ಚುನಾವಣೆಯಲ್ಲಿ ಸೋತಾಗಲೆಲ್ಲಾ ದೇವೇಗೌಡ, ಎಚ್ಡಿಕೆ ನಿವೃತ್ತಿ ಮಾತನ್ನಾಡುತ್ತಾರೆ- ಜಗದೀಶ್ ಶೆಟ್ಟರ್

ರಾಜಕೀಯದಿಂದ ದೂರು ಸರಿಯುವ ಇಂಗಿತ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

Last Updated : Aug 4, 2019, 02:02 PM IST
ಚುನಾವಣೆಯಲ್ಲಿ ಸೋತಾಗಲೆಲ್ಲಾ ದೇವೇಗೌಡ, ಎಚ್ಡಿಕೆ ನಿವೃತ್ತಿ ಮಾತನ್ನಾಡುತ್ತಾರೆ- ಜಗದೀಶ್ ಶೆಟ್ಟರ್  title=
Photo courtesy: ANI

ಬೆಂಗಳೂರು: ರಾಜಕೀಯದಿಂದ ದೂರು ಸರಿಯುವ ಇಂಗಿತ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್' ಇಂತಹ ಮಾತುಗಳನ್ನು ಸಾಕಷ್ಟು ಸಾರಿ ಕೇಳಿದ್ದೇನೆ. ದೇವೇಗೌಡ ಕುಟುಂಬದ ಹೇಳಿಕೆಗಳೇ ಆ ರೀತಿ ಇರುತ್ತವೆ. ಅವರೇನೋ ಹೇಳಿರುತ್ತಾರೆ ಅದಕ್ಕೆ ವಿರುದ್ಧವಾಗಿ ಅವರು ಮಾಡುತ್ತಾರೆ. ಆದ್ದರಿಂದ ನಾವು ಈ ಹೇಳಿಕೆಗಳನ್ನು ಗಂಭೀರವಾಗಿ ತಗೆದುಕೊಳ್ಳಬಾರದು. ಏಕೆಂದರೆ ದೇವೇಗೌಡ ಮತ್ತು ಕುಮಾರಸ್ವಾಮಿ ನಾಟಕವಾಡುತ್ತಿದ್ದಾರೆ. ಚುನಾವಣೆ ಸೋತಾಗಲೆಲ್ಲಾ ಯಾವಾಗಲೂ ಕಣ್ಣೀರು ಮತ್ತು ರಾಜಕೀಯದಿಂದ ನಿವೃತ್ತಿಯಾಗುವ ಮಾತನನ್ನು ಆಡುತ್ತಾರೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ' ನಾಳೆ ಅಥವಾ ನಾಡಿದ್ದು ನಮ್ಮ ಸಿಎಂ ಯಡಿಯೂರಪ್ಪನವರು ದೆಹಲಿಗೆ ಹೋಗುತ್ತಿದ್ದಾರೆ. ಆಗ ಅವರು ಅಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮತ್ತು ಪ್ರಧಾನಿಯವರೊಂದಿಗೆ ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸುತ್ತಾರೆ. ನನ್ನ ಪ್ರಕಾರ ಸದ್ಯದಲ್ಲೇ ಸಚಿವ ಸಂಪುಟ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Trending News