ಗೃಹ ಮಂಡಳಿಯಿಂದ ಬೆಂಗಳೂರು ಹೊರವಲಯದ 5 ಕಡೆ ಹೈಟೆಕ್ ಸಿಟಿ, 4 ಕಡೆ ಐಷಾರಾಮಿ ವಿಲ್ಲಾ!

Zameer Ahmed: ಪ್ರತಿ ಉಪನಗರ ಎರಡು ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದ್ದು 30 ಸಾವಿರ ನಿವೇಶನ, ಐದು ಸಾವಿರ ಮನೆ ನಿರ್ಮಾಣ ಆಗಲಿದೆ. ಐದು ಉಪನಗರಗಳಲ್ಲಿ ಒಟ್ಟು 1.50 ಲಕ್ಷ ನಿವೇಶನ, 25 ಸಾವಿರ ಮನೆ ನಿರ್ಮಾಣ ಆಗಲಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ವಿವರಿಸಿದರು.  

Written by - Prashobh Devanahalli | Edited by - Chetana Devarmani | Last Updated : Jun 7, 2023, 04:39 PM IST
  • ಗೃಹ ಮಂಡಳಿ ವತಿಯಿಂದ ಐದು ಕಡೆ ಹೈಟೆಕ್ ಸಿಟಿ
  • 1.50 ಲಕ್ಷ ನಿವೇಶನ, 25 ಸಾವಿರ ಮನೆ ನಿರ್ಮಾಣ
  • ವಸತಿ ಸಚಿವ ಜಮೀರ್ ಅಹಮದ್ ಹೇಳಿಕೆ
ಗೃಹ ಮಂಡಳಿಯಿಂದ ಬೆಂಗಳೂರು ಹೊರವಲಯದ 5 ಕಡೆ ಹೈಟೆಕ್ ಸಿಟಿ, 4 ಕಡೆ ಐಷಾರಾಮಿ ವಿಲ್ಲಾ! title=

ಬೆಂಗಳೂರು: ರಾಜಧಾನಿಯ ಹೊರ ವಲಯದ ಐದು ಕಡೆ ಗೃಹ ಮಂಡಳಿ ವತಿಯಿಂದ ಹೈಟೆಕ್ ಸಿಟಿ (ಉಪನಗರ) ನಿರ್ಮಾಣ ಹಾಗೂ ನಾಲ್ಕು ಕಡೆ  ಐಷಾರಾಮಿ ವಿಲ್ಲಾ  ಯೋಜನೆ ಬಗ್ಗೆ ರೂಪು ರೇಷೆ ಸಿದ್ದಪಡಿಸಲು ವಸತಿ ಸಚಿವ ಜಮೀರ್ ಅಹಮದ್ ಸೂಚನೆ ನೀಡಿದ್ದಾರೆ. ಕಾವೇರಿ ಭವನದಲ್ಲಿ ಬುಧವಾರ ಗೃಹ ಮಂಡಳಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಬೆಂಗಳೂರಿನಲ್ಲಿ  ವಸತಿ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಲಾ ಎರಡು ಸಾವಿರ ಎಕರೆ ಪ್ರದೇಶದಲ್ಲಿ ವಿಶ್ವ ದರ್ಜೆ ಸೌಲಭ್ಯ ಹೊಂದಿರುವ ಟೌನ್ ಶಿಪ್ ಹಾಗೂ ಖಾಸಗಿ ವಲಯದ ಮಾದರಿ ಐಷಾ ರಾಮಿ ವಿಲ್ಲಾ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ದಪಡಿಸಲು ಹಾಗೂ ಅಗತ್ಯ ಜಮೀನು ಗುರುತಿಸಲು ನಿರ್ದೇಶನ ನೀಡಿದರು. ಪ್ರತಿ ಉಪನಗರ ಯೋಜನೆಯಲ್ಲಿ  30 ಸಾವಿರ ನಿವೇಶನ ಹಾಗೂ ಐದು ಸಾವಿರ ಮನೆ ನಿರ್ಮಾಣ ಮಾಡಲು ಅವಕಾಶ ಇರುವಂತೆ ಯೋಜನೆ ರೂಪಿಸುವಂತೆ ತಿಳಿಸಿದರು.

ವಿಲ್ಲಾ ಯೋಜನೆಗೆ ನಿಸರ್ಗದ ನಡುವಿನ 500 ಎಕರೆ ಪ್ರದೇಶ ಗುರುತಿಸಲು ಸೂಚನೆ ನೀಡಿದರು. ಬಡವರಿಗಾಗಿ ರೂಪಿಸುವ ಯೋಜನೆಗಳಲ್ಲಿ ಲಾಭ ನೋಡಬೇಡಿ. ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಆಗಬೇಡಿ ಎಂದು ತಾಕೀತು ಮಾಡಿದರು. 

