ಸೇವಾ ನ್ಯೂನ್ಯತೆ ಎಸಗಿದ ರಿಲೈನ್ಸ್ ಇನ್ಪೋಕಾಮ್ ಲಿಮಿಟೆಡ್ ಕಂಪನಿಗೆ ದಂಡ ವಿಧಿಸಿ ಪರಿಹಾರ ನೀಡಲು ಆದೇಶ

ಹುಬ್ಬಳ್ಳಿಯ ತೋಳನಕೇರಿ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ರವರು ಧಾರವಾಡದ ಮಾರ್ಕೇಟ ಏರಿಯಾ ವಾರ್ಡ ನಂ.1 ರಲ್ಲಿನ ತಮ್ಮ ಮಾಲೀಕತ್ವದ ಸಿ.ಟಿ.ಎಸ್.ನಂ.265/37/ಎಮ್ 19602 ಚ.ಪು. ಖುಲ್ಲಾ ಜಾಗೆಯನ್ನು ಪ್ರತಿ ತಿಂಗಳ ಬಾಡಿಗೆ ಕೊಡುವ ಕರಾರಿನ ಮೇಲೆ ಖುಲ್ಲಾ ಜಾಗೆಯನ್ನು ರಿಲೈನ್ಸ್ ಇನ್ಪೋಕಾಮ್ ಲಿಮಿಟೆಡ್‍ಗೆ ಟಾವರ್ ಹಾಕಿಕೊಳ್ಳಲು ಕೊಟ್ಟಿದ್ದರು.

Written by - Manjunath N | Last Updated : Jan 23, 2024, 07:09 PM IST
  • ಬಾಡಿಗೆಯನ್ನು ಸಹ ಕೊಡದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ಆಯೋಗ ಆದೇಶಿಸಿದೆ
 ಸೇವಾ ನ್ಯೂನ್ಯತೆ ಎಸಗಿದ ರಿಲೈನ್ಸ್ ಇನ್ಪೋಕಾಮ್ ಲಿಮಿಟೆಡ್ ಕಂಪನಿಗೆ ದಂಡ ವಿಧಿಸಿ ಪರಿಹಾರ ನೀಡಲು ಆದೇಶ title=

ಧಾರವಾಡ: ಹುಬ್ಬಳ್ಳಿಯ ತೋಳನಕೇರಿ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ರವರು ಧಾರವಾಡದ ಮಾರ್ಕೇಟ ಏರಿಯಾ ವಾರ್ಡ ನಂ.1 ರಲ್ಲಿನ ತಮ್ಮ ಮಾಲೀಕತ್ವದ ಸಿ.ಟಿ.ಎಸ್.ನಂ.265/37/ಎಮ್ 19602 ಚ.ಪು. ಖುಲ್ಲಾ ಜಾಗೆಯನ್ನು ಪ್ರತಿ ತಿಂಗಳ ಬಾಡಿಗೆ ಕೊಡುವ ಕರಾರಿನ ಮೇಲೆ ಖುಲ್ಲಾ ಜಾಗೆಯನ್ನು ರಿಲೈನ್ಸ್ ಇನ್ಪೋಕಾಮ್ ಲಿಮಿಟೆಡ್‍ಗೆ ಟಾವರ್ ಹಾಕಿಕೊಳ್ಳಲು ಕೊಟ್ಟಿದ್ದರು.

