ಚುನಾವಣಾ ನೀತಿ ಸಂಹಿತೆ- ಬಿಎಂಟಿಸಿ ಡಬಲ್ ಡೆಕ್ಕರ್ ಬಸ್ ಮತ್ತಷ್ಟು ವಿಳಂಬ

ಮಾದರಿ ನೀತಿ ಸಂಹಿತೆ ಮುಗಿಯುವವರೆಗೆ ಟೆಂಡರ್ ಅನ್ನು ಅಂತಿಮಗೊಳಿಸಲು ಅನುಮತಿ ಸಿಗುವುದಿಲ್ಲ. ಈ ಕಾರಣದಿಂದ ಯಾವುದೇ ಬಿಡ್‌ಗಳು ಬಂದಿಲ್ಲ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ‌. 

Written by - Manjunath Hosahalli | Last Updated : Apr 9, 2024, 01:32 PM IST
  • ಬಿಎಂಟಿಸಿ ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸುವ ಪ್ರಸ್ತಾವನೆ ಮತ್ತಷ್ಟು ವಿಳಂಬ
  • ಲೋಕಸಭಾ ಚುನಾವಣೆ ನೀತಿ ಸಂಹಿತೆಯೇ ಕಾರಣ
  • ಬಿಎಂಟಿಸಿಯು ಟೆಂಡರ್ ಅಂತಿಮಗೊಳಿಸುವುದನ್ನು ಮೇ ತಿಂಗಳವರೆಗೆ ಮುಂದೂಡಲಾಗಿದೆ
ಚುನಾವಣಾ ನೀತಿ ಸಂಹಿತೆ- ಬಿಎಂಟಿಸಿ ಡಬಲ್ ಡೆಕ್ಕರ್ ಬಸ್ ಮತ್ತಷ್ಟು ವಿಳಂಬ title=

ಬೆಂಗಳೂರು : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಬಿಎಂಟಿಸಿ ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸುವ ಪ್ರಸ್ತಾವನೆ ಮತ್ತಷ್ಟು ವಿಳಂಬವಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆಯಿಂದಾಗಿ, ಬಿಎಂಟಿಸಿಯು ಟೆಂಡರ್ ಅಂತಿಮಗೊಳಿಸುವುದನ್ನು ಮೇ ತಿಂಗಳವರೆಗೆ ಮುಂದೂಡಲಾಗಿದೆ. ಹೀಗಾಗಿ ಬಿಎಂಟಿಸಿ ಕರೆದಿರುವ ಎರಡನೇಯ ಟೆಂಡರ್ ಮೇವರೆಗೆ ಅಂತಿಮವಾಗುವುದಿಲ್ಲ ಎನ್ನವುದು  ಖಚಿತವಾಗಿದೆ. 

ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ,ಮಾರ್ಚ್‌ನಲ್ಲಿ ಡಬಲ್ ಡೆಕ್ಕರ್‌ಗಳ ಖರೀದಿಗಾಗಿ ನಾವು ಎರಡನೇ ಟೆಂಡರ್ ಅನ್ನು ಕರೆದಿದ್ದೆವು.ಬಿಡ್ಡಿಂಗ್‌ನ ಕೊನೆಯ ದಿನಾಂಕವು ಏಪ್ರಿಲ್ 10 ಎಂದು ನಮೂದಿಸಲಾಗಿತ್ತು.ಆದರೆ ಮಾದರಿ ನೀತಿ ಸಂಹಿತೆ ಮುಗಿಯುವವರೆಗೆ ಟೆಂಡರ್ ಅನ್ನು ಅಂತಿಮಗೊಳಿಸಲು ಅನುಮತಿ ಸಿಗುವುದಿಲ್ಲ. ಈ ಕಾರಣದಿಂದ ಯಾವುದೇ ಬಿಡ್‌ಗಳು ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ‌. 

ಇದನ್ನೂ ಓದಿ :  ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ : ಮಾದಪ್ಪನ ರಥೋತ್ಸವಕ್ಕೆ ಹರಿದು ಬಂದ ಭಕ್ತಸಾಗರ  

ತಾಂತ್ರಿಕ ಕಾರಣಗಳಿಂದ ಡಬಲ್ ಡೆಕ್ಕರ್ ಮೊದಲ ಟೆಂಡರ್ ಅಂತಿಮಗೊಂಡಿರಲಿಲ್ಲ.ಆಗ ಚೆನ್ನೈ ಮೂಲದ ಒಎಚ್‌ಎಂ ಗ್ಲೋಬಲ್ ಮೊಬಿಲಿಟಿ ಲಿಮಿಟೆಡ್‌ ಮಾತ್ರ ಬಿಡ್ ಸಲ್ಲಿಸಿತ್ತು. ಅದು ಪ್ರತಿ ಕಿ.ಮೀಗೆ 102.5 ರೂಪಾಯಿ ಮಾಡಿತ್ತು. ಆದರೆ, ಆ ಬಿಡ್‌ ಹೆಚ್ಚಾದ ಕಾರಣ ಟೆಂಡರ್ ರದ್ದುಗೊಳಿಸಲಾಗಿತ್ತು. ಬಿಎಂಟಿಸಿ ಈಗ ಅದಕ್ಕಿಂತ ಕಡಿಮೆ ಬಿಡ್‌ಗಳನ್ನು ಹುಡುಕುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ಟೆಂಡರ್ ಪ್ರಕಾರ,ಬಿಎಂಟಿಸಿ ಈ ಡಬಲ್ ಡೆಕ್ಕರ್ ಬಸ್‌ಗಳು ಆಯ್ದ ಮಾರ್ಗಗಳಲ್ಲಿ ಓಡಾಡಲಿದೆ. 350 ದಿನಗಳವರೆಗೆ ದಿನಕ್ಕೆ 150 ಕಿಲೋಮೀಟರ್ ಓಡಲಿದೆ.ಒಂದು ವರ್ಷದಲ್ಲಿ 52,500 ಕಿಮೀ ಬಸ್ ಸಂಚರಿಸಲಿದೆ. ಅಂದಾಜಿನ ಪ್ರಕಾರ, ಪ್ರತಿ ಡಬಲ್ ಡೆಕ್ಕರ್ ಬಸ್ ಒಂದೇ ಬಾರಿಗೆ 65 ಪ್ರಯಾಣಿಕರಿಗೆ ಸೇವೆ ನೀಡಬಹುದಾಗಿದೆ. ಬಿಎಂಟಿಸಿ ಈ ಬಸ್‌ಗಳನ್ನು ಮೆಜೆಸ್ಟಿಕ್‌ನಿಂದ ಶಿವಾಜಿನಗರ, ಶಿವಾಜಿನಗರದಿಂದ ಕೆ ಆರ್ ಮಾರುಕಟ್ಟೆ ಮತ್ತು ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಮಾರ್ಗಗಳಲ್ಲಿ ಓಡಿಸಲು ಯೋಜನೆ ರೂಪಿಸಿದೆ ಎಂದು ಸ್ಪಸ್ಟಪಡಿಸಿದ್ದಾರೆ.

ಇದನ್ನೂ ಓದಿ :  Lok Sabha Election 2024: "ಚುನಾವಣಾ ರಾಜಕೀಯಕ್ಕೂ ಸಕ್ರಿಯ ರಾಜಕೀಯಕ್ಕೂ ವ್ಯತ್ಯಾಸವಿದೆ"

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News