"ಬ್ರಿಟಿಷರ ಬೂಟು ನೆಕ್ಕಿದ ಜನರಿಂದ ನಾವು ಪಾಠ ಕಲಿಯಬೇಕಿಲ್ಲ"

ಭಯೋತ್ಪಾದಕರಿಗೆ ಪರವಾಗಿ ಯಾರಿದ್ದರೂ ಎಂದು ದೇಶದ ಜನ ಮರೆತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿಕೆ‌ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Written by - Zee Kannada News Desk | Last Updated : Dec 17, 2022, 06:15 PM IST
  • ಸುಮಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರು ಬಿಜೆಪಿ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ.
  • ಈ ಬಾರಿ ಅಧಿವೇಶನದಲ್ಲಿ ಅರಣ್ಯ ಭೂ ಒತ್ತುವಳಿದಾರರ ಸಮಸ್ಯೆಯನ್ನ ಚರ್ಚೆ ಮಾಡಲಾಗುತ್ತದೆ.
  • ಈ ಭಾಗದ ಜನರಿಗೆ ನ್ಯಾಯ ದೊರಕಿಸುವ, ಹಕ್ಕುಗಳನ್ನ ನೀಡುವ ಪ್ರಯತ್ನ ಮಾಡುತ್ತೇವೆ.
"ಬ್ರಿಟಿಷರ ಬೂಟು ನೆಕ್ಕಿದ ಜನರಿಂದ ನಾವು ಪಾಠ ಕಲಿಯಬೇಕಿಲ್ಲ" title=

ಉತ್ತರ ಕನ್ನಡ:  ಬ್ರಿಟಿಷರ ಬೂಟು ನೆಕ್ಕಿದ ಜನರಿಂದ ನಾವು ಪಾಠ ಕಲಿಯಬೇಕಿಲ್ಲ.ಕಂದಹಾರ ವಿಮಾನ ಅಪಹರಣದಲ್ಲಿ ನಡೆದ ಭಯೋತ್ಪಾದನಾ ಘಟನೆಯ ಆರೋಪಿಗೆ ಎಲ್ ಕೆ ಅಡ್ವಾಣಿ ಕ್ಲೀನ್ ಚೀಟ್ ನೀಡಿದ್ರು. ಭಯೋತ್ಪಾದಕರಿಗೆ ಪರವಾಗಿ ಯಾರಿದ್ದರೂ ಎಂದು ದೇಶದ ಜನ ಮರೆತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿಕೆ‌ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವರು ಶಿರಸಿ ಹಾಗೂ ಕಾರವಾರದಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುಪಿಯ ಸರ್ಕಾರದಲ್ಲಿ ಉಳುವವನೆ ಭೂಮಿಯ ಒಡೆಯ ನೀತಿಗಳಿದ್ವು.ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಉಳ್ಳುವವರು ಮಾತ್ರ ಭೂಮಿಯ ಒಡೆಯರು ಎಂಬ ನೀತಿಗಳು ಬಂದಿವೆ. ಭೂಮಿ ಇಲ್ಲದವರಿಗೆ ಭೂಮಿ ನೀಡುವುದರ ಬದಲಾಗಿ, ಬಡವರ ಬಳಿ ಇರುವ ಸಾಗುವಳಿ ಭೂಮಿಯನ್ನ ಬಿಜೆಪಿ ಸರ್ಕಾರ ಕಿತ್ತುಕೊಳ್ಳುತ್ತಿದೆ‌.

ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ : ಶಾರೀಕ್‌ಗೆ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಚಿಕಿತ್ಸೆ

ಭೂಮಿ ಇಲ್ಲದವರಿಗೆ ಭೂಮಿ ನೀಡುವುದರ ಬದಲಾಗಿ, ಬಡವರ ಬಳಿ ಇರುವ ಸಾಗುವಳಿ ಭೂಮಿಯನ್ನ ಬಿಜೆಪಿ ಸರ್ಕಾರ ಕಿತ್ತುಕೊಳ್ಳುತ್ತಿದೆ‌.ಅರಣ್ಯವಾಸಿಗಳಿಗೆ ಭೂ ಒಡೆತನದ ಹಕ್ಕನ್ನು ನೀಡದೆ, ಯುಪಿಎ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಂದಂತಹ ಕ್ರಾಂತಿಕಾರಿಕ ಅರಣ್ಯ ಹಕ್ಕು ಕಾಯ್ದೆಗಳನ್ನ ದುರ್ಬಲಗೊಳಿಸಲಾಗಿದೆ.