ಇದನ್ನೂ ಓದಿ: ಟ್ಯಾಕ್ಟರ್ ಆರ್ಭಟಕ್ಕೆ ಪುಟ್ಟ ಕಂದಮ್ಮ ಬಲಿ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

 ಸಭೆಯ ನಂತರ ಮಾತನಾಡಿದ ಸಚಿವರು, ನಗರದ ಒತ್ತಡ ಕಡಿಮೆ ಮಾಡಲು ಹೊರವಲಯದಲ್ಲಿ ಉಪನಗರ ನಿರ್ಮಾಣ ಅನಿವಾರ್ಯ. ಮೆಟ್ರೋ ಸೇರಿದಂತೆ ಸಮರ್ಪಕ ಸಾರಿಗೆ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಉಪನಗರ ನಿರ್ಮಾಣ ಆಗಲಿದೆ ಎಂದು ತಿಳಿಸಿದರು. ಪ್ರತಿ ಉಪನಗರ ಎರಡು ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದ್ದು 30 ಸಾವಿರ ನಿವೇಶನ, ಐದು ಸಾವಿರ ಮನೆ ನಿರ್ಮಾಣ ಆಗಲಿದೆ. ಐದು ಉಪನಗರಗಳಲ್ಲಿ ಒಟ್ಟು 1.50 ಲಕ್ಷ ನಿವೇಶನ, 25 ಸಾವಿರ ಮನೆ ನಿರ್ಮಾಣ ಆಗಲಿದೆ ಎಂದು ವಿವರಿಸಿದರು.

ಅದೇ ರೀತಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ವಿದೇಶಗಳಿಂದ ಇಲ್ಲಿ ಖಾಯಂ ವಾಸಿಸಲು ಸಾಕಷ್ಟು  ಉದ್ಯಮಿಗಳು, ಗಣ್ಯರು ಬರುತ್ತಿದ್ದಾರೆ. ಹೊರವಲಯದಲ್ಲಿ ವಿಲ್ಲಾ ಗಳಿಗೆ ಬೇಡಿಕೆ ಇದೆ. ಹೀಗಾಗಿ ಗೃಹಮಂಡಳಿ ವತಿಯಿಂದ ಐಷಾರಾಮಿ ವಿಲ್ಲಾ ಯೋಜನೆ ರೂಪಿಸಲಾಗುವುದು. ಒಂದೊಂದು ವಿಲ್ಲಾ ಯೋಜನೆ 500 ಎಕರೆ ಪ್ರದೇಶದಲ್ಲಿ ಬರಲಿದ್ದು ಒಟ್ಟು 1000 ವಿಲ್ಲಾ ನಿರ್ಮಾಣ ಮಾಡಲಾಗುವುದು  ಎಂದು ತಿಳಿಸಿದರು.

ಇದನ್ನೂ ಓದಿ: 200 ಯೂನಿಟ್ ಉಚಿತ ವಿದ್ಯುತ್,‌ 13 ಸಾವಿರ ಕೋಟಿ ಆರ್ಥಿಕ ಹೊರೆ: ಕೆಜೆ ಜಾರ್ಜ್

ಜಮೀನು ಮಾಲೀಕರೊಂದಿಗೆ 50:50 ಸಹಭಾಗಿತ್ವದಲ್ಲಿ ಯೋಜನೆ  ಅನುಷ್ಠಾನ ವಾಗಲಿದ್ದು  ಗೃಹಮಂಡಳಿಗೆ ಭೂ ಸ್ವಾಧಿನ ವೆಚ್ಚದ ಹೊರೆಯಾಗುವುದಿಲ್ಲ ಎಂದು ತಿಳಿಸಿದರು. ವಸತಿ ಇಲಾಖೆ ಕಾರ್ಯದರ್ಶಿ ರವಿಕುಮಾರ್, ಗೃಹಮಂಡಳಿ ಆಯುಕ್ತರಾದ ಕವಿತಾ ಎಸ್. ಮನ್ನಿ ಕೇರಿ ಉಪಸ್ಥಿತರಿದ್ದರು.

ಪ್ರಗತಿ ಪರಿಶೀಲನೆ ಸಭೆ ಗೆ ಸೂಕ್ತ ಮಾಹಿತಿಯೊಂದಿಗೆ ಬಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಚಿವರು ನಾನು ಟೈಮ್ ಪಾಸ್ ಮಾಡಲು ಬಂದಿಲ್ಲ. ಸಭೆ ಅಂದರೆ ಗಂಭೀರತೆ ಇಲ್ಲವೇ. ವಾರದ ಮುಂಚೆ ಸಭೆ ನಿಗದಿ ಆಗಿದ್ದರೂ ಸೂಕ್ತ ಮಾಹಿತಿ ನಿಮ್ಮ ಬಳಿ ಮಾಹಿತಿ ಇಲ್ಲದಿದ್ದರೆ ಹೇಗೆ ಎಂದು ಪ್ರೆಶ್ನೆ ಮಾಡಿದರು.  ಮುಂದಿನ ಮಂಗಳವಾರ ಮತ್ತೊಮ್ಮೆ ಸಮಗ್ರ ಮಾಹಿತಿಯೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಹುತೇಕ ಹಾಲಿ ಸಂಸದರಿಗೆ ಕೋಕ್ ಸಾಧ್ಯತೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News