ಲೋಕಸಭೆ ಸೀಟು ಹಂಚಿಕೆ: ಇಂದು ಅಮಿತ್‌ ಶಾ ಭೇಟಿಯಾಗಲಿರುವ ಎಚ್‌ಡಿ ಕುಮಾರಸ್ವಾಮಿ

Loksabha Election: 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯದ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷ ಒಂದಾಗಿ ಚುನಾವಣೆ ಎದುರಿಸಲಿವೆ. ರಾಜ್ಯದ 28ಕ್ಷೇತ್ರಗಳಲ್ಲಿ ಬಿಜೆಪಿ 22ರಿಂದ 23 ಮತ್ತು ಜೆಡಿಎಸ್ ಪಕ್ಷ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಕನ್ಫರ್ಮ್ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Dec 21, 2023, 07:45 AM IST
  • ದೆಹಲಿಯಲ್ಲಿ ದಳ-ಬಿಜೆಪಿ ಲೋಕಸಭೆ ಸೀಟ್‌ ಹಂಚಿಕೆ ಕಸರತ್ತು
  • ಇಂದು ಅಮಿತ್‌ ಶಾ ಅವರನ್ನ ಭೇಟಿಯಾಗಲಿರುವ ಕುಮಾರಸ್ವಾಮಿ
  • ಐದರಿಂದ ಆರು ಕ್ಷೇತ್ರಗಳಲ್ಲಿ ಬೇಡಿಕೆ ಇಡಲಿರೋ ಕುಮಾರಸ್ವಾಮಿ
ಲೋಕಸಭೆ ಸೀಟು ಹಂಚಿಕೆ: ಇಂದು ಅಮಿತ್‌ ಶಾ ಭೇಟಿಯಾಗಲಿರುವ ಎಚ್‌ಡಿ ಕುಮಾರಸ್ವಾಮಿ title=

Loksabha Election 2024: ಇನ್ನು ರಾಜ್ಯದಲ್ಲಿ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟು ಸೀಟು ಗೆಲ್ಲಲು NDA ಮಿತ್ರಕೂಟದ ಬಿಜೆಪಿ ಮತ್ತು‌ಜೆಡಿಎಸ್ ಪಕ್ಷ ನಿರ್ಧರಿಸಿದಂತಿದೆ. ದೇಶದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ‌ ಮತ್ತು ಛತ್ತೀಸಘಡ ರಾಜ್ಯಗಳನ್ನ ಗೆದ್ದ ಬಿಜೆಪಿ ಜೋಶ್ ನಲ್ಲಿದೆ.. ಇದೇ ಗೆಲುವಿನ ಸಂಭ್ರಮವನ್ನು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮುಂದುವರೆಸಲು ಬಿಜೆಪಿ‌ ಮತ್ತು ಜೆಡಿಎಸ್ ಪಕ್ಷಗಳು ಪ್ರಯತ್ನಿಸುತ್ತಿವೆ. 

ಹೌದು, ಎನ್‌ಡಿ‌ಎ  ಮಿತ್ರಕೂಟದ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷ 2024ರ ಲೋಕಸಭಾ ಚುನಾವಣೆಯ ಸೀಟ್ ಹಂಚಿಕೆ ಫೈನಲ್ ಕಸರತ್ತಿಗೆ ಮುಂದಾಗಿವೆ.. ದೆಹಲಿ ನಾಯಕರನ್ನು ಭೇಟಿಯಾಗಿ ಸೀಟು ಹಂಚಿಕೆ ಕನ್ಫರ್ಮ್ ಮಾಡಿಕೊಳ್ಳಲು ಜೆಡಿಎಸ್ ಮುಖಂಡ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ದೆಹಲಿಗೆ ತೆರಳಿದ್ದಾರೆ.  ಒಕ್ಕಲಿಗ ಪ್ರಾಬಲ್ಯದ ರಾಜ್ಯದಲ್ಲಿ ನಾಲ್ಕರಿಂದ ಐದು‌ಕ್ಷೇತ್ರ ಜೆಡಿಎಸ್ ಪಕ್ಷದ ಪಾಲಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ- ತೆರೆಮರೆಯಲ್ಲಿ ಎಂಪಿ ಎಲೆಕ್ಷನ್‌ಗೆ ನಿಖಿಲ್‌ ಕುಮಾರಸ್ವಾಮಿ ಸಿದ್ಧತೆ

