ವಸತಿ ಶಾಲೆ ವಿದ್ಯಾರ್ಥಿಗಳಿಗೆ ಸಿಕ್ತು ಮೂಲಭೂತ ಸೌಲಭ್ಯಗಳು: ಇದು ನಿಮ್ಮ ಜೀ ಕನ್ನಡ ನ್ಯೂಸ್ ಇಂಪ್ಯಾಕ್ಟ್

ಹಾವೇರಿಯ ಅಕ್ಕೂರಿನಲ್ಲಿರುವ ಡಾ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯನ್ನ 20 ಕೋಟಿ ವೆಚ್ಚ ಮಾಡಿ ಕಟ್ಟಲಾಗಿದೆ. 20 ಕೋಟಿಯಲ್ಲಿ ಕಟ್ಟಡ ಕಟ್ಟಿ, ಮಕ್ಕಳಿಗೆ ಡೆಸ್ಕ್ ನೀಡುವುದನ್ನ ಸರಕಾರ ಮೆರೆತಿತ್ತು. ನೆಲದ ಮೇಲೆ ಚಾಪೆ ಹಾಸಿಕೊಂಡು ಮಕ್ಕಳು ಪಾಠ ಕೇಳುತ್ತಿದ್ದರು. 

Written by - Yashaswini V | Last Updated : Dec 26, 2023, 03:05 PM IST
  • ಮೂಲಭೂತ ಸೌಲಭ್ಯಗಳಿಲ್ಲದೆ ಹಾವೇರಿಯ ಅಕ್ಕೂರಿನ ವಸತಿ ಶಾಲೆಯಲ್ಲಿ ಪರದಾಡುತ್ತಿದ್ದ ಮಕ್ಕಳುಶ್
  • 20 ಕೋಟಿ ಕಟ್ಟಡ ನಿರ್ಮಾಣ ಮಾಡಿ ಡೆಸ್ಕ್ , ಬೆಡ್ ಕೊಟ್ಟಿರಲಿಲ್ಲ ಸರಕಾರ
  • ಚಾಪೆ ಕುಳಿತು ಪಾಠ ಕೇಳ್ತಿದ್ದ ಮಕ್ಕಳಿಗೆ ಸಿಕ್ತು ಡೆಸ್ಕ್, ನೆಲದ ಮೇಲೆ ಮಲಗುತ್ತಿದ್ದವರಿಗೆ ಸಿಕ್ತು ಬೆಡ್
ವಸತಿ ಶಾಲೆ ವಿದ್ಯಾರ್ಥಿಗಳಿಗೆ ಸಿಕ್ತು ಮೂಲಭೂತ ಸೌಲಭ್ಯಗಳು: ಇದು ನಿಮ್ಮ ಜೀ ಕನ್ನಡ ನ್ಯೂಸ್ ಇಂಪ್ಯಾಕ್ಟ್  title=

20 ಕೋಟಿ ವೆಚ್ಚ ಮಾಡಿ ಭವ್ಯವಾದ ಕಟ್ಟಡ ಕಟ್ಟಿದ್ದರು. ಆದರೆ, ಶಾಲಾ ಮಕ್ಕಳು ಮಾತ್ರ ಚಾಪೆ ಮೇಲೆ ಕುಳಿತು ಪಾಠ ಕೇಳುತ್ತಿದ್ದರು.  ಬೆಡ್ ಇಲ್ಲದೆ ನೆಲದ ಮೇಲೆ ಮಲಗುತ್ತಿದ್ದರು.  20 ಕೋಟಿ ವೆಚ್ಚ ಮಾಡಿ ಮೂಲಭೂತ ಸೌಲಭ್ಯ ನೀಡದೆ ವಸತಿ ಶಾಲೆ ಬಗ್ಗೆ ಜೀ ಕನ್ನಡ ನ್ಯೂಸ್ ವರದಿ ಮಾಡುತ್ತಿದ್ದಂತೆ ಈಗ ಶಾಲೆಗೆ ಡೆಸ್ಕ್, ಬೆಡ್ ವ್ಯವಸ್ಥೆ ಮಾಡಲಾಗಿದೆ. ಇದು ಜೀ ಕನ್ನಡ ನ್ಯೂಸ್ ಬಿಗ್ ಬಿಗ್ ಇಂಪ್ಯಾಕ್ಟ್....
 
