ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ʼಆಕ್ಸೆಸ್‌ ಲೈಫ್‌ʼ ನೆರವು..!

ಬೆಂಗಳೂರಿಗೆ ಆಗಮಿಸುವ ದುರ್ಬಲವರ್ಗದ ಮಕ್ಕಳಿಗೆ ದೀರ್ಘಕಾಲ ಉಳಿದು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ʼಆಕ್ಸೆಸ್ ಲೈಫ್ʼ ಸ್ವಯಂ ಸೇವಾ ಸಂಸ್ಥೆ ಸಮಗ್ರ ಸೌಲಭ್ಯವುಳ್ಳ ಉಚಿತ ಆಶ್ರಯ ಒದಗಿಸಿದೆ. ಅರ್ಬುದ ರೋಗಿಗಳಷ್ಟೇ ಅಲ್ಲದೇ ಕುಟುಂಬದ ತಾಯಿ ಅಥವಾ ಸದಸ್ಯರೊಬ್ಬರು ಜೊತೆಯಲ್ಲಿದ್ದು, ರೋಗಿಗೆ ಅಗತ್ಯವಾಗಿರುವ ಅಡುಗೆಯನ್ನು ತಯಾರಿಸಿಕೊಡಲು ಅವಕಾಶ ಕಲ್ಪಿಸಿದೆ.

Written by - Prashobh Devanahalli | Edited by - Krishna N K | Last Updated : Aug 10, 2023, 04:46 PM IST
  • ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್‌ ಪೀಡಿತರು ಚಿಕಿತ್ಸೆ ಪಡೆಯುವುದು ನಿಜಕ್ಕೂ ಗಗನ ಕುಸುಮವೇ ಆಗಿದೆ.
  • ಆರ್ಥಿಕವಾಗಿ ದುರ್ಬಲವಾಗಿರುವ ಮಕ್ಕಳಿಗೆ ತನ್ನ ಪಾಲಕರೊಂದಿಗೆ ವಾಸ್ತವ್ಯ ಹೂಡುವ ವ್ಯವಸ್ಥೆ ಕಲ್ಪಿಸಿದೆ ಸ್ವಯಂ ಸೇವಾ ಸಂಸ್ಥೆ ʼಆಕ್ಸೆಸ್ ಲೈಫ್ʼ.
  • ದೀರ್ಘಕಾಲ ಉಳಿದು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ʼಆಕ್ಸೆಸ್ ಲೈಫ್ʼ ಸ್ವಯಂ ಸೇವಾ ಸಂಸ್ಥೆ ಸಮಗ್ರ ಸೌಲಭ್ಯವುಳ್ಳ ಉಚಿತ ಆಶ್ರಯ ಒದಗಿಸಿದೆ.
ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ʼಆಕ್ಸೆಸ್‌ ಲೈಫ್‌ʼ ನೆರವು..! title=

ಬೆಂಗಳೂರು : ಕ್ಯಾನ್ಸರ್‌ ಚಿಕಿತ್ಸೆಗಿಂತ ನಗರ ಪ್ರದೇಶಗಳಲ್ಲಿ ಉಳಿದು ಊಟ, ವಸತಿ ಮತ್ತಿತರ ಸೌಲಭ್ಯ ಪಡೆಯುವುದು ದುಬಾರಿಯಷ್ಟೇ ಅಲ್ಲದೇ ಬಹುದೊಡ್ಡ ಸವಾಲು. ಆರ್ಥಿಕವಾಗಿ ಸಬಲರಲ್ಲದವರು ವಸತಿ ಸೌಲಭ್ಯದೊಂದಿಗೆ ಕ್ಯಾನ್ಸರ್‌ ಗೆ ಚಿಕಿತ್ಸೆ ಪಡೆಯುವುದು ನಿಜಕ್ಕೂ ಗಗನ ಕುಸುಮವೇ ಆಗಿದೆ. ಇಂತಹ ಗಂಭೀರ ಸಮಸ್ಯೆಗೆ, ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್‌ ನಿಂದ ಬಳಲುತ್ತಿರುವ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಮಕ್ಕಳಿಗೆ ತನ್ನ ಪಾಲಕರೊಂದಿಗೆ ವಾಸ್ತವ್ಯ ಹೂಡುವ ವ್ಯವಸ್ಥೆ ಕಲ್ಪಿಸಿದೆ ಸ್ವಯಂ ಸೇವಾ ಸಂಸ್ಥೆ ʼಆಕ್ಸೆಸ್ ಲೈಫ್ʼ.

