ಸೈಟ್ ಕೊಡದ ಡೆವಲಪರ್ಸ್ ಗೆ ರೂ. 5 ಲಕ್ಷ 62 ಸಾವಿರ ದಂಡ ವಿಧಿಸಿ ಪರಿಹಾರ ನೀಡಲು ಆಯೋಗದಿಂದ ಆದೇಶ

 ಹಾವೇರಿ ಜಿಲ್ಲಾ ಗುಡ್ಡದ ಬೇವಿನಹಳ್ಳಿ ನಿವಾಸಿ ಸುರೇಶ ದೊಡ್ಡನಾಗಹಳ್ಳಿ ಮತ್ತು ದಾವಣಗೆರಿ ಜಿಲ್ಲೆಯ ಗುಡ್ಡದೇನಹಳ್ಳಿ ನಿವಾಸಿ ಚಂದ್ರಶೇಖರ ಮಹೇಶಪ್ಪ ಎಂಬುವವರು 2010ರಲ್ಲಿ ಆಶೀರ್ವಾದ ಡೆವಲಪರ್ಸ್ ರವರು ಧಾರವಾಡದ ಸತ್ತೂರು ಗ್ರಾಮದಲ್ಲಿ ನಿರ್ಮಿಸುತ್ತಿದ್ದ ಲೇಔಟನಲ್ಲಿ ಸೈಟಗಳನ್ನು ಖರೀದಿಸಲು ಇಚ್ಛಿಸಿದ್ದರು. ಅದರಂತೆ ಇಬ್ಬರು ದೂರುದಾರರು ತಮ್ಮ ಸೈಟಿಗೆ ತಗಲುವ ಎಲ್ಲ ಹಣವನ್ನು ಎದುರುದಾರರಿಗೆ 2010 ರಲ್ಲಿ ಒಟ್ಟು ರೂ.4,41,560/- ಹಣವನ್ನು ಸಂದಾಯ ಮಾಡಿದ್ದರು.

Written by - Zee Kannada News Desk | Last Updated : Feb 27, 2024, 08:26 PM IST
  • ಆಗ ಇಬ್ಬರು ಎದುರುದಾರರು ಜಮೀನಿನ ಬಿನ್ ಶೇತಕಿ ಆದನಂತರ ಖರೀದಿ ಪತ್ರ ನೋಂದಾಯಿಸಿ ಕೊಡುವುದಾಗಿ ಒಪ್ಪಿಕೊಂಡಿದ್ದರು.
  • ಅದರಂತೆ ಅವರು ದೂರುದಾರರಿಗೆ ಖರೀದಿ ಕರಾರು ಪತ್ರಗಳನ್ನು ಬರೆದುಕೊಟ್ಟಿದ್ದರು.
  • ಮಾತುಕತೆಯಾಗಿ ಸುಮಾರು 12 ವರ್ಷಗಳ ಕಳೆದರೂ ಎದುರುದಾರರು ಲೇಔಟ ನಿರ್ಮಾಣ ಮಾಡಿಲ್ಲ
ಸೈಟ್ ಕೊಡದ ಡೆವಲಪರ್ಸ್ ಗೆ ರೂ. 5 ಲಕ್ಷ 62 ಸಾವಿರ ದಂಡ ವಿಧಿಸಿ ಪರಿಹಾರ ನೀಡಲು ಆಯೋಗದಿಂದ ಆದೇಶ title=

ಧಾರವಾಡ: ಹಾವೇರಿ ಜಿಲ್ಲಾ ಗುಡ್ಡದ ಬೇವಿನಹಳ್ಳಿ ನಿವಾಸಿ ಸುರೇಶ ದೊಡ್ಡನಾಗಹಳ್ಳಿ ಮತ್ತು ದಾವಣಗೆರಿ ಜಿಲ್ಲೆಯ ಗುಡ್ಡದೇನಹಳ್ಳಿ ನಿವಾಸಿ ಚಂದ್ರಶೇಖರ ಮಹೇಶಪ್ಪ ಎಂಬುವವರು 2010ರಲ್ಲಿ ಆಶೀರ್ವಾದ ಡೆವಲಪರ್ಸ್ ರವರು ಧಾರವಾಡದ ಸತ್ತೂರು ಗ್ರಾಮದಲ್ಲಿ ನಿರ್ಮಿಸುತ್ತಿದ್ದ ಲೇಔಟನಲ್ಲಿ ಸೈಟಗಳನ್ನು ಖರೀದಿಸಲು ಇಚ್ಛಿಸಿದ್ದರು. ಅದರಂತೆ ಇಬ್ಬರು ದೂರುದಾರರು ತಮ್ಮ ಸೈಟಿಗೆ ತಗಲುವ ಎಲ್ಲ ಹಣವನ್ನು ಎದುರುದಾರರಿಗೆ 2010 ರಲ್ಲಿ ಒಟ್ಟು ರೂ.4,41,560/- ಹಣವನ್ನು ಸಂದಾಯ ಮಾಡಿದ್ದರು.

