ಬಿಜೆಪಿ ಸರ್ಕಾರದ ಕಮಿಷನ್ ‘ಪಾಪದ ಕೊಡ’ ತುಂಬಿದ್ರೂ ಬುದ್ದಿ ಬಂದಿಲ್ಲ: ಕಾಂಗ್ರೆಸ್

40% ಬಗ್ಗೆ ಕಮಿಷನ್ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎನ್ನುತ್ತಿದ್ದ ಸಿಎಂ ಬೊಮ್ಮಾಯಿ ಈಗ ಏನು ಹೇಳುತ್ತಾರೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Aug 26, 2022, 05:28 PM IST
  • ರಾಜ್ಯ ಬಿಜೆಪಿ ಸರ್ಕಾರದ ಕಮಿಷನ್ 'ಪಾಪದ ಕೊಡ' ತುಂಬಿದ್ದರೂ ಇನ್ನೂ ಬುದ್ದಿ ಬಂದಿಲ್ಲ
  • ಶಾಸಕರನ್ನು ಕುರಿಗಳಂತೆ ಹೈಜಾಕ್ ಮಾಡಿದ ಸರ್ಕಾರದಿಂದ ಗುತ್ತಿಗೆದಾರರ ಸಂಘದಲ್ಲೂ 'ಆಪರೇಷನ್ ಕಮಲ'
  • ಕಾಮಗಾರಿಯಲ್ಲಿ 50% ಕಮಿಷನ್ ಕಳೆದರೆ ಗುತ್ತಿಗೆದಾರನಿಗೆ ಕಾಮಗಾರಿ ನಡೆಸಲು ಉಳಿಯುವುದೇನು?
ಬಿಜೆಪಿ ಸರ್ಕಾರದ ಕಮಿಷನ್ ‘ಪಾಪದ ಕೊಡ’ ತುಂಬಿದ್ರೂ ಬುದ್ದಿ ಬಂದಿಲ್ಲ: ಕಾಂಗ್ರೆಸ್  title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಕಮಿಷನ್ 'ಪಾಪದ ಕೊಡ' ತುಂಬಿದ್ದರೂ ಇನ್ನೂ ಬುದ್ದಿ ಬಂದಿಲ್ಲವೆಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ಶಾಸಕರನ್ನು 'ಕುರಿ'ಗಳಂತೆ ಹೈಜಾಕ್ ಮಾಡಿ ರಚಿಸಿರುವ ಸರ್ಕಾರ, ಗುತ್ತಿಗೆದಾರರ ಸಂಘದಲ್ಲೂ 'ಆಪರೇಷನ್ ಕಮಲ' ಮಾಡಲು ಯತ್ನಿಸಿ #BJPBrashtotsava ಪ್ರಕರಣಗಳನ್ನು ಮುಚ್ಚು ಹಾಕಬೇಕೆಂದಿದೆ’ ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಬಿ.ಎಸ್.ಯಡಿಯೂರಪ್ಪ ದೆಹಲಿ ಭೇಟಿಯ ಮರ್ಮವೇನು?: ಕಾಂಗ್ರೆಸ್

‘ಬಿಜೆಪಿ ಕಮಿಷನ್ 40% ರಿಂದ 50% ಗೆ ಏರಿಕೆಯಾಗಿದೆ. ರಸ್ತೆ ಕಾಮಗಾರಿಯಲ್ಲಿ 50% ಕಮಿಷನ್ ಕಳೆದರೆ ಗುತ್ತಿಗೆದಾರನಿಗೆ ಕಾಮಗಾರಿ ನಡೆಸಲು ಉಳಿಯುವುದೇನು? ಕೇವಲ 'ಮರಳು' ಮಾತ್ರ. ಹಾಗಾಗಿ ಜನತೆಗೆ ಉಳಿಯುವುದು 'ಮರಳಿ'ನ ರಸ್ತೆಗಳು ಮಾತ್ರ.  ಮಳೆ ಬಂದರೆ 'ಮರಳು' ಮಾಯ. ರಸ್ತೆಯೂ ಮಾಯ. ಜನರ ಪ್ರಾಣಕ್ಕೆ 50% ಕಮಿಷನ್’ ಎಂದು ಕಿಡಿಕಾರಿದೆ.

‘#BjpBrashtotsava ಅಧ್ಯಾಯ ಅಂತಿಮ ಹಂತಕ್ಕೆ ಬಂದಂತಿದೆ. 'ನಷ್ಟ'ವಾಗುವುದು ಯಾರ ಮಾನ ಎಂದು ಗೊತ್ತಿದ್ದೂ, ಈ ಭ್ರಷ್ಟ ಸರ್ಕಾರ ಕೇಸ್ ದಾಖಲಿಸುವ ಧೈರ್ಯ ತೋರುತ್ತಾ? ಸಚಿವ 'ಮನಿ'ರತ್ನ ಮಾನನಷ್ಟ ಮೊಕದ್ದಮೆ ಹೂಡುತ್ತಾರಾ? ದಾಖಲೆ ಇದ್ದರೆ ಬಹಿರಂಗಪಡಿಸಲಿ ಎನ್ನುತ್ತಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಈಗ ಏನು ಹೇಳುತ್ತಾರೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸಿದರೂ ರಾಜಕೀಯ ಅಲೆಮಾರಿಯಾಗಿರುವ ಸಿದ್ದರಾಮಯ್ಯ: ಸಂಸದ ಪ್ರಸಾದ್ ವ್ಯಂಗ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News