ಮುತ್ತಪ್ಪ ರೈ ಆಸ್ತಿ ವಿವಾದ ಸುಖಾಂತ್ಯ... ʼರೈʼ ಬಿಟ್ಟುಹೋದ 2 ಸಾವಿರ ಕೋಟಿ ರೂ.ನಲ್ಲಿ ಸಿಂಹಪಾಲು ಯಾರದ್ದು? ಮಕ್ಕಳದ್ದಾ? 2ನೇ ಪತ್ನಿಯದ್ದಾ?

muthappa rai property distribution: ಆಸ್ತಿ ವಿಚಾರದಲ್ಲಿ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ಅವರು ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಆದರೆ ಇದೀಗ, ಎರಡೂ ಕಡೆಯಿಂದ ಮಾತುಕತೆ ನಡೆದು ಆಸ್ತಿಪಾಲು ವಿವಾದ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ ಎಂದು ಕೆಲ ಮಾಧ್ಯಮ ವರದಿ ತಿಳಿಸಿವೆ.  

Written by - Bhavishya Shetty | Last Updated : Oct 18, 2024, 07:22 PM IST
    • 2020ರಲ್ಲಿ ನಿಧನರಾಗಿದ್ದ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ
    • ಮುತ್ತಪ್ಪ ರೈ ಅವರಿಗೆ ಸೇರಿದ್ದ ಸುಮಾರು 2000 ಕೋಟಿ ರೂ. ಆಸ್ತಿ ಪಾಲು ವಿವಾದ
    • 2ನೇ ಪತ್ನಿ ಅನುರಾಧ ಹಾಗೂ ಮೊದಲ ಪತ್ನಿಯ ಮಕ್ಕಳಾದ ರಾಕಿ ಹಾಗೂ ರಿಕ್ಕಿ ರೈ ನಡುವೆ ವಿವಾದ
ಮುತ್ತಪ್ಪ ರೈ ಆಸ್ತಿ ವಿವಾದ ಸುಖಾಂತ್ಯ... ʼರೈʼ ಬಿಟ್ಟುಹೋದ 2 ಸಾವಿರ ಕೋಟಿ ರೂ.ನಲ್ಲಿ ಸಿಂಹಪಾಲು ಯಾರದ್ದು? ಮಕ್ಕಳದ್ದಾ? 2ನೇ ಪತ್ನಿಯದ್ದಾ? title=
muthappa rai

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ, ಅಂದರೆ 2020ರಲ್ಲಿ ನಿಧನರಾಗಿದ್ದ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರಿಗೆ ಸೇರಿದ್ದ ಸುಮಾರು 2000 ಕೋಟಿ ರೂ. ಆಸ್ತಿ ಪಾಲು ವಿವಾದ ಇದೀಗ ಸುಖಾಂತ್ಯ ಕಂಡಿದೆ. ಅವರ ಎರಡನೇ ಪತ್ನಿ ಅನುರಾಧ ಹಾಗೂ ಮೊದಲ ಪತ್ನಿಯ ಮಕ್ಕಳಾದ ರಾಕಿ ಹಾಗೂ ರಿಕ್ಕಿ ರೈ ನಡುವೆ ಈ ವಿವಾದ ನಡೆಯುತ್ತಿತ್ತು.

ಇದನ್ನೂ ಓದಿ: ಅವರ ತಪ್ಪಿಗೆ... ಇವರಿಗೆ ಶಿಕ್ಷೆ...!? ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜೀನಾಮೆಗೆ ಭಾರೀ ಆಗ್ರಹ

ಆಸ್ತಿ ವಿಚಾರದಲ್ಲಿ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ಅವರು ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಆದರೆ ಇದೀಗ, ಎರಡೂ ಕಡೆಯಿಂದ ಮಾತುಕತೆ ನಡೆದು ಆಸ್ತಿಪಾಲು ವಿವಾದ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ ಎಂದು ಕೆಲ ಮಾಧ್ಯಮ ವರದಿ ತಿಳಿಸಿವೆ.

ಮುತ್ತಪ್ಪ ರೈ ಅವರಿಗೆ ಸೇರಿದ ಆಸ್ತಿಯು ಬೆಂಗಳೂರು ಹೊರವಲಯದಲ್ಲಿ, ದೇವನಹಳ್ಳಿ, ಮೈಸೂರು, ಮಂಗಳೂರಿನಲ್ಲಿ ಬಹಳಷ್ಟಿತ್ತು. ಅದರ ಒಟ್ಟಾರೆ ಪ್ರಸ್ತುತ ಮಾರುಕಟ್ಟೆ ಬೆಲೆ 2,000 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಇನ್ನು ಮುತ್ತಪ್ಪ ರೈ ಅವರು ಬದುಕಿದ್ದಾಗಲೇ ಈ ಆಸ್ತಿ ವಿಚಾರದಲ್ಲಿ ಉಯಿಲು ಮಾಡಿಸಿದ್ದರು. ಅದರಲ್ಲಿ ತಮ್ಮ ಮೊದಲ ಪತ್ನಿಯ ಇಬ್ಬರು ಮಕ್ಕಳಿಗೆ ಏನೇನು ಹೋಗಬೇಕು, ಎರಡನೇ ಪತ್ನಿಗೆ ಎಷ್ಟು ಆಸ್ತಿ ಹೋಗಬೇಕು ಎಂಬುದನ್ನು ಉಲ್ಲೇಖಿಸಿದ್ದರು.

