ಕುಮಾರಸ್ವಾಮಿ ಒಂದು ದಿನ ಭಾರತದ ರಾಷ್ಟ್ರಪತಿ ಆಗೋದು ಖಂಡಿತ ಅಂತ ಹೇಳಿದವರ್ಯಾರು ಗೊತ್ತಾ?

ಮಂಗಳೂರು ದಸರಾ 2018 ನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಉದ್ಘಾಟಿಸಿದರು.

Last Updated : Oct 15, 2018, 08:18 AM IST
ಕುಮಾರಸ್ವಾಮಿ ಒಂದು ದಿನ ಭಾರತದ ರಾಷ್ಟ್ರಪತಿ ಆಗೋದು ಖಂಡಿತ ಅಂತ ಹೇಳಿದವರ್ಯಾರು ಗೊತ್ತಾ? title=

ಮಂಗಳೂರು: ಮಂಗಳೂರು ದಸರಾ 2018 ನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಉದ್ಘಾಟಿಸಿದರು. 

ದೇಶದ ಚರಿತ್ರೆಯಲ್ಲಿ ದೇವೇಗೌಡರ ಪಾತ್ರ ಬಹಳ ದೊಡ್ಡದು:
ಮಂಗಳೂರು ದಸರಾ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ  ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ, ದೇವೇಗೌಡರು ದೇಶದ ಪ್ರಧಾನಿಯಾಗಿದ್ದರು. ದೇವೇಗೌಡರು ಎಲ್ಲಿ ನೋಡಿದರೂ ಗುರುಗಳೇ ಅನ್ನುತ್ತಿದ್ದರು, ಕುದ್ರೋಳಿ ಕ್ಷೇತ್ರ ನಿರ್ಮಾಣ ಬಗ್ಗೆ ಹೊಗಳುತ್ತಿದ್ದರು. ಆದರೆ, ಎಲ್ಲರಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ, ಪೂರ್ವಜರ ಪುಣ್ಯದಿಂದ ಮಾತ್ರ ಸಾಧ್ಯ. ದೇಶದ ಚರಿತ್ರೆಯಲ್ಲಿ ದೇವೇಗೌಡರ ಪಾತ್ರ ಬಹಳ ದೊಡ್ಡದು ಎನ್ನುತ್ತಾ ದೇವೇಗೌಡರು ದೇಶದ ಪ್ರಧಾನಿಯಾಗಿ ನೀಡಿದ  ಕೊಡುಗೆಗಳನ್ನು ನೆನಪು ಮಾಡಿದರು.

ಕುಮಾರಸ್ವಾಮಿ ಒಂದು ದಿನ ಭಾರತದ ರಾಷ್ಟ್ರಪತಿ ಆಗೋದು ಖಂಡಿತ:
ದೇವೇಗೌಡರ ಸುಪುತ್ರ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಸಹನೆ, ವಿನಯ ಹೊಂದಿದ್ದಾರೆ. ದೇವೇಗೌಡರೇ ನಿಮ್ಮ ಮಗ ನಮ್ಮ ಇಲ್ಲಿ ಬಂದು ದೇವರಿಗೆ ಕೈಮುಗಿದರು. ಕುಮಾರಸ್ವಾಮಿಯವರಲ್ಲಿ ನಾನು ವಿಶೇಷತೆ‌ ಕಂಡಿದ್ದೇನೆ. ಕುಮಾರಸ್ವಾಮಿ ಒಂದು ದಿನ ಭಾರತದ ರಾಷ್ಟ್ರಪತಿಗಳಾಗೋದು ಖಂಡಿತ ಎಂದು ಭವಿಷ್ಯ ನುಡಿದರು.

ಮುಂದುವರೆದು ಮಾತನಾಡಿದವ ಜನಾರ್ಧನ ಪೂಜಾರಿ, ಕುಮಾರಸ್ವಾಮಿ ರಾಷ್ಟ್ರಪತಿಗಳಾಗುವಾಗ ನಾನು ಇರಲ್ಲ. ಆದರೆ, ರಾಷ್ಟ್ರಪತಿಗಳಾಗುವಾಗ ದೇವರ ಸಮ್ಮುಖದಲ್ಲಿ ಪೂಜಾರಿ ಹೇಳಿದ ಎಂದು ನೆನಪಿಸಿ ಎಂದರು.

Trending News