ಕಳಪೆ ಗುಣಮಟ್ಟದ ಪ್ಲೈವುಡ್ ನೀಡಿದ ಗ್ಲಾಸ್ ಅಂಗಡಿಗೆ ರೂ.1,80,000/- ದಂಡ ವಿಧಿಸಿದ ಗ್ರಾಹಕರ ಆಯೋಗ 

ಮೂಧೋಳ ತಾಲೂಕಿನ ವೀರಣ್ಣಾ ರಾಮತೀರ್ಥ ಎಂಬುವವರು ಹುಬ್ಬಳ್ಳಿಯ ಗೋಕುಲ ರೋಡನಲ್ಲಿರುವ ಆರ್.ಬಿ. ಗ್ಲಾಸ್ & ಪ್ಲೈವುಡ್ ಅಂಗಡಿಯಲ್ಲಿ ದಿ.15/02/2022 ರಂದು ರೂ.32,808/- ಕಿಮ್ಮತ್ತಿನ ವಿವಿಧ ನಮೂನೆಯ ಪ್ಲೈವುಡ್‍ಗಳನ್ನು ಖರೀದಿಸಿದ್ದರು.

Written by - Manjunath N | Last Updated : Nov 20, 2023, 03:56 PM IST
  • ಅವುಗಳನ್ನು ತಮ್ಮ ಮನೆಯ ಉಪಕರಣಗಳಿಗೆ ತಮಗೆ ಬೇಕಾದ ರೀತಿಯಲ್ಲಿ ಅಳವಡಿಸಿದ್ದರು.
  • ಅದಕ್ಕೆ ದೂರುದಾರ ಕಾರ್ಪೆಂಟರ್‍ಗೆ ಹಾಗೂ ಇತರೇ ಸಲಕರಣೆಗಳಿಗೆ ಸಾಕಷ್ಟು ಹಣ ಖರ್ಚು ಮಾಡಿದ್ದರು.
  • ಆದರೆ ಕೆಲವೇ ಸಮಯದಲ್ಲಿ ಆ ಎಲ್ಲಾ ಪ್ಲೈವುಡ್‍ಗಳಿಗೆ ಗೆದ್ದಲು ಹತ್ತಿತು
 ಕಳಪೆ ಗುಣಮಟ್ಟದ ಪ್ಲೈವುಡ್ ನೀಡಿದ ಗ್ಲಾಸ್ ಅಂಗಡಿಗೆ ರೂ.1,80,000/- ದಂಡ ವಿಧಿಸಿದ ಗ್ರಾಹಕರ ಆಯೋಗ  title=

ಧಾರವಾಡ : ಮೂಧೋಳ ತಾಲೂಕಿನ ವೀರಣ್ಣಾ ರಾಮತೀರ್ಥ ಎಂಬುವವರು ಹುಬ್ಬಳ್ಳಿಯ ಗೋಕುಲ ರೋಡನಲ್ಲಿರುವ ಆರ್.ಬಿ. ಗ್ಲಾಸ್ & ಪ್ಲೈವುಡ್ ಅಂಗಡಿಯಲ್ಲಿ ದಿ.15/02/2022 ರಂದು ರೂ.32,808/- ಕಿಮ್ಮತ್ತಿನ ವಿವಿಧ ನಮೂನೆಯ ಪ್ಲೈವುಡ್‍ಗಳನ್ನು ಖರೀದಿಸಿದ್ದರು.

ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡ ಪ್ಯಾಲಿಸ್ತೀನ್ ಬೆಂಬಲಿಗ

ಅವುಗಳನ್ನು ತಮ್ಮ ಮನೆಯ ಉಪಕರಣಗಳಿಗೆ ತಮಗೆ ಬೇಕಾದ ರೀತಿಯಲ್ಲಿ ಅಳವಡಿಸಿದ್ದರು. ಅದಕ್ಕೆ ದೂರುದಾರ ಕಾರ್ಪೆಂಟರ್‍ಗೆ ಹಾಗೂ ಇತರೇ ಸಲಕರಣೆಗಳಿಗೆ ಸಾಕಷ್ಟು ಹಣ ಖರ್ಚು ಮಾಡಿದ್ದರು. ಆದರೆ ಕೆಲವೇ ಸಮಯದಲ್ಲಿ ಆ ಎಲ್ಲಾ ಪ್ಲೈವುಡ್‍ಗಳಿಗೆ ಗೆದ್ದಲು ಹತ್ತಿತು. ಅದರಿಂದ ದೂರುದಾರನಿಗೆ ತುಂಬಾ ಲುಕ್ಸಾನು ಆಗಿ ತೊಂದರೆಯಾಯಿತು. ಈ ಸಂಗತಿಯನ್ನು ಎದುರುದಾರ ಅಂಗಡಿ ಮಾಲೀಕನಿಗೆ ತಿಳಿಸಿ ಬೇರೆ ಪ್ಲೈವುಡ್ ಅಥವಾ ಹಣ ಕೊಡಲು ಸಾಕಷ್ಟು ಸಾರಿ ಕೇಳಿಕೊಂಡಿದ್ದರು. ಆದರೆ ಎದುರುದಾರರು ಅವುಗಳನ್ನು ಸರಿಪಡಿಸದೆ ಅಥವಾ ಹಣ ಹಿಂತಿರುಗಿಸದೇ ದೂರುದಾರರಿಗೆ ಸತಾಯಿಸುತ್ತಿದ್ದರು. ಎದುರುದಾರ/ಪ್ಲೈವುಡ್ ನವರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:29.03.2023 ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: “ನನ್ನನ್ನು ಕರೆದಿಲ್ಲ… ವಿಶ್ವಕಪ್ ಫೈನಲ್ ಪಂದ್ಯ ನಾನು ನೋಡಲ್ಲ”- ಕ್ರಿಕೆಟ್ ದಿಗ್ಗಜ ಕಪಿಲ್ ದೇವ್

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ದೂರುದಾರ ಸಾಕಷ್ಟು ಹಣ ಖರ್ಚು ಮಾಡಿ ವಿಶ್ವಾಸದ ಮೇಲೆ ಎದುರುದಾರರಿಂದ ಪ್ಲೈವುಡ್ ಖರೀದಿಸಿದ್ದಾರೆ. ಫೆವಿಕಾಲ್ ಇತ್ಯಾದಿ ಸಲಕರಣೆ ಮತ್ತು ಕಾರಪೆಂಟರ್‍ಗಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಿ ತಮ್ಮ ಮನೆಗೆ ಪ್ಲೈವುಡ್ ಕೆಲಸ ಮಾಡಿಸಿಕೊಂಡಿದ್ದಾರೆ. ವಿಶ್ವಾಸದಿಂದ ಎದುರುದಾರರನ್ನು ನಂಬಿ ದೂರುದಾರನಿಗೆ ಮೋಸ ಆಗಿದೆ ಅನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇಂತಹ ಎದುರುದಾರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.

ಅದರಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ಪರಿಹಾರ, ಪ್ರಕರಣದ ಖರ್ಚು ವೆಚ್ಚ ಹಾಗೂ ಪ್ಲೈವುಡ್ ಖರೀದಿ ಹಣ ಮತ್ತು ಇತ್ಯಾದಿ ಖರ್ಚು ವೆಚ್ಚ ಸೇರಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಒಟ್ಟು ರೂ.1,80,000/- ಕೊಡುವಂತೆ ಆಯೋಗ ಹುಬ್ಬಳ್ಳಿಯ ಗೋಕುಲ ರೋಡ್‍ನಲ್ಲಿರುವ ಆರ್.ಬಿ. ಗ್ಲಾಸ್ & ಪ್ಲೈವುಡ್ ರವರಿಗೆ ಆದೇಶಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News