2024 ರ ಚುನಾವಣೆಯಲ್ಲಿ ಶಶಿ ತರೂರ್ ಸೋಲಿಸುವುದಾಗಿ ಹೇಳಿದ ಎಸ್.ಶ್ರೀಶಾಂತ್

ಕ್ರಿಕೆಟ್ ನಿಂದ ನಿಷೇಧಕ್ಕೆ ಒಳಗಾಗಿರುವ ಭಾರತದ ವೇಗದ ಬೌಲರ್ ಎಸ್.ಶ್ರೀಶಾಂತ್ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಸೋಲಿಸುವುದಾಗಿ ಹೇಳಿದ್ದಾರೆ.

Last Updated : Sep 30, 2019, 04:04 PM IST
2024 ರ ಚುನಾವಣೆಯಲ್ಲಿ ಶಶಿ ತರೂರ್ ಸೋಲಿಸುವುದಾಗಿ ಹೇಳಿದ ಎಸ್.ಶ್ರೀಶಾಂತ್  title=
file photo

ನವದೆಹಲಿ: ಕ್ರಿಕೆಟ್ ನಿಂದ ನಿಷೇಧಕ್ಕೆ ಒಳಗಾಗಿರುವ ಭಾರತದ ವೇಗದ ಬೌಲರ್ ಎಸ್.ಶ್ರೀಶಾಂತ್ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಸೋಲಿಸುವುದಾಗಿ ಹೇಳಿದ್ದಾರೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ 36 ವರ್ಷದ ಶ್ರೀಶಾಂತ್  “ನಾನು ಅವರ ಅಪಾರ ಅಭಿಮಾನಿಯಾಗಿದ್ದೇನೆ, ಅವರು ನನ್ನ ಪರವಾಗಿ ನಿಂತಿದ್ದರು. ಆದರೆ ತಿರುವನಂತಪುರಂ ಚುನಾವಣೆಯಲ್ಲಿ ನಾನು ಅವರನ್ನು ಸೋಲಿಸುತ್ತೇನೆ. ಇದರ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು. ಇದೇ ವೇಳೆ ತಿಹಾರ್ ಜೈಲಿನಲ್ಲಿ ಕಳೆದ ಸಮಯ ಮತ್ತು ಅಲ್ಲಿನ ಅನುಭವದ ಬಗ್ಗೆ ಮಾತನಾಡಿದ ಶ್ರೀಶಾಂತ್ 'ತಾವು ನಿರಪರಾಧಿ ಎಂದು ಹೇಳಿದರು. ಈಗ ನಾನು ನಿಯಂತ್ರಣದಲ್ಲಿದ್ದೇನೆ ಮತ್ತು ಸಂಗೀತ, ಚಲನಚಿತ್ರಗಳು, ಪುಸ್ತಕಗಳು, ವೆಬ್-ಸರಣಿಗಳು, ಕ್ರಿಕೆಟ್ ಮತ್ತು ರಾಜಕೀಯದಿಂದ ಅನೇಕ ಒಳ್ಳೆಯ ಸಂಗತಿಗಳು ನಡೆಯುತ್ತಿವೆ ಎಂದರು.

2013 ರ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್‌ನ ಅಜಿತ್ ಚಂಡಿಲಾ ಮತ್ತು ಅಂಕೀತ್ ಚವಾಣ್ ಅವರೊಂದಿಗೆ 2013 ರ ಆಗಸ್ಟ್‌ನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೀಶಾಂತ್‌ಗೆ ಜೀವಾವಧಿ ನಿಷೇಧಿಸಿತ್ತು. ಈ ಹಿಂದೆ, ಮಾರ್ಚ್ 15, 2019 ರಂದು, ಸುಪ್ರೀಂ ಕೋರ್ಟ್ ಬಿಸಿಸಿಐ ಶಿಸ್ತಿನ ಸಮಿತಿಯ ಆದೇಶವನ್ನು ಪ್ರತ್ಯೇಕಿಸಿತು ಮತ್ತು ಅಮಾನತುಗೊಳಿಸುವಿಕೆಯನ್ನು ಏಳು ವರ್ಷಕ್ಕೆ ಇಳಿಸಲಾಯಿತು, ಮುಂದಿನ ವರ್ಷ ಅವರಿಗೆ ಆಡಲು ಅವಕಾಶ ನೀಡಿತು.

ಶ್ರೀಶಾಂತ್ ಅವರು ಮಾರ್ಚ್ 2016 ರಲ್ಲಿ ಬಿಜೆಪಿಗೆ ಸೇರಿ ತಿರುವನಂತಪುರಂನಿಂದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

Trending News