ಇದನ್ನು ಓದಿ : Vijayanagar : ಶ್ರೀ ಕೊಟ್ಟೂರೇಶ್ವರ ಜಾತ್ರೆ ಹಿನ್ನೆಲೆ ವಿಶೇಷ ರೈಲು ವ್ಯವಸ್ಥೆ

ಆಗ ಇಬ್ಬರು ಎದುರುದಾರರು ಜಮೀನಿನ ಬಿನ್ ಶೇತಕಿ ಆದನಂತರ ಖರೀದಿ ಪತ್ರ ನೋಂದಾಯಿಸಿ ಕೊಡುವುದಾಗಿ ಒಪ್ಪಿಕೊಂಡಿದ್ದರು. ಅದರಂತೆ ಅವರು ದೂರುದಾರರಿಗೆ ಖರೀದಿ ಕರಾರು ಪತ್ರಗಳನ್ನು ಬರೆದುಕೊಟ್ಟಿದ್ದರು. ಮಾತುಕತೆಯಾಗಿ ಸುಮಾರು 12 ವರ್ಷಗಳ ಕಳೆದರೂ ಎದುರುದಾರರು ಲೇಔಟ ನಿರ್ಮಾಣ ಮಾಡಿಲ್ಲ ಮತ್ತು ತಮಗೆ ಪ್ಲಾಟ ಖರೀದಿ ಕೊಟ್ಟಿಲ್ಲ ಅಂತಾ ಹೇಳಿ ಅವರಿಗೆ ಹಣ ವಾಪಸ್ಸು ಕೊಡಲು ವಿನಂತಿಸಿದ್ದರು. ಎದುರುದಾರರು ದೂರುದಾರರ ಮಾತಿಗೆ ಕಿವಿಗೊಡಲಿಲ್ಲ. ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಹುಬ್ಬಳ್ಳಿಯ ಆಶೀರ್ವಾದ ಡೆವಲಪರ್ಸ್ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಬ್ಬರು ದೂರುದಾರರು ಪ್ರತ್ಯೇಕವಾಗಿ ಎದುರುದಾರರ ಮೇಲೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:14/08/2023 ರಂದು ದೂರು ಸಲ್ಲಿಸಿದ್ದರು.

ಇದನ್ನು ಓದಿ : 7ನೇ ವೇತನ ಆಯೋಗದ ವರದಿ ಬಂದ ನಂತರ ಸಕಾರಾತ್ಮಕ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಸದರಿ ದೂರುಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ 2010 ರಲ್ಲಿ ಇಬ್ಬರು ದೂರುದಾರ ರಿಂದ ಸೈಟ್ ಖರೀದಿ ಬೆಲೆ ಒಟ್ಟು ರೂ.4,41,560/- ಹಣ ಎದುರುದಾರರು ಪಡೆದುಕೊಂಡಿದ್ದಾರೆ. ಆ ಬಗ್ಗೆ ಅವರು ದೂರುದಾರರಿಗೆ ಖರೀದಿ ಕರಾರು ಪತ್ರ ಬರೆದು ಕೊಟ್ಟಿದ್ದಾರೆ. ನಿಗದಿತ ಅವಧಿಯಲ್ಲಿ ಲೇಔಟ ನಿರ್ಮಾಣದ ಕೆಲಸ ಮುಗಿಸಿ ಪ್ಲಾಟ ಖರೀದಿ ಹಾಕಿಕೊಡುವುದಾಗಿ ಎದುರುದಾರರು ದೂರುದಾರರಿಗೆ ಭರವಸೆ ಕೊಟ್ಟಿದ್ದರು. 12 ವರ್ಷ ಕಳೆದರೂ ಎದುರುದಾರರು ಲೇಔಟ ನಿರ್ಮಾಣ ಮುಗಿಸಿಲ್ಲ. ದೂರುದಾರರಿಗೆ ಪ್ಲಾಟಗಳನ್ನು ಖರೀದಿ ಹಾಕಿಕೊಡದೇ ಅವರ ಹಣವನ್ನು ಎದುರುದಾರರು ತಮ್ಮ ಅಭಿವೃದ್ದಿಯ ಕೆಲಸಕ್ಕೆ ಉಪಯೋಗಿಸಿಕೊಂಡಿರುವುದು ಸ್ಪಷ್ಟವಾಗಿ ರುಜುವಾತು ಆಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರು ಸಂದಾಯ ಮಾಡಿದ ರೂ.4,41,560/- ಮತ್ತು ಅದರ ಮೇಲೆ ಶೇ.8% ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ತಲಾ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಆಶೀರ್ವಾದ ಡೆವಲಪರ್ಸ್ ಮತ್ತು ಅದರ ಪಾಲುದಾರರಿಗೆ ಆಯೋಗ ನಿರ್ದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.

 

 

Trending News