ಮಹಾರಾಷ್ಟ್ರದಲ್ಲಿ ಟೊಮೆಟೊಗೆ ತಿರಂಗಾ ವೈರಸ್‌...! ತೀವ್ರ ಆರ್ಥಿಕ ಸಂಕಷ್ಟದಲ್ಲಿ ರೈತ

ಕರೋನವೈರಸ್ ನಿಂದ ಹೆಣಗಾಡುತ್ತಿರುವ ಮಹಾರಾಷ್ಟ್ರದಲ್ಲಿ ಈಗ ಅಲ್ಲಿನ  ರೈತರಿಗೆ ಮತ್ತೊಂದು ಚಿಂತೆ ಎದುರಾಗಿದೆ.ಇದಕ್ಕೆ ಕಾರಣ ಏನಪ್ಪಾ ಅಂದರೆ, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿರುವ ಟೊಮೆಟೊ ಬೆಳೆಗಾರರು ತಿರಂಗಾ ವೈರಸ್ ಬಗ್ಗೆ ಬಗ್ಗೆ ತೀವ್ರವಾಗಿ ಚಿಂತಿತರಾಗಿದ್ದಾರೆ, ಅದು ತಮ್ಮ ಬೆಳೆಗಳನ್ನು ಬೇಗನೆ ಮಾಗಲು ಕಾರಣವಾಗುವುದರಿಂದ ಅವರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತದೆ.

Last Updated : May 12, 2020, 04:32 PM IST
ಮಹಾರಾಷ್ಟ್ರದಲ್ಲಿ ಟೊಮೆಟೊಗೆ ತಿರಂಗಾ ವೈರಸ್‌...! ತೀವ್ರ ಆರ್ಥಿಕ ಸಂಕಷ್ಟದಲ್ಲಿ ರೈತ title=

ನವದೆಹಲಿ: ಕರೋನವೈರಸ್ ನಿಂದ ಹೆಣಗಾಡುತ್ತಿರುವ ಮಹಾರಾಷ್ಟ್ರದಲ್ಲಿ ಈಗ ಅಲ್ಲಿನ  ರೈತರಿಗೆ ಮತ್ತೊಂದು ಚಿಂತೆ ಎದುರಾಗಿದೆ.ಇದಕ್ಕೆ ಕಾರಣ ಏನಪ್ಪಾ ಅಂದರೆ, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿರುವ ಟೊಮೆಟೊ ಬೆಳೆಗಾರರು ತಿರಂಗಾ ವೈರಸ್ ಬಗ್ಗೆ ಬಗ್ಗೆ ತೀವ್ರವಾಗಿ ಚಿಂತಿತರಾಗಿದ್ದಾರೆ, ಅದು ತಮ್ಮ ಬೆಳೆಗಳನ್ನು ಬೇಗನೆ ಮಾಗಲು ಕಾರಣವಾಗುವುದರಿಂದ ಅವರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತದೆ.

ವರದಿಗಳ ಪ್ರಕಾರ, ಮಹಾರಾಷ್ಟ್ರದಾದ್ಯಂತದ ರೈತರು ಈ ರೋಗವನ್ನು ತಿರಂಗಾ ವೈರಸ್‌ಗೆ ಕಾರಣವೆಂದು ಹೇಳುತ್ತಿದ್ದಾರೆ, ಇದು ಟೊಮೆಟೊ ಬೆಳೆಯನ್ನು ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಗೊಳಿಸುತ್ತಿದೆ ಎಂದು ಅವರು ಹೇಳುತ್ತಾರೆ. ಈ ತಿರಂಗಾ ವೈರಸ್ ಕಳೆದ 10 ದಿನಗಳಲ್ಲಿ ಅಹ್ಮದ್‌ನಗರ, ಪುಣೆ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಶೇ .60 ರಷ್ಟು ಬೆಳೆಗಳ ನಾಶಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ. ಸ್ಥಳೀಯ ಟೊಮೆಟೊ ಕೃಷಿಕ ರಮೇಶ್ ವಕ್ಲೆ ಈ ರೋಗವು ಮಹಾರಾಷ್ಟ್ರದ ಬೆಳೆಗಳಿಗೆ ಭಾರಿ ಹಾನಿ ಮಾಡಿದೆ ಎಂದು ದೃಢಪಡಿಸಿದರು.

ಸಸ್ಯದ ಎಲೆಗಳು ವೇಗವಾಗಿ ಒಣಗುತ್ತಿವೆ ಮತ್ತು ಟೊಮ್ಯಾಟೊ ಅನಿಯಮಿತ ಆಕಾರ ಮತ್ತು ಬಣ್ಣವನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಅಕಾಲಿಕವಾಗಿ ಮಾಗುತ್ತಿದೆ. ಕೊಯ್ಲು ಮಾಡಲು ಸಿದ್ಧವಾದ ಬೆಳೆ ಈ ಗುರುತಿಸಲಾಗದ ರೋಗಕ್ಕೆ ಕಳೆದುಹೋಗಿದೆ. ಈ ಕಾರಣದಿಂದಾಗಿ, ನಮ್ಮ ಟೊಮೆಟೊಗಳಿಗೆ ಖರೀದಿದಾರು ಸಿಗುತ್ತಿಲ್ಲ 'ಎಂದು ಅವರು ಹೇಳಿದರು. ತಜ್ಞರು ಈ ರೋಗವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದರೂ, ಇದು ಇನ್ನೂ ಗುರುತಿಸಲ್ಪಟ್ಟಿಲ್ಲ. ಅಲ್ಲದೆ, ಲಾಕ್‌ಡೌನ್ ಕಾರಣ, ರೋಗಪೀಡಿತ ಟೊಮೆಟೊಗಳ ಮಾದರಿಗಳು ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆಗಾಗಿ ರಾಷ್ಟ್ರೀಯ ಪ್ರಯೋಗಾಲಯಗಳನ್ನು ತಲುಪುತ್ತಿಲ್ಲ.

ಈ ವೈರಲ್ ದಾಳಿಯನ್ನು ನಿಯಂತ್ರಿಸದಿದ್ದರೆ ಅದು ಇತರ ಬೆಳೆಗಳಿಗೆ ಹರಡಬಹುದು ಎಂದು ರೈತರು ಭಯಪಡುತ್ತಾರೆ. ಬೆಳೆಗಳನ್ನು ಮತ್ತೆ ನೆಡುವುದಕ್ಕೆ ಮುಂಚಿತವಾಗಿ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಅವರು ಸಲಹೆ ಬಯಸಿದ್ದಾರೆ.

ಟೊಮ್ಯಾಟೋ ಮುಖ್ಯವಾಗಿ ಸತಾರಾ, ಪುಣೆ, ಅಹ್ಮದ್‌ನಗರ ಮತ್ತು ನಾಸಿಕ್‌ನ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಬೇಸಿಗೆ ಟೊಮೆಟೊ ಒಂದು ಅಮೂಲ್ಯವಾದ ಬೆಳೆಯಾಗಿದ್ದು, ಈ ಪ್ರದೇಶಗಳ ರೈತರು ಬಾಂಗ್ಲಾದೇಶ ಮತ್ತು ದುಬೈಗೆ ರಫ್ತು ಮಾಡುವುದರಿಂದ ಉತ್ತಮವಾಗಿ ಗಳಿಸಲು ಸಹಾಯ ಮಾಡುತ್ತದೆ.
 

Trending News