ಸೈಟ್ ಕೊಡದ ಡೆವಲಪರ್ಸ್ ಗೆ ಬಡ್ಡಿಯೊಂದಿಗೆ ರೂ. 12 ಲಕ್ಷ ಹಣ ಹಿಂದಿರುಗಿಸಲು ಗ್ರಾಹಕರ ಆಯೋಗದ ಆದೇಶ

 ಹುಬ್ಬಳ್ಳಿಯ ವೀರಾಪೂರ ಓಣಿಯ ತುಕಾರಾಮ ಕಟಾರೆ ಎಂಬುವವರು 2013 ರಲ್ಲಿ ರೇಣುಕಾ ಲಕ್ಷ್ಮೀ ಡೆವಲಪರ್ಸ್‍ರವರರು ನಾಗಶೆಟ್ಟಿಕೊಪ್ಪದಲ್ಲಿ ಶ್ರೀ ಗಣೇಶ ಟೌನ್‍ಶೀಪ್ ಅನ್ನುವ ಹೆಸರಿನಲ್ಲಿ ನಿರ್ಮಿಸುತ್ತಿದ್ದ ಲೇಔಟನಲ್ಲಿ ಪ್ಲಾಟ ನಂ. 4 ನ್ನು ರೂ.12 ಲಕ್ಷಕೊಟ್ಟು ಖರೀದಿಸಿದ್ದರು.

Written by - Manjunath N | Last Updated : Jun 13, 2023, 10:01 PM IST
  • ಈ ಬಗ್ಗೆ ಉಭಯತರ ಮಧ್ಯೆ ಕರಾರು ಒಪ್ಪಂದ ಪತ್ರ ಆಗಿತ್ತು
  • ದೂರುದಾರ ರೂ. 12 ಲಕ್ಷ ಹಣವನ್ನು ಎದುರುದಾರರಿಗೆ ಸಂದಾಯ ಮಾಡಿದ್ದರೂ ಅವರು ಲೇಔಟ ನಿರ್ಮಾಣ ಮಾಡಿರಲಿಲ್ಲ
ಸೈಟ್ ಕೊಡದ ಡೆವಲಪರ್ಸ್ ಗೆ ಬಡ್ಡಿಯೊಂದಿಗೆ ರೂ. 12 ಲಕ್ಷ ಹಣ ಹಿಂದಿರುಗಿಸಲು ಗ್ರಾಹಕರ ಆಯೋಗದ ಆದೇಶ title=
ಸಾಂದರ್ಭಿಕ ಚಿತ್ರ

ಧಾರವಾಡ: ಹುಬ್ಬಳ್ಳಿಯ ವೀರಾಪೂರ ಓಣಿಯ ತುಕಾರಾಮ ಕಟಾರೆ ಎಂಬುವವರು 2013 ರಲ್ಲಿ ರೇಣುಕಾ ಲಕ್ಷ್ಮೀ ಡೆವಲಪರ್ಸ್‍ರವರರು ನಾಗಶೆಟ್ಟಿಕೊಪ್ಪದಲ್ಲಿ ಶ್ರೀ ಗಣೇಶ ಟೌನ್‍ಶೀಪ್ ಅನ್ನುವ ಹೆಸರಿನಲ್ಲಿ ನಿರ್ಮಿಸುತ್ತಿದ್ದ ಲೇಔಟನಲ್ಲಿ ಪ್ಲಾಟ ನಂ. 4 ನ್ನು ರೂ.12 ಲಕ್ಷಕೊಟ್ಟು ಖರೀದಿಸಿದ್ದರು.

ಈ ಬಗ್ಗೆ ಉಭಯತರ ಮಧ್ಯೆ ಕರಾರು ಒಪ್ಪಂದ ಪತ್ರ ಆಗಿತ್ತು. ದೂರುದಾರ ರೂ. 12 ಲಕ್ಷ ಹಣವನ್ನು ಎದುರುದಾರರಿಗೆ ಸಂದಾಯ ಮಾಡಿದ್ದರೂ ಅವರು ಲೇಔಟ ನಿರ್ಮಾಣ ಮಾಡಿರಲಿಲ್ಲ. ಸುಮಾರು 9 ವರ್ಷ ಕಳೆದರೂ ಎದುರುದಾರರು ಲೇಔಟ ನಿರ್ಮಾಣ ಮಾಡದೇ ಮತ್ತು ತನಗೆ ಸೈಟು ಖರೀದಿ ಹಾಕಿಕೊಡದೇ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ರೇಣುಕಾ ಲಕ್ಷ್ಮೀ ಡೆವಲಪರ್ಸ್‍ರವರ ಮೆಲೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ದೂರುದಾರ ಎದುರುದಾರರ ಮೇಲೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: "ಪಕ್ಷ ಕಟ್ಟಿ ಬೆಳೆಸಿದವರನ್ನು ಮೂಲೆಗುಂಪು ಮಾಡಿದ್ದು ಬಿಜೆಪಿ ಸರ್ಕಾರದ ಇಮೇಜ್ ಕುಸಿಯಲು ಕಾರಣ"

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ.ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಸದಸ್ಯರು, 2013 ರಲ್ಲಿ ದೂರುದಾರನಿಂದ ರೂ.12 ಲಕ್ಷ ಹಣ ಪಡೆದುಕೊಂಡು ಎದುರುದಾರರು ಲೇಔಟ ನಿರ್ಮಾಣ ಮಾಡದೇ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ದೂರುದಾರರಿಗೆ ಮೋಸ ಎಸಗಿ ಸೇವಾ ನ್ಯೂನ್ಯತೆಗೈದಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಇದನ್ನೂ ಓದಿ: ಅಧಿಕಾರ ದುರ್ಬಳಿಕೆ : ಬಿಬಿಎಂಪಿ ಅಧಿಕಾರಿಗಳ ಜೊತೆ ಕಾಂಗ್ರೆಸ್ ನ ಸುರ್ಜೆವಾಲಾ ಮೀಟಿಂಗ್!

ದೂರುದಾರರು ಸಂದಾಯ ಮಾಡಿದ ರೂ.12 ಲಕ್ಷ ಮತ್ತು ಅದರ ಮೇಲೆ ಸಪ್ಟಂಬರ್ 11, 2013 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ15 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.1 ಲಕ್ಷ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ನೀಡುವಂತೆ ರೇಣುಕಾ ಲಕ್ಷ್ಮೀ ಡೆವಲಪರ್ಸ್ ನ ಆನಂದ ಹಬೀಬ್ ರವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿಗಳು ಮತ್ತು ಸಹಾಯಕ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News