ಬೆಂಗಳೂರಿಗೆ ಆಗಮಿಸುವ ದುರ್ಬಲವರ್ಗದ ಮಕ್ಕಳಿಗೆ ದೀರ್ಘಕಾಲ ಉಳಿದು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ʼಆಕ್ಸೆಸ್ ಲೈಫ್ʼ ಸ್ವಯಂ ಸೇವಾ ಸಂಸ್ಥೆ ಸಮಗ್ರ ಸೌಲಭ್ಯವುಳ್ಳ ಉಚಿತ ಆಶ್ರಯ ಒದಗಿಸಿದೆ. ಅರ್ಬುದ ರೋಗಿಗಳಷ್ಟೇ ಅಲ್ಲದೇ ಕುಟುಂಬದ ತಾಯಿ ಅಥವಾ ಸದಸ್ಯರೊಬ್ಬರು ಜೊತೆಯಲ್ಲಿದ್ದು, ರೋಗಿಗೆ ಅಗತ್ಯವಾಗಿರುವ ಅಡುಗೆಯನ್ನು ತಯಾರಿಸಿಕೊಡಲು ಅವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲದೇ ಅಡುಗೆಗೆ ಬೇಕಾದ ದಿನಸಿ, ತರಕಾರಿಗಳನ್ನು ಒದಗಿಸುತ್ತಿದೆ. ಇಂತಹ ವಿನೂತನ ಮತ್ತು ಮಾನವೀಯ ನೆಲೆ ಜೆ.ಪಿ. ನಗರದ ಬಿಟಿಎಂ ಬಡಾವಣೆಯಲ್ಲಿ ತಲೆ ಎತ್ತಿದೆ. ಇಲ್ಲಿ 22 ಬೆಡ್‌ ಗಳ ಸುಸಜ್ಜಿತ ಗೂಡು ಸಜ್ಜಾಗಿದೆ.

ಇದನ್ನೂ ಓದಿ: ಕೈ ತೊಳೆಯುವಾಗ ಮಾಡುವ ಈ ತಪ್ಪುಗಳಿಂದ ಆರೋಗ್ಯಕ್ಕೆ ಆಪತ್ತು!

ಕ್ಯಾನ್ಸರ್‌ ಚಿಕಿತ್ಸೆಗಾಗಿ ಸೆಂಟ್‌ ಜಾನ್ಸ್‌ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ವಾರ್ಷಿಕ ನೂರಾರು ಮಕ್ಕಳು ಬೆಂಗಳೂರಿಗೆ ಆಗಮಿಸುತ್ತಿದ್ದು, ಇಂತಹ ಮಕ್ಕಳಿಗೆ ಚಿಕಿತ್ಸೆಗಿಂತ ನಗರದಲ್ಲಿ ವಾಸಿಸುವುದು ಹೆಚ್ಚು ದುಬಾರಿ. ಇದನ್ನು ಮನಗಂಡು “ಅಕ್ಸೆಸ್ ಲೈಫ್” ಸ್ವಯಂ ಸೇವಾ ಸಂಸ್ಥೆ ಮಾನವೀಯ ಸೇವೆ ಒದಗಿಸುತ್ತಿದೆ. ತಮ್ಮ ಮನೆಯಲ್ಲೇ ಇರುವಂತಹ ಆರಾಮದಾಯಕ ಪರಿಸ್ಥಿತಿ, ಮನೆ ಆಹಾರದ ಜೊತೆಗೆ ಚಿಕಿತ್ಸೆ ಪಡೆಯಲು ಈ ಸೌಲಭ್ಯ ಸಹಕಾರಿಯಾಗಲಿದೆ. ಇದರಿಂದ ರೋಗಿಗಳು ತ್ವರಿತವಾಗಿ ಉತ್ತಮ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಸಾಧ್ಯವಾಗಲಿದೆ.  

