ಉನ್ನಾವೋ ಪ್ರಕರಣ: ಬಿಜೆಪಿ ಶಾಸಕನ್ನು ಬಂಧಿಸಲು ಸಿಬಿಐಗೆ ಹೈಕೋರ್ಟ್ ನಿರ್ದೇಶನ

      

Last Updated : Apr 13, 2018, 06:41 PM IST
ಉನ್ನಾವೋ ಪ್ರಕರಣ: ಬಿಜೆಪಿ ಶಾಸಕನ್ನು ಬಂಧಿಸಲು ಸಿಬಿಐಗೆ ಹೈಕೋರ್ಟ್ ನಿರ್ದೇಶನ   title=

ಅಲಹಾಬಾದ್: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿನ ಆರೋಪಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರನ್ನು ಬಂಧಿಸಲು ಅಲಹಾಬಾದ್ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ.

ಉತ್ತರ ಪ್ರದೇಶ ಸರಕಾರವು ಸೆಂಗಾರ್ ನ್ನು  ಇದುವರೆಗೂ ಬಂಧಿಸಿಲ್ಲ ಎಂದು ತಿಳಿದ ಬಳಿಕ ಮುಖ್ಯ ನ್ಯಾಯಮೂರ್ತಿ ಡಿ.ಬಿ.ಬೋಂಸಾಲೆ ಮತ್ತು ಸುನೀತ್ ಕುಮಾರ್ ಅವರನ್ನೊಳಗೊಂಡ ಪೀಠವು ಸಿಬಿಐ ಬಂಧಿಸಲು  ನಿರ್ದೇಶನ ನೀಡಿದೆ.

ಪ್ರಕರಣದ ಕುರಿತಾಗಿ ಕಾನೂನಿಗೆ ಅನುಗುಣವಾಗಿ ಕಠಿಣವಾಗಿ ತನಿಖೆ ನಡೆಸಲು ಮತ್ತು ಇತರ ಆರೋಪಿಗಳಿಗೆ ನೀಡಲಾದ ಜಾಮೀನು ರದ್ದುಗೊಳಿಸುವ ಅರ್ಜಿಯನ್ನು ಸಲ್ಲಿಸಲು ನ್ಯಾಯಾಲಯ ಸಿಬಿಐಗೆ ನಿರ್ದೇಶನ ನೀಡಿದೆ.

ನ್ಯಾಯಾಲಯವು  ಸಿಬಿಐಗೆ ಮೇ 2 ರೊಳಗೆ ಪ್ರಕರಣದ ಕುರಿತಾಗಿನ  ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ .

Trending News