ರಾಜ್ಯದಲ್ಲಿ ನಿಲ್ಲದ COVID-19 ಹಾವಳಿ: ನಿನ್ನೆಒಂದೇ ದಿನ 453 ಪ್ರಕರಣಗಳು

ರಾಜ್ಯದಲ್ಲಿ ನಿನ್ನೆ COVID 19 ವೈರಸ್ ಪೀಡಿತರ ಪೈಕಿ ಐವರು ಮೃತಪಟ್ಟಿದ್ದಾರೆ.‌ 

Last Updated : Jun 22, 2020, 05:52 AM IST
ರಾಜ್ಯದಲ್ಲಿ ನಿಲ್ಲದ COVID-19 ಹಾವಳಿ: ನಿನ್ನೆಒಂದೇ ದಿನ 453 ಪ್ರಕರಣಗಳು title=

ಬೆಂಗಳೂರು: ರಾಜ್ಯದಲ್ಲಿ ನಿನ್ನೆ 453 ಜನರಿಗೆ  ಕರೋನವೈರಸ್ (Coronavirus) COVID 19 ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದ COVID 19 ವೈರಸ್ ಪೀಡಿತರ ಸಂಖ್ಯೆ 9,150ಕ್ಕೆ ಏರಿಕೆತಾಗಿದೆ. ಬೆಂಗಳೂರು ನಗರವೊಂದರಲ್ಲೇ 196 , ಬಳ್ಳಾರಿಯಲ್ಲಿ 40, ಕಲಬುರಗಿಯಲ್ಲು 39, ವಿಜಯಪುರದಲ್ಲಿ 39, ಮೈಸೂರು ಜಿಲ್ಲೆಯಲ್ಲಿ 18 ಜನರಲ್ಲಿ ವೈರಸ್ ಪತ್ತೆಯಾಗಿದೆ.

ಇದಲ್ಲದೆ ರಾಜ್ಯದಲ್ಲಿ ನಿನ್ನೆ  ಕೋವಿಡ್ -19 (Covid-19) ವೈರಸ್ ಪೀಡಿತರ ಪೈಕಿ ಐವರು ಮೃತಪಟ್ಟಿದ್ದಾರೆ.‌ ಅವರೆಂದರೆ ಬೆಂಗಳೂರಲ್ಲಿ ಮೂವರು ಮತ್ತು ಬೀದರ್​ನಲ್ಲಿ ಇಬ್ಬರು. ನಿನ್ನೆ ಒಟ್ಟು 225 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 5,618ಕ್ಕೆ ಏರಿಕೆಯಾಗಿದೆ. ಇನ್ನು 3,391 ಸಕ್ರೀಯ ​ಪ್ರಕರಗಳಿವೆ ಎಂದು​ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಈ 453 ಸೋಂಕು ಪೀಡಿತರ ಪೈಕಿ 69 ಅಂತಾರಾಜ್ಯ ಹಾಗೂ 05 ಅಂತಾರಾಷ್ಟ್ರೀಯ ಪ್ರಯಾಣಿಕರು  ಎಂದು ತಿಳಿದುಬಂದಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

  • ಬೆಂಗಳೂರು ನಗರ-196
  • ಬಳ್ಳಾರಿ-40
  • ಕಲಬುರಗಿ-39
  • ವಿಜಯಪುರ-39
  • ಮೈಸೂರು-18
  • ಗದಗ-18
  • ಧಾರವಾಡ-15
  • ಬಾಗಲಕೋಟೆ-14
  • ಬೀದರ್-13
  • ದಾವಣಗೆರೆ-08
  • ಉತ್ತರ ಕನ್ನಡ-08
  • ಕೋಲಾರ-08
  • ದಕ್ಷಿಣ ಕನ್ನಡ-07
  • ಮಂಡ್ಯ-05
  • ಹಾಸನ-05
  • ತುಮಕೂರು-04
  • ಯಾದಗಿರಿ-03
  • ಚಿಕ್ಕಬಳ್ಳಾಪುರ-03
  • ಹಾವೇರಿ-03
  • ರಾಯಚೂರು-02
  • ಶಿವಮೊಗ್ಗ-02
  • ರಾಮನಗರ-02
  • ಚಿಕ್ಕಮಗಳೂರು -01

ಯಾವಜಿಲ್ಲೆಯಲ್ಲಿ ಎಷ್ಟು ಜನ ಡಿಸ್ಚಾರ್ಜ್?

  • ಬೀದರ್-58
  • ರಾಯಚೂರು-34
  • ದಕ್ಷಿಣ ಕನ್ನಡ-26
  • ಬೆಂಗಳೂರು ನಗರ-17
  • ಯಾದಗಿರಿ -15
  • ಬಳ್ಳಾರಿ-12
  • ಧಾರವಾಡ-12
  • ಕಲಬುರಗಿ-09
  • ವಿಜಯಪುರ-07
  • ಹಾಸನ-07
  • ಉಡುಪಿ-06
  • ಉತ್ತರ ಕನ್ನಡ-06
  • ಬಾಗಲಕೋಟೆ-06
  • ಚಿತ್ರದುರ್ಗ-03
  • ಗದಗ-03
  • ಬೆಳಗಾವಿ-03
  • ಕೊಪ್ಪಳ -01
     

Trending News