2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯದ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷ ಒಂದಾಗಿ ಚುನಾವಣೆ ಎದುರಿಸಲಿವೆ. ರಾಜ್ಯದ 28ಕ್ಷೇತ್ರಗಳಲ್ಲಿ ಬಿಜೆಪಿ 22ರಿಂದ 23 ಮತ್ತು ಜೆಡಿಎಸ್ ಪಕ್ಷ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಕನ್ಫರ್ಮ್ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ದೆಹಲಿಯ ಬಿಜೆಪಿ ಹೈಕಮಾಂಡ್ ನಿಂದ ಅಂತಿಮ‌ ಮುದ್ರೆಗಾಗಿ ಜೆಡಿಎಸ್ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿನ್ನೆ (ಬುಧವಾರ) ದೆಹಲಿಗೆ ತೆರಳಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೆಂದ್ರ ಕೂಡ ದೆಹಲಿಗೆ ತೆರಳಿದ್ದು ಲೋಕಸಭೆ ಕುರಿತಂತೆ ಸೀಟು ಹಂಚಿಕೆ ಕಸರತ್ತಿನಲ್ಲಿ ತೊಡಗಿದ್ದಾರೆ. ನಿನ್ನೆ ತಡರಾತ್ರಿ ಬಿ‌ಜೆ‌ಪಿ ಹೈಕಮಾಂಡ್ ಜೊತೆ ಜೆ‌ಡಿ‌ಎಸ್ ನಾಯಕರರು ಸಭೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಜೊತೆ ಲೋಕಸಭಾ ಸೀಟು ಹಂಚಿಕೆ ಕುರಿತಂತೆ ಎಚ್‌ಡಿ ಕುಮಾರಸ್ವಾಮಿ ಮಾತುಕತೆ ನಡೆಸಿದ್ದು, ಇಂದು ಅಮಿತ್ ಶಾ ಭೇಟಿ ಬಳಿಕ ಪಟ್ಟಿ ಫೈನಲ್ ಆಗುವ ನಿರೀಕ್ಷೆಯಿದೆ. 

ಇದನ್ನೂ ಓದಿ- ಲೋಕಸಭಾ ಚುನಾವಣೆಗೆ ಕಮಲ - ದಳ ಮೈತ್ರಿ ಮುಖಭಂಗಕ್ಕೆ ಕಾಂಗ್ರೆಸ್ ರಣತಂತ್ರ

ಮುಂಬರುವ ಲೋಕಸಭಾ ಚುನಾವಣೆಗೆ ಇನ್ನು ಮೂರು ತಿಂಗಳು ಮಾತ್ರ ಬಾಕು ಉಳಿದಿದೆ. ಈ ಹೊತ್ತಿನಲ್ಲಿ ರಾಜ್ಯದ ಮತದಾರನ ಮನಸು ಗೆಲ್ಲಲು ಎನ್‌ಡಿ‌ಎ ಮೈತ್ರಿಕೂಟದೊಂದಿಗೆ ಕೈ ಜೋಡಿಸಿರುವ ಜೆ‌ಡಿ‌ಎಸ್ ಪಕ್ಷದ ನಿರ್ಧಾರಕ್ಕೆ ಜನತಾ ಜನಾರ್ಧನರ ಸಮ್ಮತಿ ಇದೆಯೇ?  ಈ ಎರಡೂ ಪಕ್ಷಗಳಿಗೆ ಸೀಟು ಹಂಚಿಕೆ ಟಚ್ ವರವಾಗುತ್ತಾ..!?  ಏನಾದರೂ ಎಡವಟ್ಟಾಗುತ್ತಾ..!? ಎಂಬುದನ್ನು ಕಾದು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News