ಕಪ್ಪು ಬಣ್ಣದವಳು ಎಂದು ಹೀಯಾಳಿಸಿದ್ದಕ್ಕೆ ಊಟದಲ್ಲೇ ವಿಷ ಹಾಕಿ ಕೊಂದಳು!

ಪ್ರಗ್ಯ ಸರ್ವಾಸೆ ಎಂಬಾಕೆಯೇ ಊಟದಲ್ಲಿ ವಿಷ ಬೆರೆಸಿದ ಆರೋಪಿ.

Last Updated : Jun 23, 2018, 11:10 AM IST
ಕಪ್ಪು ಬಣ್ಣದವಳು ಎಂದು ಹೀಯಾಳಿಸಿದ್ದಕ್ಕೆ ಊಟದಲ್ಲೇ ವಿಷ ಹಾಕಿ ಕೊಂದಳು! title=
ಚಿತ್ರ ಕೃಪೆ: ANI

ರಾಯಘಡ: ಕಪ್ಪು ಬಣ್ಣದವಳು ಎಂದು ಹೀಯಾಳಿಸಿದ್ದರಿಂದ ಕುಪಿತಗೊಂಡ ಮಹಿಳೆಯೊಬ್ಬಳು ತನ್ನ ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಊಟದಲ್ಲಿ ವಿಷಯ ಬೆರೆಸಿದ ಪರಿಣಾಮ ಐವರು ಮೃತಪಟ್ಟ ಧಾರುಣ ಘಟನೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯಲ್ಲಿ ನಡೆದಿದೆ.

ಪ್ರಗ್ಯ ಸರ್ವಾಸೆ ಎಂಬಾಕೆಯೇ ಊಟದಲ್ಲಿ ವಿಷ ಬೆರೆಸಿದ ಆರೋಪಿ. ಜೂನ್ 18ರಂದು ಮಹಾಡ್ ಗ್ರಾಮದಲ್ಲಿ  ತನ್ನ ಸಂಬಂಧಿ ಸುಭಾಶ್ ಮಾನೆ ಎಂಬವರ ಗೃಹ ಪ್ರವೇಶ ಸಮಾರಂಭದಲ್ಲಿ ತಯಾರಿಸಿದ್ದ ಅಡುಗೆಗೆ ಈಕೆ ಕೀಟನಾಶಕ ಬೆರೆಸಿದ್ದಾಳೆ. ಇದನ್ನು ಸೇವಿಸಿದವರಲ್ಲಿ ನಾಲ್ಕು ಮಕ್ಕಳು ಮತ್ತು ಓರ್ವ ವೃದ್ಧ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈಗಾಗಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆಕೆಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಕೌಟುಂಬಿಕ ಕಲಹಗಳ ಹಿನ್ನೆಲೆಯಲ್ಲಿ ಆಕೆ ಈ ಕೃತ್ಯ ಎಸಗಿದ್ದಾಳೆ. ಈ ಘಟನೆಯಲ್ಲಿ 120 ಮಂದಿ ಅಸ್ವಸ್ಥರಾಗಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ರಾಯಘಡ ಪೋಲಿಸ್ ಅಧೀಕ್ಷಕ ಅನಿಲ್ ಪರಸ್ಕರ್ ಹೇಳಿದ್ದಾರೆ.

Trending News