ಆದರೆ, ಮುತ್ತಪ್ಪ ರೈ ಅವರ ನಿಧನದ ಬಳಿಕ, ಅವರ ಎರಡನೇ ಪತ್ನಿ ಅನುರಾಧಾ, ಒಟ್ಟು ಆಸ್ತಿಯಲ್ಲಿ ತಮಗಿನ್ನೂ ಹೆಚ್ಚು ಬರಬೇಕಿದೆ. ಕಾನೂನಿನ ಪ್ರಕಾರ, ಎರಡನೇ ಪತ್ನಿಗೆ ಎಷ್ಟು ಸಿಗಬೇಕೋ ಅಷ್ಟು ಸಿಕ್ಕಿಲ್ಲ ಎಂದು ಅಸಮಾಧಾನ್ಯ ವ್ಯಕ್ತಪಡಿಸಿ ಕೋರ್ಟ್‌ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯದಲ್ಲಿ ಪ್ರತಿವಾದ ಮಂಡಿಸಿದ್ದ ಮುತ್ತಪ್ಪ ರೈ ಅವರ ಮೊದಲ ಪತ್ನಿಯ ಮಕ್ಕಳಾದ ರಾಕಿ ಹಾಗೂ ರಿಕ್ಕಿ ಅವರು, ತಮ್ಮ ತಂದೆಯ ಕಾಲದಲ್ಲೇ ಅವರಿಗೆ ಏನು ಬೇಕೋ ಅದನ್ನು ಕೊಡಲಾಗಿದೆ. ಚಿನ್ನದ ಆಭರಣಗಳು, ಒಂದು ಕಾರು, ದೊಡ್ಡ ಮೊತ್ತದ ನಗದು, ಎಚ್ ಡಿ ಕೋಟೆಯಲ್ಲಿ ಒಂದು ಸ್ಥಿರಾಸ್ತಿ, ಬೆಂಗಳೂರಿನ ಸಹಕಾರ ನಗರದಲ್ಲಿ ಎರಡು ಮಹಡಿಗಳ ಒಂದು ಕಟ್ಟಡ ಇವೆಲ್ಲವನ್ನೂ ನೀಡಲಾಗಿದೆ ಎಂದು ಹೇಳಿದ್ದರು. ಇವೆಲ್ಲವನ್ನು ಮುತ್ತಪ್ಪ ರೈ ಬದುಕಿದ್ದಾಗಲೇ ಅನುರಾಧಾ ಅವರಿಗೆ ಬಿಟ್ಟುಕೊಟ್ಟಿದ್ದರು ಎಂದು ವಾದಿಸಿದ್ದರು.

ಇದನ್ನೂ ಓದಿ: ನಟಿ ಜ್ಯೋತಿಕಾ ತಂಗಿ ಕನ್ನಡದ ಜನಪ್ರಿಯ ನಟಿ! ರವಿಚಂದ್ರನ್‌, ಶಿವರಾಜ್‌ ಕುಮಾರ್‌ ಜೊತೆಯೂ ನಟಿಸಿದ್ದ ಈ ಅತಿಲೋಕ ಸುಂದರಿ 49 ವರ್ಷವಾದ್ರೂ ಇನ್ನೂ ಸಿಂಗಲ್‌ ಆಗಿದ್ದಾರೆ!

ಇನ್ನೊಂದೆಡೆ, ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದಾಗಲೇ ರಾಕಿ ಹಾಗೂ ರಿಕ್ಕಿ ಅವರು ತಮ್ಮ ಪಾಲಿಗೆ ಬಂದಿದ್ದ ಸ್ಥಿರಾಸ್ತಿಯೊಂದನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಈ ವಿಚಾರವನ್ನು ನ್ಯಾಯಾಲಯದಲ್ಲಿ ಅನುರಾಧಾ ಅವರು ಪ್ರಶ್ನೆ ಮಾಡಿದ್ದರು. ಈ ಬಳಿಕ ಕೇಸ್ ಮತ್ತಷ್ಟು ತೀವ್ರತೆ ಪಡೆದುಕೊಂಡಿತ್ತು. ಆದರೆ ಸದ್ಯ ಎರಡೂ ಕಡೆಯವರು ಕುಳಿತು ಮಾತನಾಡಿ ಆಸ್ತಿಯನ್ನು ಹಂಚಿಕೊಳ್ಳಲು ನಿರ್ಧರಿಸಿದ್ದು, ಕಾನೂನಿನ ಪ್ರಕಾರ, ಅನುರಾಧಾ ಅವರಿಗೆ ಆಸ್ತಿಯಲ್ಲಿ ಕೊಂಚ ಹೆಚ್ಚೇ ಸಿಕ್ಕಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News