ಕ್ಯಾನ್ಸರ್‌ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳು ಹೆಸರುವಾಸಿಯಾಗಿದ್ದು, ರೋಗಿಗಳನ್ನು ಅತ್ಯುತ್ತಮವಾಗಿ ಆರೈಕೆ ಮಾಡುತ್ತಿವೆ. ಆದರೆ ಹೆಚ್ಚಿನ ಬಾಡಿಗೆ, ಸೂಕ್ತ ಸೌಲಭ್ಯ, ಶುಚಿತ್ವವಿಲ್ಲದ ವಸತಿ ವ್ಯವಸ್ಥೆ, ಅಲ್ಪಾವಧಿಯಲ್ಲಿ ಉಳಿಯಲು ಬಾಡಿಗೆ ಮನೆಗಳ ಕೊರತೆ ಜೊತೆಗೆ  ವಸತಿ ಹುಡುಕುವುದು ಸಹ ಬಹುದೊಡ್ಡ ಸಮಸ್ಯೆಯಾಗಿದೆ.

ಮತ್ತೊಂದೆಡೆ ಸಂದಿಗ್ದ ಪರಿಸ್ಥಿತಿಗಳ ನಡುವೆ ರೋಗಿಗಳು ಮತ್ತೆ ತಮ್ಮ ಮನೆಗಳಿಗೆ ತೆರಳುವ ಪರಿಸ್ಥಿತಿಯೂ ಎದುರಾಗಲಿದೆ. ಬಹುತೇಕ ರೋಗಿಗಳು ದ್ವಿತೀಯ ಸೋಂಕಿಗೆ ಒಳಗಾಗುವ ಅಪಾಯಗಳಿದ್ದು, ಇಲ್ಲಿನ ನೈರ್ಮಲ್ಯ ವಾತಾವರಣ ರೋಗಿಯ ರಕ್ಷಣೆಗೆ ಸಹಕಾರಿಯಾಗಲಿದೆ. ಯಾವುದೇ ಮಗು ವಸತಿ ಸೌಲಭ್ಯದ ಕಾರಣದಿಂದ ಚಿಕಿತ್ಸೆಯಿಂದ ವಂಚಿತವಾಗಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಸದಾಶಯದೊಂದಿಗೆ ಸ್ವಯಂ ಸೇವಾ ಸಂಸ್ಥೆ ಸಮುದಾಯದ ನಡುವಿನ ಪಾಲುದಾರಿಕೆ ವ್ಯವಸ್ಥೆಯನ್ನು ರೂಪಿಸಿದೆ.

ಇದನ್ನೂ ಓದಿ: 0 ವರ್ಷ ಮೇಲ್ಪಟ್ಟ ನಂತರ ತೂಕ ಇಳಿಕೆಗೆ ಈ ಅಂಶಗಳೇ ಸಹಾಯವಾಗುವುದು! ಟ್ರೈ ಮಾಡಿ ನೋಡಿ

