ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸೊಪೋರ್ ಜಿಲ್ಲೆಯ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದ ಗ್ರೆನೇಡ್ ದಾಳಿಯಲ್ಲಿ ಆರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದ ಕರಣ್ ನಗರ ಪೊಲೀಸ್ ಠಾಣೆಯಲ್ಲಿ 'ಅಪರಿಚಿತ ಭಯೋತ್ಪಾದಕರು' ಗ್ರೆನೇಡ್ ಹಾರಿಸಿದ ಎರಡು ದಿನಗಳ ನಂತರ ಈ ದಾಳಿ ನಡೆದಿದ್ದು, ಆ ಮೂಲಕ ಆರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶ್ರೀನಗರಕ್ಕೆ ಕಳುಹಿಸಲಾಗಿದ್ದು, ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ.
#UPDATE Kashmir Zone Police: Terrorists lobbed a grenade on civilians at bus stand in Sopore. Six civilians sustained injuries. Information is preliminary in nature. https://t.co/XMFrLYJVsE
— ANI (@ANI) October 28, 2019
ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಾಗ ಅರೆಸೈನಿಕ ಪಡೆಯ 144 ನೇ ಬೆಟಾಲಿಯನ್ ಪೊಲೀಸ್ ಠಾಣೆಯಲ್ಲಿ ಚೆಕ್ಪಾಯಿಂಟ್ ನಿರ್ವಹಿಸುತ್ತಿತ್ತು ಎಂದು ಸಿಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಗ್ರೆನೇಡ್ ಸ್ಫೋಟವು ಈ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿತು, ಗುಂಡಿನ ದಾಳಿ ನಂತರ ವಿಶೇಷ ಪಡೆಗಳಿಂದ ಪ್ರತೀಕಾರ ತೀರಿಸಲ್ಪಟ್ಟಿತು ಎನ್ನಲಾಗಿದೆ.