ಗ್ಯಾರಂಟಿ ಯೋಜನೆಗಳಿಗೆ ಸರಕಾರ ಸಾವಿರಾರು ಕೋಟಿ ವೆಚ್ಚ ಮಾಡ್ತಿದೆ. ಆದರೆ ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಲು ಚೌಕಾಸಿ ಮಾಡ್ತಿದೆ. ಹಾವೇರಿಯ ಅಕ್ಕೂರಿನಲ್ಲಿರುವ ಡಾ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯನ್ನ 20 ಕೋಟಿ ವೆಚ್ಚ ಮಾಡಿ ಕಟ್ಟಲಾಗಿದೆ. 20 ಕೋಟಿಯಲ್ಲಿ ಕಟ್ಟಡ ಕಟ್ಟಿ, ಮಕ್ಕಳಿಗೆ ಡೆಸ್ಕ್ ನೀಡುವುದನ್ನ ಸರಕಾರ ಮೆರೆತಿತ್ತು. ನೆಲದ ಮೇಲೆ ಚಾಪೆ ಹಾಸಿಕೊಂಡು ಮಕ್ಕಳು ಪಾಠ ಕೇಳುತ್ತಿದ್ದರು. ಬೆಡ್ ಇಲ್ಲದೆ ನೆಲದ ಮೇಲೆ ಮಕ್ಕಳು ಮಕ್ಕಳು ಮಲಗುತ್ತಿದ್ದರು. ಈ ಕುರಿತು ಜೀ ಕನ್ನಡ ನ್ಯೂಸ್ ಡಿಸೆಂಬರ್ 12 ರಂದು ವರದಿ ಮಾಡಿತ್ತು. ವರದಿ ಬೆನ್ನಲ್ಲೆ. ಶಾಲೆಗೆ ಡೆಸ್ಕ್ ಬೆಡ್ ವಿತರಣೆ ಮಾಡಲಾಗಿದೆ.

ಇದನ್ನೂ ಓದಿ- ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಚ್‌ಡಿ‌ಕೆ ಕುಟುಂಬಕ್ಕೆ ಆಹ್ವಾನ

ಶಾಲಾ ಕೊಠಡಿಗಳಲ್ಲಿ ದಿನವಿಡಿ ಚಾಪೆ ಮೇಲೆ ಕುಳಿತು ಪಾಠ ಕೇಳ್ತಿದ್ದ ಮಕ್ಕಳಿಗೆ ಈಗ ಡೆಸ್ಕ್ ಪೂರೈಕೆಯಾಗಿದೆ. ಡೆಸ್ಕ್ ಮೇಲೆ ಕುಳಿತು ಮಕ್ಕಳು ಖುಷಿ ಖುಷಿಯಾಗಿ ಪಾಠ ಕೇಳುತ್ತಿದ್ದಾರೆ. ಮತ್ತೊಂದೆಡೆ ವಸತಿ ನಿಲಯದಲ್ಲಿ ಬೆಡ್ ಇಲ್ಲದೆ ನೆಲದ ಮೇಲೆ ಮಲಗುತ್ತಿದ್ದ ಮಕ್ಕಳಿಗೆ ಈಗ ಕಾಟ್, ಬೆಡ್ ವ್ಯವಸ್ಥೆ ಮಾಡಲಾಗಿದೆ. ಅಲ್ಪ ಸಂತ್ಯಾತರ ಇಲಾಖೆಗೆ ಸೇರಿದ ಈ ವಸತಿ ಶಾಲೆಯಲ್ಲಿ 560 ಮಕ್ಕಳು ಕಲಿಯುತ್ತಿದ್ದು, ಮೂಲಭೂತ ಸೌಲಭ್ಯಗಳು ಸಿಕ್ಕಿರುವುದಕ್ಕೆ ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ..

ಇದನ್ನೂ ಓದಿ- ಸ್ವಾಮಿ ವಿವೇಕಾನಂದರ ಜನ್ಮದಿನದಿಂದ ʻಯುವನಿಧಿʼ ಯೋಜನೆ ಆರಂಭ!

ಕೋಟಿ ಕೋಟಿ ವೆಚ್ಚದಲ್ಲಿ ಬಿಲ್ಡಿಂಗ್ ಕಟ್ಟಿದ ಸರಕಾರ, ವಸತಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಲಭ್ಯ ನೀಡುವುದನ್ನ ಮರೆತ್ತಿತ್ತು. ಜೀ ಕನ್ನಡ ನ್ಯೂಸ್ ವರದಿ ಬಳಿಕ 15 ದಿನಗಳಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳನ್ನ ಒದಗಿಸಿದೆ. ಇದು ಜೀ ಕನ್ನಡ ನ್ಯೂಸ್ ವರದಿ ಇಂಪ್ಯಾಕ್ಟ್....

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News