ಕೇದಾರನಾಥ ಹೈವೇನಲ್ಲಿ ಭೂಕುಸಿತ; ಮೂವರು ಸ್ಥಳದಲ್ಲೇ ಸಾವು, 7 ಮಂದಿ ನಾಪತ್ತೆ

ಕೇದಾರನಾಥ ಯಾತ್ರಾ ಮುಗಿಸಿ ಮರಳುತ್ತಿದ್ದ ಎರಡು ಬೈಕುಗಳು ಮತ್ತು ಕಾರಿನ ಮೇಲೆ  ಬೆಟ್ಟದ ಒಂದು ಭಾಗ ಕುಸಿದ ಕಾರಣ 3 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 

Last Updated : Oct 20, 2019, 09:57 AM IST
ಕೇದಾರನಾಥ ಹೈವೇನಲ್ಲಿ ಭೂಕುಸಿತ; ಮೂವರು ಸ್ಥಳದಲ್ಲೇ ಸಾವು, 7 ಮಂದಿ ನಾಪತ್ತೆ title=

ರುದ್ರಪ್ರಯಾಗ್: ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಚಂಡಿಕಾಧರ್ ಪ್ರದೇಶದಲ್ಲಿ ಶನಿವಾರ ಭೂಕುಸಿತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. 

ಕೇದಾರನಾಥ ಯಾತ್ರಾ ಮುಗಿಸಿ ಮರಳುತ್ತಿದ್ದ ಎರಡು ಬೈಕುಗಳು ಮತ್ತು ಕಾರಿನ ಮೇಲೆ  ಬೆಟ್ಟದ ಒಂದು ಭಾಗ ಕುಸಿದ ಕಾರಣ 3 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 

ವಾಹನಗಳ ಮೇಲೆ ಭಾರೀ ಬಂಡೆ ಬಿದ್ದ ಕಾರಣ, ಕಾರು 400 ಮೀಟರ್ ಆಳವಾದ ಕಂದಕಕ್ಕೆ ಬಿದ್ದಿದೆ. ಇದರಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ. 

ಘಟನಾ ಸ್ಥಳಕ್ಕೆ ರಕ್ಷಣಾ ಪಡೆ ಮತ್ತು ಪೊಲೀಸರು ಆಗಮಿಸಿ ಅಪಘಾತದಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 

Trending News