಿ) ಈ ಯೋಜನೆಯನ್ನು ಅಂತಿಮಗೊಳಿಸುವ ಜವಾಬ್ದಾರಿಯನ್ನು ಪಡೆದಿದೆ. ಎಲ್ಐಸಿಯ ದೊಡ್ಡ ಜಾಲವನ್ನು ಯೋಜನೆಯಲ್ಲಿ ನೋಂದಣಿಗಾಗಿ ಬಳಸಲಾಗುತ್ತಿದೆ. ಇದರ ಅಡಿಯಲ್ಲಿ, ಅಸಂಘಟಿತ ವಲಯದ 18 ರಿಂದ 40 ವರ್ಷ ವಯಸ್ಸಿನ ಅರ್ಹ ಕೆಲಸಗಾರರು ಅಳವಡಿಸಿಕೊಳ್ಳಲು ಅರ್ಹರಾಗಿರುತ್ತಾರೆ. 

ಈ ಯೋಜನೆಯಡಿ ಕಾರ್ಮಿಕರಿಗೆ 60 ವರ್ಷದ ಬಳಿಕ ತಿಂಗಳಿಗೆ 3 ಸಾವಿರ ರೂ. ಪಿಂಚಣಿಯನ್ನು ಖಾತ್ರಿ ಪಡಿಸಲಾಗಿದೆ. ಅಂದರೆ, ಕಾರ್ಮಿಕ ತಿಂಗಳಿಗೆ 100 ರೂ. ಈ ಯೋಜನೆಯಲ್ಲಿ ತೊಡಗಿಸಿದರೆ, ಸರಕಾರವೂ ಅಷ್ಟೇ ಪಾಲನ್ನು ನೀಡುತ್ತದೆ. ಅಂದರೆ, ಕಾರ್ಮಿಕ 60 ವರ್ಷ ವಯಸ್ಸಿಗೆ ತಲುಪಿದಾಗ ಆತನಿಗೆ ತಿಂಗಳಿಗೆ ಕನಿಷ್ಠ 3000 ರೂ. ಪಿಂಚಣಿ ದೊರೆಯುತ್ತದೆ. 

ಮಾಹಿತಿಯ ಪ್ರಕಾರ, ಬೀದಿ ಬದಿ ವ್ಯಾಪಾರಿಗಳು, ಆಟೊ, ರಿಕ್ಷಾ ಚಾಲಕರು, ಕಟ್ಟಡ ನಿರ್ಮಾಣ ಕೆಲಸಗಾರರು, ಕೃಷಿ ಕಾರ್ಮಿಕರು, ಬೀಡಿ ಕಾರ್ಮಿಕರು, ನೇಕಾರರು ಸೇರಿದಂತೆ ಅಸಂಘಟಿತ ವಲಯದ 42 ಕೋಟಿ ಜನರ ಪೈಕಿ, 10 ಕೋಟಿ ಜನರು ಈ ಯೋಜನೆಯ ಲಾಭ ಪಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಸರಕಾರ ಆರಂಭಿಕವಾಗಿ 500 ಕೋಟಿ ರೂ. ಅನ್ನು ಕಾಯ್ದಿಟ್ಟಿದೆ. ಅಗತ್ಯಕ್ಕೆ ತಕ್ಕಂತೆ ಈ ಮೊತ್ತವನ್ನು ಸರಕಾರ ಹೆಚ್ಚಿಸಲಿದೆ. ಹಣವನ್ನು ಯಾವ ರೀತಿ ತೊಡಗಿಸಬೇಕೆಂದು ಇನ್ನೂ ಸರಕಾರ ಸ್ಪಷ್ಟವಾಗಿ ನಮೂದಿಸಿಲ್ಲ. ಆದರೂ, ಎನ್‌ಪಿಎಸ್‌ ಮಾದರಿಯಲ್ಲೇ ಇರಬಹುದು ಎಂದು ಹೇಳಲಾಗುತ್ತಿದೆ. 

ಕಾರ್ಮಿಕನೊಬ್ಬ ತನ್ನ 29ನೇ ವಯಸ್ಸಿನಲ್ಲಿ ಈ ಯೋಜನೆಗೆ ಒಳಪಟ್ಟರೆ ಆತ ತಿಂಗಳಿಗೆ 100 ರೂ. ತೊಡಗಿಸಬೇಕಾಗುತ್ತದೆ. ಅಷ್ಟೇ ಮೊತ್ತದ ಹಣವನ್ನು ಸರಕಾರ ಪಾವತಿಸುತ್ತದೆ. ಆಗ ಆತ, 60 ವರ್ಷದ ಬಳಿಕ ಅಂದರೆ ತಿಂಗಳಿಗೆ 3000 ರೂ. ಪಡೆಯುತ್ತಾನೆ. ಹಾಗೆಯೇ, ಕಾರ್ಮಿಕನೊಬ್ಬ ತನ್ನ 18ನೇ ವಯಸ್ಸಿನಲ್ಲೇ ಈ ಯೋಜನೆಗೆ ಒಳಪಟ್ಟರೆ ಆತ ತಿಂಗಳಿಗೆ 55 ರೂ. ತೊಡಗಿಸಬೇಕಾಗುತ್ತದೆ. ಮೇಲ್ನೋಟಕ್ಕೆ ಈ ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿ ಬಂಪರ್‌ ರೀತಿಯಲ್ಲಿ ಕಾಣಿಸುತ್ತಿದೆ. ಆದರೆ, ಇದರ ಸ್ಪಷ್ಟ ರೂಪರೇಷೆಗಳು ಗೊತ್ತಾದಾಗಲೇ ಅದರ ಪೂರ್ಣ ಪರಿಚಯವಾಗಬಹುದು. 

ಯೋಜನೆಯಡಿಯಲ್ಲಿ ನೋಂದಾಯಿಸಲಾದವರಿಗೆ ವಿಶಿಷ್ಟ ID ಸಂಖ್ಯೆ ನೀಡಲಾಗುವುದು. ಬಜೆಟ್ ಭಾಷಣದಲ್ಲಿ, ಪಿಯೂಷ್ ಗೋಯಲ್ ಅವರು ಸರ್ಕಾರದ ಪರವಾಗಿ, ಅಸಂಘಟಿತ ವಲಯ ಉದ್ಯೋಗಿಗಳಿಗೆ ನಿವೃತ್ತಿಯ ನಂತರ ಕನಿಷ್ಠ ಪಿಂಚಣಿ ಖಾತರಿ ನೀಡಲಾಗುವುದು ಎಂದು ಹೇಳಿದರು. ಸರಕಾರ ಪ್ರಾರಂಭಿಸಿದ ಯೋಜನೆಯು, ಮಾಸಿಕ ಆದಾಯ 15 ಸಾವಿರಕ್ಕಿಂತ ಕಡಿಮೆ ಆದಾಯವಿರುವ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ. 
 

Trending News