Cabinet Expansion ಸಪ್ತ ನಾಯಕರ ಸಂಪುಟ ಎಂಟ್ರಿ ಪಕ್ಕಾ, ಆರು ಶಾಸಕರಿಗೆ ಮಂತ್ರಿಗಿರಿ ಬಹುತೇಕ ಖಚಿತ, ಉಳಿದ ಒಂದು ಸ್ಥಾನಕ್ಕೆ 12 ಮಂದಿ ಲಾಬಿ

ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.  

Written by - Zee Kannada News Desk | Last Updated : Jan 11, 2021, 10:08 AM IST
  • ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್, ಬೆನ್ನಲ್ಲೇ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ
  • ಸಪ್ತ ಶಾಸಕರ ಸಂಪುಟ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ ವರಿಷ್ಠ ಮಂಡಳಿ, ಇಬ್ಬರು ಹಾಲಿ ಸಚಿವರ ಕೈಬಿಡುವ ಸಾಧ್ಯತೆ
  • ಜ.13 ಅಥವಾ 14ರಂದು ಬೆಂಗಳೂರಿಗೆ ನಡ್ಡಾ ಅಥವಾ ಅರುಣ್ ಸಿಂಗ್..?
Cabinet Expansion ಸಪ್ತ ನಾಯಕರ ಸಂಪುಟ ಎಂಟ್ರಿ ಪಕ್ಕಾ, ಆರು ಶಾಸಕರಿಗೆ ಮಂತ್ರಿಗಿರಿ  ಬಹುತೇಕ ಖಚಿತ,  ಉಳಿದ ಒಂದು ಸ್ಥಾನಕ್ಕೆ 12 ಮಂದಿ ಲಾಬಿ title=
ಸಪ್ತ ಶಾಸಕರ ಸೇರ್ಪಡೆಗೆ ಗ್ರೀನ್ ಸಿಗ್ನಲ್, ಮಂತ್ರಿಗಿರಿ ಪಡೆಯಲು ಭರ್ಜರಿ ಲಾಬಿ ಶುರು(file photo)

ಬೆಂಗಳೂರು : ಸಂಪುಟ ವಿಸ್ತರಣೆಗೆ (Cabinet Expansion) ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಬೆನ್ನಲ್ಲೇ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. 13 ಅಥವಾ 14 ರಂದು  ಸಂಪುಟ ವಿಸ್ತರಣೆ ನಡೆಯಲಿದೆ. ಏಳು ಮಂದಿ ಶಾಸಕರ ಸಂಪುಟ ಸೇರ್ಪಡೆಗೆ ವರಿಷ್ಠರು ಒಪ್ಪಿಗೆ ನೀಡಿದ್ದಾರೆ. ಜೊತೆಗೆ ಇಬ್ಬರು ಹಾಲಿ ಸಚಿವರನ್ನು ಕೈಬಿಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. 

ಸಪ್ತ ಸಚಿವರು ಯಾರು ಯಾರು..?
ಆರ್‌ ಶಂಕರ್‌, (R Shankar) ಎಂಟಿಬಿ ನಾಗರಾಜ್‌ (MTB Nagaraj), ಮುನಿರತ್ನ (Munirathna), ಸಿಪಿ ಯೋಗೀಶ್ವರ್‌(C P Yogeshwar), ಉಮೇಶ್‌ ಕತ್ತಿ (Umesh Katti) ಹಾಗೂ ಅರವಿಂದ್‌ ಲಿಂಬಾವಳಿಗೆ (Aravind Limbavali) ಸಚಿವ ಸ್ಥಾನ ಖಚಿತ ಎನ್ನಲಾಗಿದೆ. ಉಳಿದ ಒಂದು ಸ್ಥಾನ ಹೊಸ ಮುಖ ಅಥವಾ ಮಹಿಳಾ ಶಾಸಕಿಗೆ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ : ಅತ್ತೂ ಕರೆದು ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆದ ಸಿಎಂ ಯಡಿಯೂರಪ್ಪ

ಒಂದು ಸ್ಥಾನಕ್ಕೆ 12 ಶಾಸಕರ ಫೈಟ್ : 
7 ಶಾಸಕರ ಸಂಪುಟ ಸೇರ್ಪಡೆಗೆ ವರಿಷ್ಠರು ಒಪ್ಪಿಗೆ ನೀಡಿದ್ದಾರೆ. ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ  ಆರು  ಶಾಸಕರಿಗೆ ಮಂತ್ರಿ ಸ್ಥಾನ ಬಹುತೇಕ ಖಚಿತ ಎನ್ನಲಾಗಿದೆ.  ಉಳಿದ ಒಂದು ಸ್ಥಾನಕ್ಕೆ 12 ಶಾಸಕರು ಪೈಪೋಟಿ ನಡೆಸುತ್ತಿದ್ದಾರೆ.  ಬಸನಗೌಡ ಪಾಟೀಲ್ ಯತ್ನಾಳ್ (Basavanagowda Patil Yatnal), ಪರಣ್ಣ ಮುನಳ್ಳಿ, ಪ್ರೀತಂ ಗೌಡ, ರೇಣುಕಾಚಾರ್ಯ ಸೇರಿದಂತೆ,  12 ಶಾಸಕರು ಪೈಪೋಟಿ ನಡೆಸುತ್ತಿದ್ದಾರೆ. ಅಥವಾ ಮಹಿಳಾ ಶಾಸಕಿಯರಿಗೂ ಬಿಜೆಪಿ ಮಣೆ ಹಾಕಬಹುದು ಎನ್ನಲಾಗಿದೆ. 

.13 ಅಥವಾ 14ರಂದು ಬೆಂಗಳೂರಿಗೆ ನಡ್ಡಾ ಅಥವಾ ಅರುಣ್ ಸಿಂಗ್..?
ಜ. 13ಅಥವಾ 14 ರಂದು ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ (Cabinet Expansion). ಮುಖ್ಯಮಂತ್ರಿ ಯಡಿಯೂರಪ್ಪ (B S Yadiyurappa) ಸೋಮವಾರ ಬೆಳಗ್ಗೆ ಈ ಮಾಹಿತಿ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, 13ಅಥವಾ 14ಕ್ಕೆ ಜೆಪಿ ನಡ್ಡಾ (J P Nadda) ಅಥವಾ ಅರುಣ್ ಸಿಂಗ್ (Arun Singh) ಅವರನ್ನು ಬೆಂಗಳೂರಿಗೆ ಕರೆಯಿಸುತ್ತೇವೆ. ಅವರೊಂದಿಗೆ ಸಮಾಲೋಚನೆ ನಡೆಸಿ ಸಂಪುಟಕ್ಕೆ ಶಾಸಕರ ಸೇರ್ಪಡೆ ಮತ್ತು ಕೈಬಿಡುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News