2006ರ ಅರಣ್ಯ ಹಕ್ಕುಗಳ ಕಾಯ್ದೆಯ ಪ್ರಕಾರ ಬಡ ಜನರಿಗೆ, ಅರಣ್ಯವಾಸಿಗಳಿಗೆ, ಬುಡಕಟ್ಟು ಸಮುದಾಯಗಳಿಗೆ ಭೂಮಿಯ ಹಕ್ಕನ್ನು ಹೊಂದುವ ಹಕ್ಕಿದೆ. ಯುಪಿಎ ಕಾಂಗ್ರೆಸ್ ಅವಧಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಎಫ್‌ಆರ್‌ಎ(ಅರಣ್ಯ ಹಕ್ಕು ಕಾಯ್ದೆ)ಯನ್ನು ಜಾರಿಗೆ ತರಲಾಗಿತ್ತು.

ಆದಿವಾಸಿಗಳು ಮತ್ತು 75 ವರ್ಷಗಳಿಗಿಂತ ಹೆಚ್ಚು ಅಥವಾ ಮೂರು ತಲೆಮಾರಿಗಿಂತ ಹೆಚ್ಚು ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಮತ್ತು ಬುಡಕಟ್ಟುಯೇತರ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಈ ಕಾಯ್ದೆ ಎತ್ತಿಹಿಡಿದಿದೆ. ಆದರೆ ಮೋದಿ ಸರ್ಕಾರ ಕಾಯ್ದೆಗಳನ್ನ ತಿದ್ದುಪಡಿ ಮಾಡಿ, ದುರ್ಬಳಗೊಳಿಸುವ ಮೂಲಕ ಬಾಬಾ ರಾಮದೇವ್, ಅದಾನಿ, ಅಂಬಾನಿಯಂತವರಿಗೆ ಸಾವಿರಾರು ಎಕರೆ ಅರಣ್ಯ ಭೂಮಿಯನ್ನ ನೀಡಿದೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು, ಬುಡಕಟ್ಟು ಸಮುದಾಯಗಳು ಅರಣ್ಯಭೂಮಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಸುಮಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರು ಬಿಜೆಪಿ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಬಾರಿ ಅಧಿವೇಶನದಲ್ಲಿ ಅರಣ್ಯ ಭೂ ಒತ್ತುವಳಿದಾರರ ಸಮಸ್ಯೆಯನ್ನ ಚರ್ಚೆ ಮಾಡಲಾಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಬಂದರೆ ವಿಶೇಷವಾಗಿ ಈ ಭಾಗದ ಜನರಿಗೆ ನ್ಯಾಯ ದೊರಕಿಸುವ, ಹಕ್ಕುಗಳನ್ನ ನೀಡುವ ಪ್ರಯತ್ನ ಮಾಡುತ್ತೇವೆ.

'ಭಯೋತ್ಪಾದನೆ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಿರುವ ಪಕ್ಷ. ಉಗ್ರ ಚಟುವಟಿಕೆ ಎಂದಿಗೂ ಬೆಂಬಲಿಸಿಲ್ಲ'.ದೇಶದ್ರೋಹಿಗಳ ವಿರುದ್ಧ ಹೋರಾಡಿದ್ದಕ್ಕೆ ಮಹಾತ್ಮ ಗಾಂಧೀಜಿ ಅವರನ್ನು ಕಳೆದುಕೊಂಡೆವು. ಭಯೋತ್ಪಾದನೆ ವಿರುದ್ದ ಹೋರಾಡಿದ್ದಕ್ಕಾಗಿಯೇ ಇಂದಿರಾ ಗಾಂಧಿ ಹಾಗೂ ಐಕ್ಯತೆಗಾಗಿ ರಾಜೀವ್‌ ಗಾಂಧಿ ಜೀವ ತೆತ್ತಿದ್ದಾರೆ. ಆದರೂ ಕಾಂಗ್ರೆಸ್ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿದೆ' 

