2000 ವರ್ಷಗಳ ಬಳಿಕ ದೀಪಾವಳಿ ದಿನವೇ ರೂಪುಗೊಳ್ಳುತ್ತಿದೆ ಈ ಐದು ಯೋಗ, ಬೆಳಕಿನ ಹಬ್ಬ ಬೆಳಗಲಿದೆ ಈ ರಾಶಿಯವರ ಜೀವನ

 ದೀಪಾವಳಿಯ ಶುಭ ದಿನದಂದು ಕೆಲವು ವಿಶೇಷ ಯೋಗಗಳು ರೂಪುಗೊಳ್ಳುತ್ತದೆ. ಈ ಯೋಗವು ವ್ಯಕ್ತಿಯ ಭವಿಷ್ಯವನ್ನೇ ಬದಲಾಯಿಸುತ್ತವೆ. 

Written by - Ranjitha R K | Last Updated : Oct 24, 2022, 08:44 AM IST
  • ದೀಪಾವಳಿ ಹಿಂದೂಗಳಿಗೆ ಬಹಳ ವಿಶೇಷವಾಗಿದೆ
  • ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ದೇವಿಯನ್ನು ವಿಧಿ ವಿಧಾನಗಳಿಂದ ಪೂಜಿಸಲಾಗುತ್ತದೆ.
  • ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ
2000 ವರ್ಷಗಳ ಬಳಿಕ ದೀಪಾವಳಿ  ದಿನವೇ ರೂಪುಗೊಳ್ಳುತ್ತಿದೆ ಈ ಐದು ಯೋಗ,  ಬೆಳಕಿನ ಹಬ್ಬ ಬೆಳಗಲಿದೆ ಈ ರಾಶಿಯವರ ಜೀವನ  title=
diwali horoscope 2022

ಬೆಂಗಳೂರು : ದೀಪಾವಳಿ ಹಿಂದೂಗಳಿಗೆ ಬಹಳ ವಿಶೇಷವಾಗಿದೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ದೇವಿಯನ್ನು ವಿಧಿ ವಿಧಾನಗಳಿಂದ ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮೀ ಮನೆ ಪ್ರವೇಶಿಸಿದರೆ,  ಆ ಕುಟುಂಬ ಸರ್ವ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತದೆ. ಜೀವನದಲ್ಲಿ ಯಾವುದೇ ಕಾರಣಕ್ಕೂ ಯಾವ ಸಮಸ್ಯೆಗಳೂ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದೇ  ಕಾರಣಕ್ಕಾಗಿ ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇನ್ನು ಕೆಲವೊಮ್ಮೆ ಈ  ಶುಭ ದಿನದಂದು ಕೆಲವು ವಿಶೇಷ ಯೋಗಗಳು ರೂಪುಗೊಳ್ಳುತ್ತದೆ. ಈ ಯೋಗವು ವ್ಯಕ್ತಿಯ ಭವಿಷ್ಯವನ್ನೇ ಬದಲಾಯಿಸುತ್ತವೆ. 

ಏಕಕಾಲಕ್ಕೆ 5 ರಾಜಯೋಗ :
ಈ ಬಾರಿಯ ದೀಪಾವಳಿಯಂದು 2000 ವರ್ಷಗಳ ನಂತರ ಏಕಕಾಲಕ್ಕೆ 5 ರಾಜಯೋಗಗಳು ರೂಪುಗೊಳ್ಳುತ್ತಿವೆ. ಇವುಗಳಲ್ಲಿ ಮಾಳವ್ಯ, ಶಶ, ಗಜಕೇಸರಿ, ಹರ್ಷ ಮತ್ತು ವಿಮಲ ಯೋಗಗಳು ಸೇರಿವೆ. ಮತ್ತೊಂದೆಡೆ, ಗುರು, ಶುಕ್ರ, ಶನಿ ಮತ್ತು ಬುಧ ಗ್ರಹಗಳು ತಮ್ಮದೇ ಆದ  ರಾಶಿಯಲ್ಲಿ ಇರುತ್ತವೆ. ಶನಿಯ ದೃಷ್ಟಿ ಗುರುವಿನ ಮೇಲಿರುತ್ತದೆ. ಈ ಹಿನ್ನೆಲೆಯಲ್ಲಿ ದೀಪಾವಳಿಯ ದಿನದಂದು ಶಾಪಿಂಗ್, ವ್ಯಾಪಾರ ವಹಿವಾಟು,  ಹೂಡಿಕೆಗಳು ಮತ್ತು ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಮಂಗಳಕರವಾಗಿರಲಿದೆ ಎಂದು ಹೇಳಲಾಗುತ್ತದೆ. ಈ ರಾಜಯೋಗಗಳ ಪರಿಣಾಮವು ಯಾವ ರಾಶಿಯವರಿಗೆ ಪ್ರಯೋಜನಕಾರಿ  ನೋಡೋಣ . 