ಮೇ-2003 ರಿಂದ ಮೇ-2023 ರವರೆಗೆ ಕರಾರು ಅವದಿ ಇತ್ತು. ಪ್ರತಿ ತಿಂಗಳು ಸರಿಯಾಗಿ ಬಾಡಿಗೆ ಕೊಡುವಂತೆ ಕರಾರು ಇತ್ತು. ಸದರಿ ಬಾಡಿಗೆ ಅವದಿ ದಿ:22/05/2023 ರಂದು ಮುಗಿದಿದ್ದು, ದೂರುದಾರರು ಹಲವಾರು ಬಾರಿ ಎದುರುದಾರರಿಗೆ ತಮ್ಮ ಟಾವರ ವಾಪಸ್ಸು ತೆಗೆದುಕೊಂಡು ಖುಲ್ಲಾ ಜಾಗೆಯ ಕಬ್ಜಾ ಹಾಗೂ ಮೇ 2023 ರಿಂದ ಸದರಿ ಜಾಗೆಯ ಬಾಡಿಗೆಯನ್ನು ಮತ್ತು ನಂತರದ ಅವದಿಗೆ ಬಾಡಿಗೆಯನ್ನು ನೀಡುವಂತೆ ಕೇಳಿದರೂ ಸಹ ಎದುರುದಾರ ರಿಲೈನ್ಸ್ ಕಂಪನಿಯವರು ಬಾಡಿಗೆ ಕೊಟ್ಟಿರಲಿಲ್ಲ. ತಮಗೆ ಎದುರುದಾರರು ಮೋಸ ಮಾಡಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಬ್ಬರೂ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:11/07/2023 ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಹಳಸಿದ ಬಾಯಲ್ಲಿ ದಾಲ್ಚಿನ್ನಿ ನೀರು ಕುಡಿಯಿರಿ: ಈ ಕಾಯಿಲೆಗಳಿಗೆ ಪರ್ಮನೆಂಟ್ ರಿಲೀಫ್ ಸಿಗುತ್ತೆ!

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತು ಪ್ರಭು. ಸಿ. ಹಿರೇಮಠ, ಉಭಯತರ ಮಧ್ಯ ಆಗಿರುವ ಬಾಡಿಗೆ ಕರಾರಿನ ಪ್ರಕಾರ ಪ್ರತಿ ತಿಂಗಳು ಎದುರುದಾರರು ದೂರುದಾರರಿಗೆ ಬಾಡಿಗೆ ಕೊಡಬೇಕಾಗಿದೆ. ಆದರೆ ಎದುರುದಾರರು ಅವದಿ ಮುಕ್ತಾಯವಾದರೂ ದೂರುದಾರರಿಗೆ ತಮ್ಮ ಟಾವರಿನ ಎಲ್ಲ ಸಲಕರಣೆಗಳನ್ನು ವಾಪಸ್ಸು ಪಡೆದುಕೊಂಡು ಖುಲ್ಲಾ ಜಾಗೆಯ ಕಬ್ಜಾ ಕೊಡದೇ ಇರುವುದು ಹಾಗೂ ಬಾಡಿಗೆಯನ್ನು ಸಹ ಕೊಡದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ಆಯೋಗ ಆದೇಶಿಸಿದೆ.

ಇದನ್ನೂ ಓದಿ: ಹಳಸಿದ ಬಾಯಲ್ಲಿ ದಾಲ್ಚಿನ್ನಿ ನೀರು ಕುಡಿಯಿರಿ: ಈ ಕಾಯಿಲೆಗಳಿಗೆ ಪರ್ಮನೆಂಟ್ ರಿಲೀಫ್ ಸಿಗುತ್ತೆ!

ಎದುರುದಾರರಿಗೆ ಮೇ-2023 ರಿಂದ ಜನೇವರಿ 2024ರವರೆಗೆ ಬಾಕಿ ಬಾಡಿಗೆ ಹಣವನ್ನು ತಮ್ಮ ಡಿಪಾಸಿಟ್ ಹಣ ಕಡಿತಮಾಡಿ ರೂ.76,540/- ಗಳನ್ನು ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡಲು ಆಯೋಗ ನಿರ್ದೇಶಿಸಿದೆ. ಎದುರುದಾರರು ಒಂದು ತಿಂಗಳ ಒಳಗಾಗಿ ಆಯೋಗದ ಆದೇಶ ಪಾಲನೆ ಮಾಡುವಲ್ಲಿ ವಿಫಲರಾದಲ್ಲಿ ದೂರುದಾರರಿಗೆ ಪೆಭ್ರುವರಿ 2024 ರಿಂದ ಖುಲ್ಲಾ ಜಾಗೆಯ ಕಬ್ಜಾ ಕೊಡುವವರೆಗೂ ಪ್ರತಿ ತಿಂಗಳು ರೂ.30,000/- ರಂತೆ ಬಾಡಿಗೆ ಕೊಡಲು ತನ್ನ ಆದೇಶದಲ್ಲಿ ತಿಳಿಸಿದೆ. ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ.50,000/- ಪರಿಹಾರ ಮತ್ತು ರೂ.2,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರ ರಿಲೈನ್ಸ್ ಇನ್ಪೋಕಾಮ್ ಲಿಮಿಟೆಡ್‍ಗೆ ಸೂಚಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News