ಬ್ರಿಟಿಷರ ಬೂಟು ನೆಕ್ಕಿದ ಜನರಿಂದ ನಾವು ಪಾಠ ಕಲಿಯಬೇಕಿಲ್ಲ.ಕಂದಹಾರ ವಿಮಾನ ಅಪಹರಣದಲ್ಲಿ ನಡೆದ ಭಯೋತ್ಪಾದನಾ ಘಟನೆಯ ಆರೋಪಿಗೆ ಎಲ್ ಕೆ ಅಡ್ವಾಣಿ ಕ್ಲೀನ್ ಚೀಟ್ ನೀಡಿದ್ರು. ಭಯೋತ್ಪಾದಕರಿಗೆ ಪರವಾಗಿ ಯಾರಿದ್ದರೂ ಎಂದು ದೇಶದ ಜನ ಮರೆತಿಲ್ಲ.

ಪೊಲೀಸರ ತನಿಖೆಗೂ ಮೊದಲೇ ನಾಗಪುರ ಯುನಿವರ್ಸಿಟಿಯಲ್ಲಿ ಸರ್ಟಿಫಿಕೇಟ್ ಬರುತ್ತೆ.ಮಂಗಳೂರು ಪೊಲೀಸರು ಘಟನೆಗೆ ಬಗ್ಗೆ ತನಿಖೆಯೇ ಪ್ರಾರಂಭ ಮಾಡಿರಲಿಲ್ಲ, ಆಗಲೇ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಕಚೇರಿಗೇ ಕನ್ನ ಹಾಕಿದ ಖದೀಮರು: ದಾಖಲೆಗಳು ಸೇರಿ ಕಂಪ್ಯೂಟರ್ ಕಳ್ಳತನ!

ಕಾಂಗ್ರೆಸ್ ಪಕ್ಷವನ್ನ ಬ್ಯಾನ್ ಮಾಡಲು ಈಶ್ವರಪ್ಪನವರ ವಂಶಪೂರ್ತಿ ಹತ್ತು ಸಲ ಹುಟ್ಟಿದ್ರು ಸಾಧ್ಯವಿಲ್ಲ.ಕಾಂಗ್ರೆಸ್ ಪಕ್ಷ ಜನರು ಕಟ್ಟಿರುವಂತದ್ದು, ನಾಗಪುರದವರಲ್ಲ. ನಾಯಕ್ ಆಪರೇಷನ್ ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಒಪ್ಪಿ ಯಾರಾದರೂ ಬರಬಹುದು. ಕಳ್ಳತನದಿಂದ ಬಿಜೆಪಿಯವರು ಶಾಸಕರನ್ನ ಕದ್ದು ಹೋಗಿದ್ದು. ಈಗ ಅವರಿಗೆ ಭ್ರಮನಿರಸನವಾಗಿ ವಾಪಾಸ್ ಬರುತ್ತಿದ್ದಾರೆ.

ಕರ್ನಾಟಕಕಕ್ಕೆ ವಿಶ್ವಗುರು, ಸುಳ್ಳಿನ ಸರದಾರ ನರೇಂದ್ರ ಮೋದಿ ಬಂದಷ್ಟು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುತ್ತೆ.ಗಡಿಪಾರದ ಗೃಹ ಸಚಿವ ಅಮಿತ್ ಶಾ ಬಂದಷ್ಟು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ.ಬಿಜೆಪಿಯವರು ಗುಜರಾತ್ ಮಾದರಿಯೇ ಚುನಾವಣೆ ಎದುರಿಸಲಿ,ನಾವು ಸಿದ್ದರಾಗಿದ್ದೇವೆ.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ನಾಯ್ಕ್ ವಕೀಲರಾದ ರವೀಂದ್ರ ನಾಯ್ಕ, ಎಸ್.ಕೆ.ಭಾಗವತ, ಪುಷ್ಪಾ ನಾಯ್ಕ ಇದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News