ರೈತರ ಪ್ರತಿಭಟನೆಗೆ ಸಾರಿಗೆ ಬೆಂಬಲ, ಡಿಸೆಂಬರ್ 8ರಿಂದ ನಿಲ್ಲಲಿದೆ ಈ ಸೇವೆ

ರೈತರ ಬೇಡಿಕೆಗಳನ್ನು ಸರ್ಕಾರ ಸ್ವೀಕರಿಸದಿದ್ದರೆ ಡಿಸೆಂಬರ್ 8 ರಂದು ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ ದೆಹಲಿ-ಎನ್‌ಸಿಆರ್ ಸೇರಿದಂತೆ ದೇಶಾದ್ಯಂತ ಸರಕುಗಳ ಸಾಗಣೆ ಮತ್ತು ಸರಬರಾಜನ್ನು ನಿಲ್ಲಿಸುತ್ತದೆ ಎಂದು ಸಾರಿಗೆ ಸಂಘಗಳು ಹೇಳಿವೆ.

Last Updated : Dec 3, 2020, 08:47 AM IST
  • ಹರಿಯಾಣ ಮತ್ತು ಪಂಜಾಬ್‌ನ ರೈತರಿಗೆ ದೇಶಾದ್ಯಂತದ ರೈತರ ಬೆಂಬಲ
  • ಟ್ರಾನ್ಸ್ಪೋರ್ಟರ್ಸ್ ಯೂನಿಯನ್ ಸಹ ರೈತರಿಗೆ ಬೆಂಬಲವನ್ನು ಘೋಷಿಸಿದೆ
  • ದೇಶದ ಸಾರಿಗೆದಾರರು ಡಿಸೆಂಬರ್ 8 ರಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ರೈತರ ಪ್ರತಿಭಟನೆಗೆ ಸಾರಿಗೆ ಬೆಂಬಲ, ಡಿಸೆಂಬರ್ 8ರಿಂದ ನಿಲ್ಲಲಿದೆ ಈ ಸೇವೆ title=

ನವದೆಹಲಿ: ಕಳೆದ 7 ದಿನಗಳಿಂದ ಸಿಂಗು ಗಡಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹರಿಯಾಣ ಮತ್ತು ಪಂಜಾಬ್‌ನ ರೈತರಿಗೆ ದೇಶಾದ್ಯಂತದ ರೈತರ ಬೆಂಬಲ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ  ಟ್ರಾನ್ಸ್ಪೋರ್ಟರ್ಸ್ ಯೂನಿಯನ್ ಸಹ ರೈತರಿಗೆ (Farmers) ಬೆಂಬಲವನ್ನು ಘೋಷಿಸಿದೆ. ದೇಶದ ಸಾರಿಗೆದಾರರು ಡಿಸೆಂಬರ್ 8 ರಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ರೈತರ ಬೇಡಿಕೆಗಳನ್ನು ಸರ್ಕಾರ ಒಪ್ಪದಿದ್ದರೆ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ ದೆಹಲಿ-ಎನ್‌ಸಿಆರ್ (Delhi-NCR) ಸೇರಿದಂತೆ ಇಡೀ ದೇಶದಲ್ಲಿ ಸರಕುಗಳ ಸಾಗಣೆ ಮತ್ತು ಸರಬರಾಜನ್ನು ನಿಲ್ಲಿಸುವುದಾಗಿ ಸಾರಿಗೆ ಸಂಘಗಳು ಬೆದರಿಕೆ ಹಾಕಿವೆ.

ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (ಎಐಎಟಿಸಿ) ಸುಮಾರು 95 ಲಕ್ಷ ಟ್ರಕ್ ಚಾಲಕರು ಮತ್ತು ಇತರ ಸಂಸ್ಥೆಗಳನ್ನು ಪ್ರತಿನಿಧಿಸುವ ಸಾರಿಗೆದಾರರ ಉನ್ನತ ಸಂಸ್ಥೆಯಾಗಿದೆ. ರೈತರ ಆಂದೋಲನವನ್ನು (Farmers Protest) ಬೆಂಬಲಿಸುತ್ತಾ, ಎಐಎಟಿಸಿ ರೈತರು ನಮ್ಮ ಪೂರೈಕೆದಾರ ಮತ್ತು ಭಾರತದ ಆರ್ಥಿಕತೆಯ ಬೆನ್ನೆಲುಬಿನಂತಿದ್ದಾರೆ.  ಅಂತಹ ಪರಿಸ್ಥಿತಿಯಲ್ಲಿ ಅವರ ಬೇಡಿಕೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ರೈತರನ್ನು ಉಗ್ರರು ಎಂದು ಕರೆಯುವ ಮೂಲಕ ಮೋದಿ ಸರ್ಕಾರ ರೈತ ಸಮುದಾಯಕ್ಕೆ ಅವಮಾನ ಮಾಡಿದೆ

ರೈತರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು:
ನಮ್ಮ ದೇಶದ ಸುಮಾರು 70 ಪ್ರತಿಶತ ಗ್ರಾಮೀಣ ಪ್ರದೇಶಗಳು ಕೃಷಿ ಮತ್ತು ಕೃಷಿಗೆ ಸಂಬಂಧಿಸಿವೆ ಎಂದು ಸಾರಿಗೆ ಸಂಘಗಳು ಹೇಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಈ ರೈತರು ನಮ್ಮ ದೇಶದ ದಾನಿಗಳು ಮತ್ತು ಅವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದು ಅವಶ್ಯಕ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತೀವ್ರಗೊಂಡ ರೈತರ ಪ್ರತಿಭಟನೆ, ನಾಳೆ ಪಂಜಾಬ್ ಸಿಎಂ ಜೊತೆ ಅಮಿತ್ ಶಾ ಭೇಟಿ

 ಡಿಸೆಂಬರ್ 8 ರಿಂದ ಎಲ್ಲಾ ಕಾರ್ಯಾಚರಣೆ ಸ್ಥಗಿತ:
ಸಾರಿಗೆ ಕಾಂಗ್ರೆಸ್ ಅಧ್ಯಕ್ಷ ಕುಲ್ತರಣ್ ಸಿಂಗ್ ಅಟ್ವಾಲ್ ಅವರು ಡಿಸೆಂಬರ್ 8 ರಿಂದ ಉತ್ತರ ಭಾರತದಲ್ಲಿ ನಮ್ಮ ಎಲ್ಲಾ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತೇವೆ ಮತ್ತು ಉತ್ತರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಹರಿಯಾಣ, ಉತ್ತರಪ್ರದೇಶ, ಪಂಜಾಬ್, ಹಿಮಾಚಲ ಮತ್ತು ಜಮ್ಮುಗಳಲ್ಲಿನ ಎಲ್ಲಾ ವಾಹನಗಳನ್ನು ನಿಲ್ಲಿಸುತ್ತೇವೆ ಎಂದು ಹೇಳಿದರು. ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಸರ್ಕಾರ ಇನ್ನೂ ಸ್ವೀಕರಿಸದಿದ್ದರೆ ನಾವು ಭಾರತದಾದ್ಯಂತ 'ಚಕ್ಕಾ ಜಾಮ್' ಗೆ ಕರೆ ನೀಡುತ್ತೇವೆ ಎಂದು ನಿರ್ಧರಿಸಿದ್ದೇವೆ. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಬರುವ ಸಾವಿರಾರು ಲಾರಿಗಳ ಮೇಲೆ ಪರಿಣಾಮ ಬೀರಿವೆ ಎಂದು ಅವರು ಹೇಳಿದರು. ನಾವು ರೈತರನ್ನು ಬೆಂಬಲಿಸುತ್ತೇವೆ. ಏಕೆಂದರೆ ಶೇಕಡಾ 65 ರಷ್ಟು ಟ್ರಕ್‌ಗಳು ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ತರುವಲ್ಲಿ ನಿರತವಾಗಿವೆ. ರೈತರು ನಮ್ಮ ದೇಶದ ಬೆನ್ನೆಲುಬು ಈ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

Trending News