ನಾನೀಗ ಸರ್ಕಾರದಲ್ಲಿಲ್ಲ...ಮೇಯರ್ ಕಾರು ಮೇಯರ್ಗೆ ನಮ್ಮ ಕಾರು ನಮ್ಗೆ-ಸಿದ್ದರಾಮಯ್ಯ

ಇತ್ತಿಚೆಗಷ್ಟೇ ಮುಗಿದ ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ  ಸಿದ್ದರಾಮಯ್ಯ ಮೇಯರ್ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ದೊರೆಯುವಂತೆ ಮಾಡಲು ಮಹತ್ವದ ಪಾತ್ರ ವಹಿಸಿದ್ದರು.ಇದಕ್ಕೆ ನೂತನ ಮೈಸೂರು ಮೇಯರ್ ಆಗಿ ಆಯ್ಕೆಯಾಗಿದ್ದ ಪುಷ್ಪಲತಾ ತಾವು ಮೇಯರ್ ಆಗುವಲ್ಲಿ ಸಿದ್ದರಾಮಯ್ಯನವರ ಹಠ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದರು.

Last Updated : Nov 24, 2018, 01:48 PM IST
ನಾನೀಗ ಸರ್ಕಾರದಲ್ಲಿಲ್ಲ...ಮೇಯರ್ ಕಾರು ಮೇಯರ್ಗೆ ನಮ್ಮ ಕಾರು ನಮ್ಗೆ-ಸಿದ್ದರಾಮಯ್ಯ title=

ಬೆಂಗಳೂರು: ಇತ್ತಿಚೆಗಷ್ಟೇ ಮುಗಿದ ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ  ಸಿದ್ದರಾಮಯ್ಯ ಮೇಯರ್ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ದೊರೆಯುವಂತೆ ಮಾಡಲು ಮಹತ್ವದ ಪಾತ್ರ ವಹಿಸಿದ್ದರು.ಇದಕ್ಕೆ ನೂತನ ಮೈಸೂರು ಮೇಯರ್ ಆಗಿ ಆಯ್ಕೆಯಾಗಿದ್ದ ಪುಷ್ಪಲತಾ ತಾವು ಮೇಯರ್ ಆಗುವಲ್ಲಿ ಸಿದ್ದರಾಮಯ್ಯನವರ ಹಠ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದರು.

ಈಗ ಇತ್ತೀಚಿಗೆ ಮೈಸೂರಿನ ಏರಪೋರ್ಟ್ ನಲ್ಲಿ ಸಿದ್ದರಾಮಯ್ಯನವರಿಗೆ ನೂತನ ಮೇಯರ್ ಪುಷ್ಪಲತಾ ಜಗನ್ನಾಥ ತಮ್ಮ ಕಾರಿನಲ್ಲಿ ಬರುವಂತೆ ಆಹ್ವಾನಿಸಿದ್ದಾರೆ.ಆದರೆ ಈ ಆಹ್ವಾನವನ್ನು ಸಿದ್ದರಾಮಯ್ಯ ಅವರು ಮಾತ್ರ ಆಹ್ವಾನವನ್ನು ನಯವಾಗಿ ತಿರಸ್ಕರಿಸಿ" ನಾನೀಗ ಸರ್ಕಾರದಲ್ಲಿಲ್ಲ, ಅದು ಮೇಯರ್​ ಕಾರು. ನಿಮ್ಮ ಕಾರಿನಲ್ಲಿ ನೀವು ಬನ್ನಿ. ಮೇಯರ್ ಕಾರು ಮೇಯರ್ ಗೆ ನಮ್ ಕಾರು ನಮ್ಗೆ” ಅಂತ ಹೇಳಿ ನೂತನ ಮೇಯರ್ ಗೆ ಶಿಸ್ತಿನ ಪಾಠ ಮಾಡಿದ್ದಾರೆ.  

Trending News