ʼಆಕ್ಸೆಸ್ ಲೈಫ್ʼ ಸಂಸ್ಥೆ ವಸತಿ ಸವಾಲಯಗಳನ್ನು ನಿವಾರಿಸುವ ಮತ್ತು ಸಕಾಲದಲ್ಲಿ ಮಗುವಿಗೆ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸುತ್ತಿದೆ. ಕಳೆದೊಂದು ದಶಕದಿಂದ "ಆಕ್ಸೆಸ್ ಲೈಫ್” ವಿವಿಧ ರಚನಾತ್ಮಕ ಚಟುವಟಿಕೆಗಳಲ್ಲಿ ಕಾರ್ಯೋನ್ಮುಖವಾಗಿದೆ. ಇದೀಗ ಈ ಎಲ್ಲಾ ಪ್ರಯತ್ನಗಳ ನಂತರ ʼಆಕ್ಸೆಸ್ ಲೈಫ್ʼ ಮಕ್ಕಳ ಚಿಕಿತ್ಸೆಗಾಗಿ ಉಚಿತ ವಸತಿ ಸೌಲಭ್ಯ ಕಲ್ಪಿಸಿ, ಚಿಕಿತ್ಸೆಯನ್ನು ಇನ್ನಷ್ಟು ಸುಗಮಗೊಳಿಸಿದೆ. ʼಆಕ್ಸೆಸ್ ಲೈಫ್ʼ ದೇಶಾದ್ಯಂತ ಇಂತಹ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು, ಕ್ಯಾನ್ಸರ್‌ ಚಿಕಿತ್ಸೆಯ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತಿದೆ. ಈ ಸೇವೆಯನ್ನು ಇದೀಗ ಬೆಂಗಳೂರಿಗೆ ವಿಸ್ತರಿಸುತ್ತಿದ್ದು, ಕುಟುಂಬಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ಸಜ್ಜಾಗಿದೆ. ನಗರ ಪ್ರದೇಶದಲ್ಲಿ “ಮನೆಯಿಂದ ದೂರದ ಮನೆ”. ಇದು ಸುರಕ್ಷಿತ ಮತ್ತು ಸ್ವಚ್ಛತೆಯ ತಾಣವಾಗಿದೆ. ಸಮುದಾಯದ ಪ್ರಜ್ಞೆ ಮತ್ತು ಭಾವನಾತ್ಮಕ ಬೆಂಬಲದೊಂದಿಗೆ ಮಕ್ಕಳು ಗುಣಮುಖರಾಗಬೇಕು ಎಂಬುದು ಇದರ ಮೂಲ ಧ್ಯೇಯವಾಗಿದೆ ಎಂದು ʼಆಕ್ಸೆಸ್ ಲೈಫ್ʼನ ಮುಖ್ಯಸ್ಥ ರು ಮತ್ತು ಸಿಇಓ ಗಿರೀಶ್ ನಾಯರ್ ತಿಳಿಸಿದ್ದಾರೆ. 

ವಸತಿ, ಪೋಷಣೆ ಮತ್ತು ಸಾರಿಗೆಯಂತಹ ಅಗತ್ಯತೆಗಳನ್ನು ಪರಿಹರಿಸುವ ಮೂಲಕ ʼಆಕ್ಸೆಸ್ ಲೈಫ್ʼ ಕುಟುಂಬಗಳ ಕಳವಳವನ್ನು ನಿವಾರಿಸುತ್ತದೆ. ಈ ಬೆಳವಣಿಗೆ ಮಗುವಿನ ಚೇತರಿಕೆಯ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಸಹಾನುಭೂತಿಯ ಸಮಾಜದ ಭಾಗವಾಗಿ ನಾವು ಈ ಕುಟುಂಬಗಳನ್ನು ಬೆಂಬಲಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ಕ್ಯಾನ್ಸರ್‌ ನೊಂದಿಗೆ ಹೋರಾಡುತ್ತಿರುವ ಪ್ರತಿಯೊಂದು ಮಗುವಿಗೆ ಉಜ್ವಲ ಭವಿಷ್ಯ ರೂಪಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ. ಇದು ಎಲ್ಲರಿಗೂ ಭರವಸೆ, ಸಹಾನುಭೂತಿ ಮತ್ತು ಬೆಂಬಲವನ್ನು ಒದಗಿಸುವಂತಾಗಲಿ ಎಂಬುದು ಸಂಸ್ಥೆಯ ಆಶಯವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News