ಇದನ್ನೂ ಓದಿ : Diwali 2022: 2000 ವರ್ಷಗಳ ಬಳಿಕ ದೀಪಾವಳಿಯಂದು ಸುಖ-ಸಮೃದ್ಧಿ ಹೆಚ್ಚಿಸಲು ನಿರ್ಮಾಣಗೊಳ್ಳುತ್ತಿವೆ 5 ರಾಜಯೋಗಗಳು

ಕುಂಭ ರಾಶಿ : ದೀಪಾವಳಿಯಂದು, ಈ 5 ರಾಜಯೋಗಗಳು ಈ ರಾಶಿಯ ಜನರ ವೃತ್ತಿ ಮತ್ತು ವ್ಯವಹಾರದಲ್ಲಿ ಭಾರೀ ಯಶಸ್ಸು ತಂದು ಕೊಡಲಿದೆ. ಈ ಅವಧಿಯಲ್ಲಿ ಆರ್ಥಿಕವಾಗಿ  ಸದೃಢರಾಗಿರುತ್ತೀರಿ. ನಿಂತು ಹೋಗಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.  ಈ ಸಮಯದಲ್ಲಿ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಸಮಯ ಅನುಕೂಲಕರವಾಗಿರಲಿದೆ. ವಾಹನ, ಭೂಮಿ, ಕಟ್ಟಡ ಇತ್ಯಾದಿಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇದು ಉತ್ತಮ ಸಮಯ. 

ಸಿಂಹ ರಾಶಿ : 5 ರಾಜಯೋಗಗಳು ದೀಪಾವಳಿಯಂದು ರೂಪುಗೊಳ್ಳುವುದರಿಂದ ಈ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಕೈ ಸೇರದೇ ಬಾಕಿ ಉಳಿದಿದ್ದ ಹಣ ಈ ಸನದರ್ಭದಲ್ಲಿ ಕೈ ಸೇರುವುದು. ಉದ್ಯೋಗಿಗಳ ಆದಾಯವು ಹೆಚ್ಚಾಗುತ್ತದೆ. ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು.  ಷೇರುಗಳು ಮತ್ತು ಲಾಟರಿಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಜನರು ಯಶಸ್ಸನ್ನು ಪಡೆಯಬಹುದು. ದೀರ್ಘಕಾಲದ ಅನಾರೋಗ್ಯದಿಂದ ಪರಿಹಾರ  ಸಿಗಬಹುದು. 

ಇದನ್ನೂ ಓದಿ : Chanakya Niti: ಈ ಸಣ್ಣ ತಪ್ಪುಗಳು ದಾಂಪತ್ಯ ಜೀವನವನ್ನು ಹಾಳುಮಾಡುತ್ತವೆ

ತುಲಾ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ದೀಪಾವಳಿಯು ನಿಮಗೆ ಸಂತೋಷದ ಪ ಬುತ್ತಿಯನ್ನೇ  ಹೊತ್ತು ತರಲಿದೆ. ಇಂದಿನಿಂದ ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಈ ಸಮಯದಲ್ಲಿ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ದೊಡ್ಡ ಮಟ್ಟದ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಬಹುದು. ವ್ಯಾಪಾರದ ಕೆಲಸದಿಂದಾಗಿ ಯಾವುದೇ ಪ್ರಯಾಣವನ್ನು ಮಾಡಬೇಕಾಗಿ ಬರಬಹುದು. 

 

 ( ಸೂಚನೆ : ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News