ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡ್ತಾ ಇದೆ: ಹೆಚ್‌.ಡಿ.ಕುಮಾರಸ್ವಾಮಿ

ಕಾನೂನು ಬಾಹಿರ ಚಟುವಟಿಕೆ ಮಾಡಿದರಿಗೆ ರಿಲೀಫ್ ಕೊಟ್ಟಿದೆ. ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡ್ತಾ ಇದೆ ಎಂದಿದ್ದಾರೆ. 

Written by - Chetana Devarmani | Last Updated : Oct 13, 2024, 02:59 PM IST
  • ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ವಿಚಾರ
  • ಗಲಭೆಕೋರರಿಗೆ ರಕ್ಷಣೆ ಕೊಡ್ತಾ ಇದೆ
  • ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ
ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡ್ತಾ ಇದೆ: ಹೆಚ್‌.ಡಿ.ಕುಮಾರಸ್ವಾಮಿ title=

ದಾವಣಗೆರೆ: ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದ ವಿಚಾರವಾಗಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ಮಾಡಿದರಿಗೆ ರಿಲೀಫ್ ಕೊಟ್ಟಿದೆ. ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡ್ತಾ ಇದೆ ಎಂದಿದ್ದಾರೆ. 

ಒಂದು ಕಡೆ ದ್ವೇಶ ರಾಜಕಾರಣ ಮಾಡ್ತಾ ಇದೆ. ಜಾಹಿರಾತಿನಲ್ಲಿ ಕೀಳುಮಟ್ಟದ ರಾಜಕೀಯ ಮಾಡಿದ್ದಾರೆ. ಕೀಳು ಮಟ್ಟದ ಜಾಹಿರಾತೀಗೆ 17 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ರಾಜ್ಯದ ತೆರಿಗೆ ಹಣವನ್ನ ಲೂಟಿ‌ ಮಾಡುತಿದ್ದಾರೆ ಎಂದು ಸರ್ಕಾರದ ವಿರುದ್ಧ ದಾವಣಗೆರೆಯಲ್ಲಿ ಕಿಡಿಕಾರಿದ್ದಾರೆ. 

ಪೊಲೀಸ್ ಅಧಿಕಾರಿ ಚಂದ್ರಶೇಖರ ದೂರು ದಾಖಲಿಸಿದ ವಿಚಾರವಾಗಿ, ನನ್ನ ಮೇಲೆ ಅವರು ದೂರು ದಾಖಲು ಮಾಡಿದ್ದಾರೆ. ಅದಕ್ಕೆ ನಾನು ನ್ಯಾಯಾಲಯದಲ್ಲಿ ಉತ್ತರ ಕೊಡುತ್ತೇನೆ. ಬೆಳಿಗ್ಗೆ ಯಾರನ್ನೋ ಕರಕೊಂಡು ಬರ್ತಾರೆ. ಟಿವಿಯಲ್ಲ ಕುರಿಸಿ ಮುಖವಾಡ ಹಾಕಿ ಮಾತನಾಡಿಸುತ್ತಾರೆ. ಮಾರನೆ ದೀನ ಅರೆಸ್ಟ್ ಮಾಡ್ತಾರೆ. 3-4 ಸಾವಿರ ಪುಟಗಳಷ್ಟು ಚಾರ್ಜ್ ಸೀಟ್ ಹಾಕ್ತಾರೆ. 12 ವರ್ಷದಿಂದ ನನ್ನ ಮೇಲೆ ಕೇಸ್ ಹಾಗೆ ಉಳಿಸಿಕೊಂಡಿದ್ದಾರೆ. ನನ್ನ ಮೇಲೆ ಕೇಸ್ ಹಾಕಿದ್ದಾರೆ ನ್ಯಾಯಾಲಯದಲ್ಲಿ ಎಲ್ಲ ಚರ್ಚೆ ಆಗಲಿ ಎಂದಿದ್ದಾರೆ. 

ಇದನ್ನೂ ಓದಿ: ವಿಜಯದಶಮಿ ದಿನ ತಾತನಿಗೆ ಬನ್ನಿ ಕೊಡಲು ಹೋದ ಮೊಮ್ಮಕ್ಕಳ ಬಾಳಲ್ಲಿ ದುರಂತ

ಕುಮಾರಸ್ವಾಮಿ ಅವರು ತಾಜ್ ವೆಸ್ಟಲ್ಯಾಂಡ್ ನಲ್ಲಿ ಅಧಿಕಾರ ನಡೆಸಿದ ಕುರಿತು ಬಾಲಕೃಷ್ಣ ಹೇಳಿಕೆ ವಿಚಾರ, ಅವರ ಹೇಳಿಕೆಗೆ ನಾನು ಮಾತನಾಡಲ್ಲ. ಅವರ ಬ್ಯಾಕ್‌ಗ್ರೌಂಡ ಏನು ಗೊತ್ತಿದೆ. 600 ಕೋಟಿ ಕೆಲಸ ಮಾಡದೆ ಬಿಲ್ ಮಾಡಿದ್ದಾರೆ ಅಂತ ಮಹದೇವಪ್ಪ ಅವರು ಮಾತನಾಡಿದರು. ಸದನ ಸಮಿತಿ ರಚಿಸಿ ತನಿಖೆ ಮಾಡಬೇಕು ಅಂದ್ರು. ಇವಾಗ ಅವರೆ ಅವರನ್ನ ಜೊತೆಗಿಟ್ಟುಕೊಂಡು ಓಡಾಡ್ತಾ ಇದ್ದಾರೆ ಎಂದಿದ್ದಾರೆ. 

2018 ರಲ್ಲಿ ಯಾರಾದ್ರೂ ಫೈಲ್ ಹಿಡ್ಕೊಂಡು ಬಂದಿದ್ರಾ..? ನಾನು ಏನಾದ್ರೂ ಸಹಿಗೆ ಕಮಿಷನ್ ತಗೊಂಡಿದ್ದೆ ಆದ್ರೆ ಅವರದೆ ಸರ್ಕಾರ ಇದೆ. ಅವರು ಅದರ ಬಗ್ಗೆ ತನಿಖೆ ಮಾಡಿಸಲಿ. ತೀಟೆಗೆ ಏನಾದ್ರೂ ಮಾತಾನಾಡಿದ್ರೆ ಇದಕ್ಕೆಲ್ಲ ನಾನೂ ಉತ್ತರ ಕೊಡಬೇಕಾ ಎಂದು ಪ್ರಶ್ನಿಸಿದರು.

ದಾವಣಗೆರೆಯಲ್ಲಿ ಕಾಟನ್ ಇಂಡಸ್ಟ್ರಿ, ಆಯಿಲ್ ಇಂಡಸ್ಟ್ರಿ ಇತ್ತು. ಆಧುನಿಕತೆ ಬೆಳೆದಂತೆ ಇದೆಲ್ಲ ನಶಿಸಿ ಹೋಗ್ತಾ ಇದೆ. ದಾವಣಗೆರೆ ಕೈಗಾರಿಕೆಗೆ ಸಪೋರ್ಟ್ ಕೊಟ್ಟಿದ್ದು ನಶಿಸಿ ಹೋಗಿದೆ. ಕೇಂದ್ರದಲ್ಲಿ ಈ ಕುರಿತು ಏನು ಮಾಡಬೇಕು ಅನ್ನೋದು ಚರ್ಚೆ ಮಾಡ್ತೀನಿ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಸಿಎಂ ಮತ್ತು ಡಿಸಿಎಂರಿಂದ ನಾಡಹಬ್ಬ ದಸರಾ ಶುಭಾಶಯ ಸಲ್ಲಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News